ಆ್ಯಪ್ನಗರ

‘ಶರಾವತಿ ಕಣಿವೆ ಉಳಿಸಿ’ ಜನಾಂದೋಲನಕ್ಕೆ ಕರೆ

ವೃಕ್ಷ ಲಕ್ಷ ಆಂದೋಲನ ಶರಾವತಿ ಕಣಿವೆ ಸಂರಕ್ಷ ಣೆಗಾಗಿ 'ಶರಾವತಿ ಕಣಿವೆ ಉಳಿಸಿ' ಜನಾಂದೋಲನಕ್ಕೆ ಕರೆ ನೀಡಿದೆ.

Vijaya Karnataka 7 Jul 2019, 5:00 am
ಸಾಗರ: ವೃಕ್ಷ ಲಕ್ಷ ಆಂದೋಲನ ಶರಾವತಿ ಕಣಿವೆ ಸಂರಕ್ಷ ಣೆಗಾಗಿ 'ಶರಾವತಿ ಕಣಿವೆ ಉಳಿಸಿ' ಜನಾಂದೋಲನಕ್ಕೆ ಕರೆ ನೀಡಿದೆ.
Vijaya Karnataka Web sharavathi valley save call for mobilization
‘ಶರಾವತಿ ಕಣಿವೆ ಉಳಿಸಿ’ ಜನಾಂದೋಲನಕ್ಕೆ ಕರೆ


ಶರಾವತಿ ನದಿ ನೀರು ಬೆಂಗಳೂರಿಗೆ ಸಾಗಿಸುವ ರಾಜ್ಯ ಸರಕಾರದ ಯೋಜನೆಗೆ ಬೃಹತ್‌ ಜನ ವಿರೋಧ ಪ್ರಕಟವಾಗಿದೆ. ಶರಾವತಿ ಉಳಿಸಿ ಹೋರಾಟದಲ್ಲಿ ಸಾಗರ, ಸೊರಬ, ಹೊಸನಗರದ ಪರಿಸರ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಲ್ಲ ಪಕ್ಷ ಪಂಗಡ, ತಾತ್ವಿಕ ಭಿನ್ನಾಭಿಪ್ರಾಯ ಮರೆತು ಮಲೆನಾಡು ಒಂದಾಗಿ ಶರಾವತಿ ಉಳಿಸಿ ಹೋರಾಟಕ್ಕೆ ಇಳಿಯಬೇಕು ಎಂದು ಕರೆ ನೀಡಲಾಗಿದೆ.

ಮಲೆನಾಡಿನ ಜಿಲ್ಲೆಗಳ ಶಾಸಕರು, ಸಂಸತ್‌ ಸದಸ್ಯರು ಶರಾವತಿ ತಿರುವು ಯೋಜನೆ ಸೇರಿದಂತೆ ಪಶ್ಚಿಮಘಟ್ಟದ ನದಿಗಳ ದಿಕ್ಕು ತಿರುಗಿಸುವ ಯೋಜನೆ ತಡೆಯಲು ಶಾಸನ ಸಭೆಗಳಲ್ಲಿ ಒತ್ತಡ ಹಾಕಬೇಕೆಂದು ಆಂದೋಲನದ ನೇತಾರರಾದ ಅನಂತ ಹೆಗಡೆ ಅಶೀಸರ, ಪ್ರೊ. ಬಿ.ಎಂ. ಕುಮಾರಸ್ವಾಮಿ, ವಿಜ್ಞಾನಿಗಳಾದ ಡಾ. ಕೇಶವ ಕೊರ್ಸೆ, ಡಾ. ಟಿ. ವಿ. ರಾಮಚಂದ್ರ, ಬಿ. ಎಚ್‌. ರಾಘವೇಂದ್ರ, ಕೆ. ವೆಂಕಟೇಶ್‌, ರವಿ ಹನಿಯಾ, ಎಂ. ಆರ್‌. ಪಾಟೀಲ್‌, ಶ್ರೀಪಾದ ಬಿಚ್ಚುಗತ್ತಿ ಮತ್ತಿತರರು ಮುಖ್ಯ ಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಈ ಕುರಿತು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌, ಮಾಜಿ ಪರಿಸರ ಸಚಿವ ಜೈರಾಂ ರಮೇಶ ಅವರಿಗೆ ನವದೆಹಲಿಯಲ್ಲಿ ಅನಂತ ಹೆಗಡೆ ಅಶೀಸರ ನೇತೃತ್ವದ ವೃಕ್ಷ ಲಕ್ಷ ನಿಯೋಗ ಮನವಿ ಸಲ್ಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ