ಆ್ಯಪ್ನಗರ

18ಕ್ಕೆ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ ಗ್ರಂಥ ಅನಾವರಣ

ಕುರುಬರ ಸಾಂಸ್ಕೃತಿಕ ಪರಿಷತ್‌, ಶಿವಮೊಗ್ಗ ಜಿಲ್ಲಾ ಅಭಿಮಾನಿಗಳ ಬಳಗದಿಂದ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯಲ್ಲಿ ಬಿಡುಗಡೆಯಾಗಿರುವ 13 ಗ್ರಂಥಗಳ ಅನಾವರಣ ಸಮಾರಂಭ ಫೆ.18ರಂದು ಸಂಜೆ 4ಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕುರುಬರ ಸಮಾಜದ ಮುಖಂಡ ಕೆ.ರಂಗನಾಥ್‌ ಹೇಳಿದರು.

Vijaya Karnataka 15 Feb 2019, 5:00 am
ಶಿವಮೊಗ್ಗ: ಕುರುಬರ ಸಾಂಸ್ಕೃತಿಕ ಪರಿಷತ್‌, ಶಿವಮೊಗ್ಗ ಜಿಲ್ಲಾ ಅಭಿಮಾನಿಗಳ ಬಳಗದಿಂದ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯಲ್ಲಿ ಬಿಡುಗಡೆಯಾಗಿರುವ 13 ಗ್ರಂಥಗಳ ಅನಾವರಣ ಸಮಾರಂಭ ಫೆ.18ರಂದು ಸಂಜೆ 4ಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕುರುಬರ ಸಮಾಜದ ಮುಖಂಡ ಕೆ.ರಂಗನಾಥ್‌ ಹೇಳಿದರು.
Vijaya Karnataka Web shepherds culture darshan
18ಕ್ಕೆ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ ಗ್ರಂಥ ಅನಾವರಣ


ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿ, ಗ್ರಂಥಗಳ ಅನಾವರಣ ಸಮಾರಂಭದ ಸಾನ್ನಿಧ್ಯವನ್ನು ಕಾಗಿನೆಲೆ ಶ್ರೀ ನಿರಂಜನಾನಂದಪುರಿ ವಹಿಸಲಿದ್ದಾರೆ. ಮಾಜಿ ಸಚಿವ ಹಾಗೂ ಶಾಸಕ ಎಚ್‌.ಎಂ.ರೇವಣ್ಣ ಗ್ರಂಥಗಳ ಅನಾವರಣಗೊಳಿಸುವರು. ಶಾಸಕ ಕೆ.ಎಸ್‌.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ವಿಧಾನಪರಿಷತ್‌ ಸದಸ್ಯ ಆರ್‌.ಪ್ರಸನ್ನಕುಮಾರ್‌, ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಸೇರಿದಂತೆ ಗಣ್ಯರು ಭಾಗವಹಿಸುವರು ಎಂದರು.

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್‌.ಪಿ.ಶೇಷಾದ್ರಿ ಮಾತನಾಡಿ, ಕುರುಬರ ಸಾಂಸ್ಕೃತಿಕ ಇತಿಹಾಸವನ್ನು 15 ಸಂಪುಟಗಳಲ್ಲಿ ಹೊರತರುವ ಬೃಹತ್‌ ಮಾಲಿಕೆ ಇದಾಗಿದೆ. ಅಂದು ಎಸ್‌.ಜಿ.ಸಿದ್ದರಾಮಯ್ಯ ಬರೆದಿರುವ ಪುರಾಣ, ಲಿಂಗದಹಳ್ಳಿ ಹಾಲಪ್ಪ ಬರೆದಿರುವ ಇತಿಹಾಸ ಭಾಗ 1,2, ಧರ್ಮ ಭಾಗ-1,2,3, ಬಿದರೆ ಚಂದ್ರಕಲಾ ಬರೆದಿರುವ ಸಾಹಿತ್ಯ, ಚಂದ್ರಕಾಂತ್‌ ಬಿಜ್ಜರಿಗೆ ಮತ್ತು ಚಿಕ್ಕಣ್ಣ ಎಣ್ಣೆಕಟ್ಟೆ ಬರೆದಿರುವ ಕಲೆ ಮತ್ತು ಕ್ರೀಡೆ, ಆರ್‌. ಸುನಂದಮ್ಮ ಅವರ ಮಹಿಳೆ, ಒಡೆಯರ್‌ ಡಿ.ಹೆಗಡೆ ಬರೆದಿರುವ ಸಾಮಾಜೋ-ಆರ್ಥಿಕ, ಬಿ.ಕೆ.ರವಿ ಬರೆದಿರುವ ಆಧುನಿಕತೆ, ಖಾತಾ ಚಿಕ್ಕಣ್ಣ ಬರೆದಿರುವ ಚಿತ್ರಕೋಶ, ಲಿಂಗದಹಳ್ಳಿ ಹಾಲಪ್ಪ ಬರೆದಿರುವ ಸಾಂಸ್ಕೃತಿಕ ಪದಕೋಶ ಒಟ್ಟು 13 ಗ್ರಂಥಗಳು ಬಿಡುಗಡೆಯಾಗಲಿವೆ ಎಂದರು.

ಲಾಭ, ನಷ್ಟ ಇಲ್ಲದೇ ಗ್ರಂಥಗಳ ಬೆಲೆ ನಿಗದಿಗೊಳಿಸಲಾಗಿದೆ. 13 ಗ್ರಂಥಗಳ ಮುಖ ಬೆಲೆ 4,640 ರೂ. ಆಗಿದ್ದು, ಬಿಡುಗಡೆಯ ದಿನ 3,500ಕ್ಕೆ ನೀಡಲಾಗುವುದು. ಸಮಾಜ ಬಾಂಧವರು ಗ್ರಂಥ ಕೊಳ್ಳುವ ಮೂಲಕ ಸಹಕರಿಸಬೇಕು ಮತ್ತು ಕುರುಬ ಸಮಾಜದ ಸಾಂಸ್ಕೃತಿಕ ಲೋಕವನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಈಶ್ವರಪ್ಪ, ಪಿ.ಪ್ರಕಾಶ್‌, ರೂಪಾ ರಮೇಶ್‌, ಚಿತ್ರ ಮಂಜುನಾಥ್‌, ಡಾ.ಪ್ರಶಾಂತ್‌, ಮಹಾಬಲೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ