ಆ್ಯಪ್ನಗರ

ಶಿವಮೊಗ್ಗ-ಬೆಂಗಳೂರು ಪ್ರಯಾಣ ಇನ್ನಷ್ಟು ಸನಿಹ: ಇನ್ಮುಂದೆ ವಾರ ಪೂರ್ತಿ ಓಡಲಿದೆ ಜನ್‌ಶತಾಬ್ದಿ

ರೈಲನ್ನು ಇನ್ಮುಂದೆ ವಾರ ಪೂರ್ತಿ ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈವರೆಗೆ ಮಂಗಳವಾರ ಹೊರತುಪಡಿಸಿ, ಉಳಿದೆಲ್ಲ ದಿನವು ಜನ್‌ಶತಾಬ್ದಿ ರೈಲು ಸಂಚರಿಸುತ್ತಿತ್ತು.

Vijaya Karnataka Web 13 Oct 2019, 10:50 am
ಶಿವಮೊಗ್ಗ: ಶಿವಮೊಗ್ಗ - ಯಶವಂತಪುರ ಜನಶತಾಬ್ದಿ ರೈಲ್ವೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಜನ್‌ಶತಾಬ್ದಿ ರೈಲಿನ ವೇಗಮಿತಿ ಹೆಚ್ಚಿಸಲಾಗಿದೆ. ಇನ್ಮುಂದೆ ಕೇವಲ 4.20 ಗಂಟೆಯಲ್ಲಿ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಸಂಚರಿಸಬಹುದಾಗಿದೆ.
Vijaya Karnataka Web Rail


ಜನ್‌ಶತಾಬ್ದಿ ರೈಲು ಸಂಖ್ಯೆ 12089 ಬೆಂಗಳೂರಿನ ಯಶವಂತಪುರದಿಂದ ಸಂಜೆ 5.30ಕ್ಕೆ ಹೊರಡಲಿದೆ. ರಾತ್ರಿ 9.55ಕ್ಕೆ ಶಿವಮೊಗ್ಗ ತಲುಪಲಿದೆ. ಈ ಹಿಂದೆ ರಾತ್ರಿ 10.25ಕ್ಕೆ ಶಿವಮೊಗ್ಗಕ್ಕೆ ಬರುತ್ತಿತ್ತು.

ಬೆಂಗಳೂರಿನಿಂದ ಬರುವಾಗ ತುಮಕೂರು ನಿಲ್ದಾಣದಲ್ಲಿ 6.33 ರಿಂದ 6.35ರವರೆಗೆ ನಿಲುಗಡೆ, ಕಡೂರಿನಲ್ಲಿ 8.42 ರಿಂದ 8.43ರವರೆಗೆ, ಭದ್ರಾವತಿಯಲ್ಲಿ 9.32 ರಿಂದ 9.33ರವರೆಗೆ ನಿಲುಗಡೆಯಾಗಲಿದೆ.

ಇನ್ನು, ಜನ್‌ಶತಾಬ್ದಿ ರೈಲು ಶಿವಮೊಗ್ಗದಿಂದ ಹೊರಡುವ ಸಮಯವನ್ನು ಬದಲಾವಣೆ ಮಾಡಲಾಗಿದೆ. ಈ ಮೊದಲು ಬೆಳಗ್ಗೆ 5.15ಕ್ಕೆ ಹೊರಡುತ್ತಿತ್ತು. ಇನ್ಮುಂದೆ 5.30 ಕ್ಕೆ ಹೊರಡಲಿದೆ. ಬೆಳಗ್ಗೆ 9.50ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣ ತಲುಪಲಿದೆ. ಈ ಮೊದಲು ಇದೆ ರೈಲು 10.10ಕ್ಕೆ ಯಶವಂತಪುರ ತಲುಪುತ್ತಿತ್ತು.

ಶಿವಮೊಗ್ಗದಿಂದ ಹೊರಡುವಾಗ ಭದ್ರಾವತಿಯಲ್ಲಿ 5.49 ರಿಂದ 5.50ರವರೆಗೆ ನಿಲುಗಡೆ ಮಾಡಲಾಗುತ್ತದೆ. ಕಡೂರಿನಲ್ಲಿ 6.41 ರಿಂದ 6.42ರವರೆಗೆ, ತುಮಕೂರಿನಲ್ಲಿ 8.38 ರಿಂದ 8.40ರವರೆಗೆ ನಿಲುಗಡೆಯಾಗುತ್ತದೆ.

ವೇಳಾಪಟ್ಟಿ ಬದಲಾವಣೆಯು ಅ.14ರಿಂದ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವಾರಪೂರ್ತಿ ಓಡಲಿದೆ ಜನ್‌ಶತಾಬ್ದಿ

ರೈಲನ್ನು ಇನ್ಮುಂದೆ ವಾರ ಪೂರ್ತಿ ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈವರೆಗೆ ಮಂಗಳವಾರ ಹೊರತುಪಡಿಸಿ, ಉಳಿದೆಲ್ಲ ದಿನವು ಜನ್‌ಶತಾಬ್ದಿ ರೈಲು ಸಂಚರಿಸುತ್ತಿತ್ತು. ಆದರೆ ಇನ್ಮುಂದೆ ಮಂಗಳವಾರವು ಜನಶತಾಬ್ದಿ ರೈಲು ಸಂಚರಿಸಲಿದೆ. ಅ. 15ರ ಮಂಗಳವಾರದಂದು ರೈಲು ಬೆಳಗ್ಗೆ ಶಿವಮೊಗ್ಗದಿಂದ ಹೊರಡಲಿದೆ. ಆ ದಿನ ಸಂಜೆ ಯಶವಂತಪುರದಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದೆ. ಜನ್‌ಶತಾಬ್ದಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿರುವುದಕ್ಕೆ ಸಾರ್ವಜನಿಕರು ಬೆಂಗಳೂರಿನ ಕಚೇರಿಗಳಿಗೆ, ವಾಣಿಜ್ಯ ಉದ್ದೇಶಕ್ಕಾಗಿ ತೆರಳಿ ಅದೇ ದಿನ ವಾಪಸ್ಸು ಬರುವಲ್ಲಿ ಬಹಳ ಸಹಕಾರಿಯಾಗಲಿದೆ. ಇದರ ಪ್ರಯೋಜನ ಪಡೆಯುವಂತೆ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ