ಆ್ಯಪ್ನಗರ

ಯೋಗಾಭ್ಯಾಸಕ್ಕೆ ಸಮಯ ಮೀಸಲಿಡಿ

ಮನಸ್ಸು ಮತ್ತು ದೇಹವನ್ನು ಒಂದೇ ಕೇಂದ್ರದಲ್ಲಿ ಕೆಲಸ ಮಾಡಿಸುವ ಮಹಾನ್‌ ಸಾಧನ ಯೋಗ ಎಂದು ಯೋಗಪಟು ಸುಬ್ರಮಣ್ಯ ಹೇಳಿದರು.

Vijaya Karnataka 23 Jun 2019, 5:00 am
ಹೊಸನಗರ: ಮನಸ್ಸು ಮತ್ತು ದೇಹವನ್ನು ಒಂದೇ ಕೇಂದ್ರದಲ್ಲಿ ಕೆಲಸ ಮಾಡಿಸುವ ಮಹಾನ್‌ ಸಾಧನ ಯೋಗ ಎಂದು ಯೋಗಪಟು ಸುಬ್ರಮಣ್ಯ ಹೇಳಿದರು.
Vijaya Karnataka Web SMR-21HOSP7


ಇಲ್ಲಿನ ಗುರೂಜಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಯೋಗ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಿತ್ಯ ಯೋಗ ಮಾಡುವುದರಿಂದ ಆರೋಗ್ಯ ಸ್ಥಿರವಾಗುತ್ತದೆ. ನಿತ್ಯವೂ ನಮ್ಮ ಕೆಲಸ ಕಾರ‍್ಯ ಮಾಡುವಾಗ ವಿವಿಧ ಯೋಗಾಸನಗಳನ್ನು ನಮಗರಿವಿಲ್ಲದೇ ಮಾಡಿರುತ್ತೇವೆ. ಆದರೆ ಯೋಗಾಸನದ ಪರಿಪೂರ್ಣ ಲಾಭ ಸಿಗಬೇಕೆಂದರೆ ಆಸನದ ಜತೆಗೆ ಉಸಿರಾಟದ ಪ್ರಕ್ರಿಯೆ ಜತೆಗೂಡಬೇಕಾದದ್ದು ಅತಿ ಮುಖ್ಯ ಎಂದರು.

ವಿದ್ಯಾರ್ಥಿಗಳು ನಿತ್ಯ ಯೋಗ ಮಾಡುವುದರಿಂದ ಅಧ್ಯಯನದಲ್ಲಿ ಏಕಾಗ್ರತೆ ಮೂಡುತ್ತದೆ. ಸದೃಢ ಮನಸ್ಸು ಹಾಗೂ ಶರೀರಕ್ಕೆ ಯೋಗ ಸಹಕಾರಿ.ನಿತ್ಯ ಕೆಲಹೊತ್ತು ಯೋಗಾಭ್ಯಾಸಕ್ಕೆ ಸಮಯ ಮೀಸಲಿಡಿ ಎಂದರು. ಸಂಸ್ಥೆ ಅಧ್ಯಕ್ಷ ಸುದೇಶ ಕಾಮತ್‌, ಪ್ರಾಚಾರ‍್ಯ ರಾಘವೇಂದ್ರ ಭಟ್‌, ಕಾರ‍್ಯದರ್ಶಿ ಶಾಂತಮೂರ್ತಿ, ನಿರ್ದೇಶಕ ಸದಾಶಿವ ಶ್ರೇಷ್ಠಿ, ನಾಗೇಶ್‌, ಪೋಷಕರು ಇದ್ದರು. ಅನನ್ಯ ಪ್ರಾರ್ಥಿಸಿ, ಭೂಮಿಕ ಸ್ವಾಗತಿಸಿದರು. ಪ್ರಮೋದ್‌ ನಿರೂಪಿಸಿ, ಮೋಹನ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ