ಆ್ಯಪ್ನಗರ

ಹಿರಿಯ ಸಮಾಜವಾದಿ ಸುಭಾಷ್‌ಚಂದ್ರ ನಿಧನ

ಇಲ್ಲಿನ ಭೀಮನಕೋಣೆ ರಸ್ತೆಯ ಗಾಂಧೀನಗರದ ವಾಸಿ ಹಿರಿಯ ಸಮಾಜವಾದಿ, ಸಹಕಾರೀ ಧುರೀಣ ಯು.ಎಲ್‌.ಸುಭಾಷ್‌ಚಂದ್ರ (84) ಬುಧವಾರ ನಿಧನಹೊಂದಿದರು. ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.

Vijaya Karnataka 14 Mar 2019, 5:00 am
ಸಾಗರ: ಇಲ್ಲಿನ ಭೀಮನಕೋಣೆ ರಸ್ತೆಯ ಗಾಂಧೀನಗರದ ವಾಸಿ ಹಿರಿಯ ಸಮಾಜವಾದಿ, ಸಹಕಾರೀ ಧುರೀಣ ಯು.ಎಲ್‌.ಸುಭಾಷ್‌ಚಂದ್ರ (84) ಬುಧವಾರ ನಿಧನಹೊಂದಿದರು. ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.
Vijaya Karnataka Web senior socialist subashchandra death
ಹಿರಿಯ ಸಮಾಜವಾದಿ ಸುಭಾಷ್‌ಚಂದ್ರ ನಿಧನ


ಇಲ್ಲಿನ ಗಣಪತಿ ಅರ್ಬನ್‌ ಕೋ ಆಪರೇಟೀವ್‌ ಬ್ಯಾಂಕ್‌ನಲ್ಲಿ ಸುಮಾರು 10 ಬಾರಿ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿರುವ ಸುಭಾಷ್‌ಚಂದ್ರ ಅವರು ಆಗಿನ ಪುರಸಭೆಯಲ್ಲಿ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ, ವಿವಿಧ ಶಿಕ್ಷ ಣ ಸಂಸ್ಥೆ, ಶ್ರೀಮಾರಿಕಾಂಬಾ ವ್ಯವಸ್ಥಾಪನಾ ಸಮಿತಿ ಸೇರಿದಂತೆ ಹಲವು ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಪ್ರಾರಂಭದಲ್ಲಿ ಸಮಾಜವಾದದಲ್ಲಿ ಗುರುತಿಸಿಕೊಂಡಿದ್ದ ಸುಭಾಷ್‌ಚಂದ್ರ ಅವರು ಎಸ್‌.ಎಸ್‌.ಕುಮಟಾ ಅವರ ಆಪ್ತರಾಗಿದ್ದರು. ನಂತರ ಬಿಜೆಪಿಯಿಂದ ಶಾಸಕ ಸ್ಥಾನಕ್ಕೆ ಒಮ್ಮೆ ಸ್ಪರ್ಧಿಸಿದ್ದರು.

ಸಂತಾಪ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಎಚ್‌.ಹಾಲಪ್ಪ, ಗಣಪತಿ ಬ್ಯಾಂಕ್‌ ಆಡಳಿತ ಮಂಡಳಿ ಹಾಗೂ ನೌಕರರು, ಸಿಬ್ಬಂದಿ, ಪಿಗ್ಮಿ ಸಂಗ್ರಾಹಕರ ಸಂಘ, ಶ್ರೀ ಮಾರಿಕಾಂಬಾ ವ್ಯವಸ್ಥಾಪನ ಸಮಿತಿ, ಖಾಸಗಿ ಸಾರಿಗೆ ಸಂಸ್ಥೆ ಮುಂತಾದ ಸಂಘಟನೆಗಳು ಸಂತಾಪ ಸೂಚಿಸಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ