ಆ್ಯಪ್ನಗರ

ಹೊಂಗಿರಣದಲ್ಲಿ ಶಾಲೆ ನಾಯಕರ ಆಯ್ಕೆ

ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಶಾಲೆಯಲ್ಲಿ ಶನಿವಾರ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆದು ಶಾಲಾ ನಾಯಕನನ್ನು ಆರಿಸಲಾಯಿತು. ಈ ಮೂಲಕ ಶಾಲಾಮಕ್ಕಳು ಪ್ರಜಾಪ್ರಭುತ್ವ ಮಾದರಿ ಚುನಾವಣೆಯ ಪ್ರತ್ಯಕ್ಷ ಅನುಭವ ಪಡೆದುಕೊಂಡರು.

Vijaya Karnataka 25 Jun 2019, 5:00 am
ಸಾಗರ: ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಶಾಲೆಯಲ್ಲಿ ಶನಿವಾರ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆದು ಶಾಲಾ ನಾಯಕನನ್ನು ಆರಿಸಲಾಯಿತು. ಈ ಮೂಲಕ ಶಾಲಾಮಕ್ಕಳು ಪ್ರಜಾಪ್ರಭುತ್ವ ಮಾದರಿ ಚುನಾವಣೆಯ ಪ್ರತ್ಯಕ್ಷ ಅನುಭವ ಪಡೆದುಕೊಂಡರು.
Vijaya Karnataka Web selection of school leaders in posture
ಹೊಂಗಿರಣದಲ್ಲಿ ಶಾಲೆ ನಾಯಕರ ಆಯ್ಕೆ


ಜೂ.10ರಂದು ಚುನಾವಣೆ ಅಧಿಸೂಚನೆ ಹೊರಡಿಸುವುದರೊಂದಿಗೆ ಆರಂಭವಾದ ಚುನಾವಣೆ ಪ್ರಕ್ರಿಯೆ ಶನಿವಾರ ಮತದಾನ, ಮತಎಣಿಕೆ,ಫಲಿತಾಂಶ ಘೋಷಣೆಯೊಂದಿಗೆ ಮುಕ್ತಾಯವಾಯಿತು.

ಉಮೇದುವಾರಿಕೆ ಸಲ್ಲಿಕೆ, ನಾಮಪತ್ರ ಪರಿಶೀಲನೆ, ಬಹಿರಂಗ ಪ್ರಚಾರ, ಮತದಾನ, ಮತಎಣಿಕೆ, ಫಲಿತಾಂಶ ಪ್ರಕಟಣೆಯವರೆಗೆ ಎಲ್ಲ ಪ್ರಕ್ರಿಯೆಗಳನ್ನು ನಡೆಸಲಾಯಿತು. ಆ ಮೂಲಕ ವಿದ್ಯಾರ್ಥಿಗಳಿಗೆ ಅವುಗಳ ಮಹತ್ವ ತಿಳಿಸಲಾಯಿತು.ಅತ್ಯಂತ ಉತ್ಸಾಹದಿಂದ ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಮುಖ್ಯ ಚುನಾವಣಾಧಿಕಾರಿಯಾಗಿ ಉಪನ್ಯಾಸಕ ಸಂದೀಪ ಶೆಟ್ಟಿ, ಚುನಾವಣಾ ವೀಕ್ಷ ಕರಾಗಿ ಅರವಿಂದ್‌ ಗುರ್ಜರ್‌ ಕಾರ್ಯನಿರ್ವಹಿದರು. ಶಿಕ್ಷ ಕರಾದ ನವೀನ್‌, ರಾಜೀವ್‌, ಶ್ರೀಧರ್‌ ಭಟ್‌, ಉಮೇಶ್‌,ಗೌತಮಿ , ಸುನಿಲ್‌,ಕಾವ್ಯ ಮತ್ತಿತರರು ಚುನಾವಣಾ ಕಾರ್ಯದಲ್ಲಿ ಕೈಜೋಡಿಸಿದ್ದರು.

ಮೂವರು ವಿದ್ಯಾರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಅಕ್ಷ ಯ್‌ ಕುಮಾರ್‌ ಅತಿ ಹೆಚ್ಚು ಮತಗಳನ್ನು ಪಡೆದು ಶಾಲಾನಾಯಕನಾಗಿ ಚುನಾಯಿತರಾದರು. ನಿಲೇಂದ್ರ ಹಾಗೂ ಆತ್ಮಶ್ರೀ ಎರಡನೇ ಹಾಗೂ ಮೂರನೇ ಸ್ಥಾನಕ್ಕೆ ಆಯ್ಕೆಯಾದರು. ಪ್ರಾಚಾರ್ಯೆ ಶೋಭಾ ರವೀಂದ್ರ, ಶಿಕ್ಷ ಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ