ಆ್ಯಪ್ನಗರ

ಸಾಗರ ತಾಲೂಕು ಸರಕಾರಿ ನೌಕರರ ಸಂಘಕ್ಕೆ ಆಯ್ಕೆ

ಬಿರುಸಿನ ಸ್ಪರ್ಧೆಗೆ ಕಾರಣವಾಗಿದ್ದ ಇಲ್ಲಿನ ಸರಕಾರಿ ನೌಕರರ ಸಂಘದ ಚುನಾವಣೆ ನಂತರ ವಿವಿಧ ಪದಾಧಿಕಾರಿಗಳ ಆಯ್ಕೆಗೂ ಗುರುವಾರ ಮತದಾನ ನಡೆದಿದ್ದು, ಉಪನ್ಯಾಸಕ ಜಿ.ಪರಮೇಶ್ವರಪ್ಪ ಅವರು ಎದುರಾಳಿ ಡಿ.ಗಣಪತಪ್ಪ ಅವರನ್ನು ಸೋಲಿಸಿ ತಾಲೂಕು ಘಟಕದ ನೂತನ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ.

Vijaya Karnataka 28 Jun 2019, 5:00 am
ಸಾಗರ: ಬಿರುಸಿನ ಸ್ಪರ್ಧೆಗೆ ಕಾರಣವಾಗಿದ್ದ ಇಲ್ಲಿನ ಸರಕಾರಿ ನೌಕರರ ಸಂಘದ ಚುನಾವಣೆ ನಂತರ ವಿವಿಧ ಪದಾಧಿಕಾರಿಗಳ ಆಯ್ಕೆಗೂ ಗುರುವಾರ ಮತದಾನ ನಡೆದಿದ್ದು, ಉಪನ್ಯಾಸಕ ಜಿ.ಪರಮೇಶ್ವರಪ್ಪ ಅವರು ಎದುರಾಳಿ ಡಿ.ಗಣಪತಪ್ಪ ಅವರನ್ನು ಸೋಲಿಸಿ ತಾಲೂಕು ಘಟಕದ ನೂತನ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ.
Vijaya Karnataka Web SMR-27SGR6


ರಾಜ್ಯ ಪರಿಷತ್‌ಗೆ ಮ.ಸ.ನಂಜುಂಡಸ್ವಾಮಿ, ಸಂಘದ ಖಜಾಂಚಿಯಾಗಿ ಚಂದ್ರಶೇಖರ್‌ ಚುನಾಯಿತರಾದರು. ಸಮಿತಿ ನಿರ್ದೇಶಕರ ಸ್ಥಾನಗಳಲ್ಲಿ 24 ಜನರು 20 ಇಲಾಖೆಗಳಿಂದ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಉಳಿದ ಆರು ಇಲಾಖೆಗಳ 8 ಸ್ಥಾನಗಳಿಗೆ ಜೂ.14ರಂದು ಚುನಾವಣೆ ನಡೆದಿತ್ತು. ಗುರುವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ 21 ಮತ ಪಡೆದ ಜಿ.ಪರಮೇಶ್ವರಪ್ಪ ಜಯಭೇರಿ ಬಾರಿಸಿದರೆ, 11 ಮತ ಗಳಿಸಿದ ಡಿ.ಗಣಪತಪ್ಪ ಸೋಲು ಅನುಭವಿಸುವಂತಾಯಿತು.

ಮ.ಸ. ನಂಜುಂಡಸ್ವಾಮಿ 20 ಮತ ಪಡೆದರೆ ಡಿ.ಕೆ.ಅಣ್ಣಪ್ಪ 12 ಮತ ತಮ್ಮದಾಗಿಸಿಕೊಂಡರು. ತೀವ್ರ ಪೈಪೋಟಿಯ ಖಜಾಂಚಿ ಸ್ಥಾನಕ್ಕೆ 15 ಮತ ಪಡೆದ ಮಾಲತೇಶ ಅವರನ್ನು 17 ಮತ ಗಳಿಸಿದ ಚಂದ್ರಶೇಖರ್‌ ಎರಡು ಮತಗಳಿಂದ ಸೋಲಿಸಿದರು.

ವಿಜಯಶಾಲಿಯಾದ ಜಿ.ಪರಮೇಶ್ವರಪ್ಪ ಅವರನ್ನು ಸರಕಾರಿ ಪಿಯು ಕಾಲೇಜು ಪ್ರಾಂಶುಪಾಲ ಶಂಕರಮೂರ್ತಿ ಮತ್ತು ಉಪನ್ಯಾಸಕರು ಅಭಿನಂದಿಸಿದರು. ಚುನಾವಣಾಧಿಕಾರಿಯಾಗಿ ಎಂ.ರಾಮಪ್ಪ ಮತ್ತು ಎಸ್‌.ಎನ್‌.ಮಂಜಪ್ಪ ಕರ್ತವ್ಯ ನಿರ್ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ