ಆ್ಯಪ್ನಗರ

ದಾಖಲೆಯಿಲ್ಲದ 30 ಲಕ್ಷ ನಗದು ವಶ

ಲೋಕಸಭೆ ಉಪ ಚುನಾವಣೆ ಬಿರುಸಿನ ಪ್ರಚಾರ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಮದ್ಯ ಹಾಗೂ ಕಾಂಚಾಣ ಬಲು ಜೋರಾಗಿ ಸದ್ದು ಮಾಡುತ್ತಿದೆ. ಮಂಗಳವಾರ ತಡ ರಾತ್ರಿ 30 ಲಕ್ಷ ರೂ. ನಗದು ಹಾಗೂ 59 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಇದುವರೆಗೆ 187 ಪ್ರಕರಣಗಳು ದಾಖಲಾಗಿವೆ.

Vijaya Karnataka 25 Oct 2018, 5:00 am
ಶಿವಮೊಗ್ಗ : ಲೋಕಸಭೆ ಉಪ ಚುನಾವಣೆ ಬಿರುಸಿನ ಪ್ರಚಾರ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಮದ್ಯ ಹಾಗೂ ಕಾಂಚಾಣ ಬಲು ಜೋರಾಗಿ ಸದ್ದು ಮಾಡುತ್ತಿದೆ. ಮಂಗಳವಾರ ತಡ ರಾತ್ರಿ 30 ಲಕ್ಷ ರೂ. ನಗದು ಹಾಗೂ 59 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಇದುವರೆಗೆ 187 ಪ್ರಕರಣಗಳು ದಾಖಲಾಗಿವೆ.
Vijaya Karnataka Web BNG-SMG-2410-2-15-24SMG-MP ELETION


ದಾಖಲೆಯಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 30 ಲಕ್ಷ ರೂ. ನಗದನ್ನು ಮಡಿಕೆ ಚೀಲೂರು ಚೆಕ್‌ಪೋಸ್ಟ್‌ ಸಮೀಪ ಮಂಗಳವಾರ ತಡರಾತ್ರಿ ವಶಕ್ಕೆ ಪಡೆಯಲಾಗಿದೆ.

ಶ್ರೀನಿವಾಸ್‌ ಎಂಬಾತನಿಂದ ಹಣ ವಶಕ್ಕೆ ಪಡೆಯಲಾಗಿದ್ದು, ಹಣವನ್ನು ಜಿಲ್ಲಾ ಖಜಾನೆಯಲ್ಲಿ ಇರಿಸಲಾಗಿದೆ. ಮಡಿಕೆ ಚೀಲೂರು ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಹಾಗೂ ಎಸ್‌ಎಫ್‌ ತಂಡ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಕಾರನ್ನು ಪರಿಶೀಲಿಸಿದಾಗ ಭಾರಿ ದೊಡ್ಡ ಪ್ರಮಾಣದ ಹಣವಿರುವುದು ಕಂಡುಬಂದಿದೆ. ತಕ್ಷಣ ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಹಣಕ್ಕೆ ಪೂರಕವಾದ ಯಾವುದೇ ದಾಖಲೆಗಳು ಇಲ್ಲದಿರುವುದನ್ನು ಕಂಡು ಗ್ರಾಮಾಂತರ ಪೊಲೀಸರು ಆರೋಪಿ ಮತ್ತು ಹಣವನ್ನು ವಶಕ್ಕೆ ಪಡೆದಿದ್ದಾರೆ.

ಹಣ ಸಾಗಿಸುತ್ತಿದ್ದ ಶ್ರೀನಿವಾಸ್‌, ತಾನು ಅಡಕೆ ವರ್ತಕನಾಗಿರುವುದಾಗಿ ಹೇಳಿಕೊಂಡಿದ್ದಾನೆ. ದಾಖಲೆ ಪರಿಶೀಲನೆ ಸಂಬಂಧ ಚುನಾವಣಾ ಆಯೋಗಕ್ಕೆ ಒಪ್ಪಿಸಲಾಗಿದೆ.

* 59 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ಜಪ್ತಿ:

ಚುನಾವಣೆ ಕಿಚ್ಚು ದಿನದಿಂದ ದಿನಕ್ಕೆ ಏರುತ್ತಿದ್ದು, ಇದರೊಂದಿಗೆ ಅಕ್ರಮ ಮದ್ಯದ ಘಮಲು ಹೆಚ್ಚುತ್ತಿದೆ. ಇದುವರೆಗೆ ಶಿವಮೊಗ್ಗ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂದಾಜು 59 ಲಕ್ಷ ರೂ. ಮೌಲ್ಯದ 9925.62 ಲೀಟರ್‌ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ನಾನಾ ಠಾಣೆಯಲ್ಲಿ 186 ಪ್ರಕರಣಗಳು ದಾಖಲಾಗಿವೆ.

===============


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ