ಆ್ಯಪ್ನಗರ

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ: ಶರತ್‌ಚಂದ್ರ ರಾಜ್ಯಕ್ಕೆ ಪ್ರಥಮ

ಸಮೀಪದ ಜಾವಳ್ಳಿಯ ಶ್ರೀಅರಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿ ಆರ್‌.ಶರತ್‌ಚಂದ್ರ ಅವರು ಮರು ಮೌಲ್ಯ ಮಾಪನದಿಂದ 6 ಅಂಕಗಳು ಹೆಚ್ಚಾಗಿ ಪಡೆದಿದ್ದು, ಒಟ್ಟು 594(ಶೇ.99) ಅಂಕದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

Vijaya Karnataka 26 May 2019, 5:00 am
ಹೊಳೆಹೊನ್ನೂರು(ಶಿವಮೊಗ್ಗ): ಸಮೀಪದ ಜಾವಳ್ಳಿಯ ಶ್ರೀಅರಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿ ಆರ್‌.ಶರತ್‌ಚಂದ್ರ ಅವರು ಮರು ಮೌಲ್ಯ ಮಾಪನದಿಂದ 6 ಅಂಕಗಳು ಹೆಚ್ಚಾಗಿ ಪಡೆದಿದ್ದು, ಒಟ್ಟು 594(ಶೇ.99) ಅಂಕದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
Vijaya Karnataka Web SMR-25HHR1


ಈ ಮೊದಲು ಬಂದ ಫಲಿತಾಂಶದಲ್ಲಿ 600ಕ್ಕೆ 588 ಅಂಕ ಬಂದಿತ್ತು. ಇದರಿಂದ ಸಮಾಧಾನಗೊಳ್ಳದ ಶರತ್‌ಚಂದ್ರ, ಇಂಗ್ಲಿಷ್‌ ಭಾಷಾ ವಿಷಯದ ಉತ್ತರ ಪತ್ರಿಕೆ ಮರು ಮೌಲ್ಯಮಾಪಕ್ಕೆ ಹಾಕಿದ್ದರಿಂದ 6 ಅಂಕಗಳು ಹೆಚ್ಚಾಗಿ ಬಂದಿದೆ. ಈ ವಿದ್ಯಾರ್ಥಿಯು ಭೌತಶಾಸ್ತ್ರ-100, ರಸಾಯನಶಾಸ್ತ್ರ-100, ಗಣಿತ-100, ಜೀವಶಾಸ್ತ್ರ-100, ಕನ್ನಡ-98 ಹಾಗೂ ಇಂಗ್ಲಿಷ್‌-96 ಅಂಕ ಪಡೆದಿದ್ದಾರೆ.

ಆರ್‌.ಶರತ್‌ಚಂದ್ರ ಸಾಧನೆ: ಸಿಇಟಿ ಪರೀಕ್ಷೆಯಲ್ಲಿ ಕೃಷಿ ವಿಜ್ಞಾನದಲ್ಲಿ ರಾಜ್ಯಕ್ಕೆ 4ನೇ ರಾರ‍ಯಂಕ್‌, ಎಂಜಿನಿಯರಿಂಗ್‌ ವಿಭಾಗದಲ್ಲಿ 42ನೇ ರಾರ‍ಯಂಕ್‌, ಪಶುವೈದ್ಯಕೀಯ ವಿಜ್ಞಾನದಲ್ಲಿ 76ನೇ ರಾರ‍ಯಂಕ್‌ ಹಾಗೂ ಜೆಇಇಯಲ್ಲಿ ಶೇ.97 ಅಂಕ ಪಡೆದು ಕಾಲೇಜಿಗೆ ಉತ್ತಮ ಸಾಧನೆ ಮಾಡಿದ್ದಾರೆ. ಪ್ರಾಂಶುಪಾಲ ಕೆ.ನಾಗರಾಜ್‌, ಸಂಸ್ಥೆ ಅಧ್ಯಕ್ಷ ತಲವಾನೆ ಪ್ರಕಾಶ್‌, ಕಾರ‍್ಯದರ್ಶಿ ವಿ.ದೇವೇಂದ್ರ, ಆಡಳಿತಾಧಿಕಾರಿ ಮಧು ಹಾಗೂ ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ