ಆ್ಯಪ್ನಗರ

ಕೆಲಸದಲ್ಲೇ ದೇವರ ಕಾಣಿ

ಕಾರ್ಮಿಕರಲ್ಲಿ ಕರ್ತವ್ಯದ ಕಳಕಳಿ ಹಾಗೂ ಶ್ರದ್ಧೆ ಇದ್ದರೆ ಮಾತ್ರ ಉನ್ನತ ಸಾಧನೆ ಸಾಧ್ಯ ಎಂದು ಜಿಲ್ಲಾ ರೈಸ್‌ ಮಿಲ್‌ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಎಪಿಎಂಸಿ ಸದಸ್ಯ ಡಾ.ಎನ್‌.ಟಿ.ಸಿ ನಾಗೇಶ್‌ ಅಭಿಪ್ರಾಯ ಪಟ್ಟರು.

Vijaya Karnataka 10 May 2019, 5:00 am
ಭದ್ರಾವತಿ: ಕಾರ್ಮಿಕರಲ್ಲಿ ಕರ್ತವ್ಯದ ಕಳಕಳಿ ಹಾಗೂ ಶ್ರದ್ಧೆ ಇದ್ದರೆ ಮಾತ್ರ ಉನ್ನತ ಸಾಧನೆ ಸಾಧ್ಯ ಎಂದು ಜಿಲ್ಲಾ ರೈಸ್‌ ಮಿಲ್‌ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಎಪಿಎಂಸಿ ಸದಸ್ಯ ಡಾ.ಎನ್‌.ಟಿ.ಸಿ ನಾಗೇಶ್‌ ಅಭಿಪ್ರಾಯ ಪಟ್ಟರು.
Vijaya Karnataka Web SMR-2BDVT2


ಅವರು ಇತ್ತೀಚೆಗೆ ಶ್ರೀಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಏರ್ಪಡಿಸಿದ್ದ 605ನೇ ವಚನ ಮಂಟಪದ ವಿಶೇಷ ಪ್ರವಚನ, ಕಾಯಕ ದಿನ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ನೂತನ ಕಾರ್ಯಕಾರಿ ಸಮಿತಿ ಪರಿಚಯ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.

ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಶುಭ ಮರವಂತೆ ಉಪನ್ಯಾಸ ನೀಡಿ, ವಚನಗಳ ದಿನವನ್ನು ಕಾಯಕ ದಿನವಾಗಿ ಆಚರಿಸಲಾಗುತ್ತಿದೆ. ಕಾಯಕ ಎಂದರೆ ಕೇವಲ ಕೆಲಸವಲ್ಲ, ಕಾಯಕಕ್ಕೂ ಕೈಲಾಸಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೆಲಸದ ಮೂಲಕ ದೇವರನ್ನು ಕಾಣುವುದು ಸರಿಯಾದ ಸಂಗತಿ. ಶ್ರಮವಹಿಸಿ ಯಾರು ಕಾಯಕ ಮಾಡುತ್ತಾರೋ ಅವರು ಜೀವನದಲ್ಲಿ ಶಾಂತಿ, ನೆಮ್ಮದಿಯಿಂದ ಬಾಳುತ್ತಾರೆ ಎಂದರು. ನಗರಸಭೆ ಆಯುಕ್ತ ವಿ.ಮನೋಹರ್‌ ಕಾರ್ಯಕ್ರಮ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಎಚ್‌.ಎನ್‌. ಮಹಾರುದ್ರ ಅಧ್ಯಕ್ಷ ತೆ ವಹಿಸಿದ್ದರು. ನಗರದ ಉದ್ದಿಮೆದಾರ ಬಿ.ಕೆ.ಜಗನ್ನಾಥ್‌ ಮಾತನಾಡಿದರು. ಬಸನಗೌಡ ಮಾಳಗಿ ಪ್ರಾಸ್ತಾವಿಕ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್‌ ನೂತನ ಅಧ್ಯಕ್ಷ ಎಂ.ವಿರುಪಾಕ್ಷ ಪ್ಪ ಅಧಿಕಾರ ಸ್ವೀಕಾರ ಮಾಡಿ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಕದಳಿ ವೇದಿಕೆಯಿಂದ ವಚನ ಪ್ರಾರ್ಥನೆ ನೇರವೇರಿತು. ಎನ್‌.ಎಸ್‌.ಮಲ್ಲಿಕಾರ್ಜುನಯ್ಯ ಸ್ವಾಗತಿಸಿ, ಕೆ.ತಿಮ್ಮಪ್ಪ ವಂದಿಸಿದರು. ಅರಳಿಹಳ್ಳಿ ಅಣ್ಣಪ್ಪ ನಿರೂಪಿಸಿದರು. ಕೆ.ಬಸವರಾಜಪ್ಪ ಅತಿಥಿ ಪರಿಚಯಿಸಿದರು. ಇದೇ ಸಂದರ್ಭ ಸಾರ್ವಜನಿಕ ಆಸ್ಪತ್ರೆ ಶುಶ್ರೂಷಕಿ ಲಕ್ಷ್ಮೀ ಶ್ರೀಕಾಂತ್‌ ಮತ್ತು ನಗರಸಭೆಯ ಸ್ವಚ್ಛತಾ ವಿಭಾಗದ ಶಾರದಮ್ಮ ಅವರನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ