ಆ್ಯಪ್ನಗರ

ಭೂಮಾಪಕರಿಗೆ ಮಾಸಿಕ ಗುರಿ ನಿಗದಿ ಅವೈಜ್ಞಾನಿಕ

ಭೂ ಮಾಪಕರಿಗೆ ಮಾಸಿಕ ಗುರಿ ನಿಗದಿಸಿರುವುದು ಅವೈಜ್ಞಾನಿಕ ಕ್ರಮವಾಗಿದ್ದು ಸರಕಾರ ತಕ್ಷಣ ಈ ಆದೇಶ ಹಿಂದಕ್ಕೆ ಪಡೆಯಬೇಕು. ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ತಾಲೂಕಿನ ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಾರ‍್ಯ ನಿರ್ವಾಹಕ ನೌಕರರು ಕಪ್ಪು ಪಟ್ಟಿ ಧರಿಸಿ ಕಾರ‍್ಯ ನಿರ್ವಹಿಸುವ ಮೂಲಕ ಪ್ರತಿಭಟಿಸಿದರು.

Vijaya Karnataka 24 Aug 2019, 5:00 am
ತೀರ್ಥಹಳ್ಳಿ: ಭೂ ಮಾಪಕರಿಗೆ ಮಾಸಿಕ ಗುರಿ ನಿಗದಿಸಿರುವುದು ಅವೈಜ್ಞಾನಿಕ ಕ್ರಮವಾಗಿದ್ದು ಸರಕಾರ ತಕ್ಷಣ ಈ ಆದೇಶ ಹಿಂದಕ್ಕೆ ಪಡೆಯಬೇಕು. ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ತಾಲೂಕಿನ ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಾರ‍್ಯ ನಿರ್ವಾಹಕ ನೌಕರರು ಕಪ್ಪು ಪಟ್ಟಿ ಧರಿಸಿ ಕಾರ‍್ಯ ನಿರ್ವಹಿಸುವ ಮೂಲಕ ಪ್ರತಿಭಟಿಸಿದರು.
Vijaya Karnataka Web SMR-23TTH3


ಆಗಸ್ಟ್‌ 19ರಿಂದ ಪ್ರತಿಭಟನೆ ಆರಂಭವಾಗಿದ್ದು 31ರವರೆಗೆ ಕಪ್ಪುಪಟ್ಟಿಧರಿಸಿ ಪ್ರತಿಭಟನೆ ಮುಂದುವರಿಸಲಿದ್ದಾರೆ. ಕರ್ನಾಟಕ ರಾಜ್ಯ ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಾರ‍್ಯ ನಿರ್ವಾಹಕ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಕಪ್ಪುಪಟ್ಟಿಧರಿಸಿ ಕಾರ‍್ಯನಿರ್ವಹಿಸುವ ನೌಕರರು ಸೆ.4ರಂದು ಬೆಂಗಳೂರು ಚಲೋ ಪ್ರತಿಭಟನೆ ನಡೆಸಲಿದ್ದಾರೆ.

ಈ ಹಿಂದೆ ಮಾಸಿಕ 23 ಕಡತಗಳ ಗುರಿ ನಿಗದಿಪಡಿಸಲಾಗಿತ್ತು. ಮಾಸಿಕ 5ರಿಂದ 8 ರಜೆ ದಿನಗಳಿದ್ದು ಹಲವು ಭೂ ವ್ಯಾಜ್ಯಗಳು ಇರುತ್ತವೆ. ಸರಕಾರ ನಿಗದಿಸಿದ ಮಾಸಿಕ ಗುರಿ ತಲುಪುವುದು ಭೂ ಮಾಪಕರಿಗೆ ಕಷ್ಟವಾಗಿದೆ. ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವಂತಹ ನಿಯಮಗಳು ಮಾರಕವಾಗಿದೆ ಎಂದು ಪ್ರತಿಭಟನೆ ನಿರತ ನೌಕರರು ದೂರಿದರು.

ಅಗತ್ಯಕ್ಕೆ ತಕ್ಕಷ್ಟು ಭೂ ಮಾಪಕರನ್ನು ನೇಮಕ ಮಾಡಬೇಕು. ರಾರ‍ಯಂಕಿಂಗ್‌ ಆಧರಿಸಿ ನೌಕರರ ವರ್ಗಾವಣೆ ಮಾಡುತ್ತಿರುವ ಪದ್ಧತಿ ರದ್ದುಪಡಿಸಬೇಕು. ಕಾರ‍್ಯ ನಿರ್ವಾಹಕ ಹುದ್ದೆಗಳಿಗೆ ಮುಂಬಡ್ತಿ ನೀಡಬೇಕು. ನೌಕರರಿಗೆ ತಾಂತ್ರಿಕ ವೇತನ ಶ್ರೇಣಿ ಒದಗಿಸಬೇಕು. ನೌಕರರ ಬೇಡಿಕೆ ಈಡೇರದಿದ್ದಲ್ಲಿ ಬೆಂಗಳೂರು ಚಲೋ ಪ್ರತಿಭಟನೆ ನಡೆಸಲಾಗುತ್ತದೆ ಎಂದು ನೌಕರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಾರ‍್ಯ ನಿರ್ವಾಹಕ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಸುಷ್ಮಾ, ಹಿರಿಯ ಪರಿವೇಕ್ಷಕ ಮಹಾದೇವ್‌, ಭೂ ಮಾಪಕರಾದ ರಾಜ್‌ಕುಮಾರ್‌, ಎನ್‌.ಸಿ. ಮಹೇಶ್‌, ಮಹಾಂತೇಶ್‌ ಭೋವಿ, ಶರತ್‌ಕುಮಾರ್‌, ನೂರ್‌ವಸೀಮಾ, ಅನಿಲ್‌ಕುಮಾರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ