ಶಿವಮೊಗ್ಗ : ನಕ್ಸಲ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಆರೋಪದ ಮೇಲೆ ತಾಲೂಕಿನ ಶೋಭಾ(34)ಅಲಿಯಾಸ್ ಪಾರ್ವತಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕ್ಯೂ ಬ್ರಾಂಚ್ ಪೊಲೀಸರು ಕಾರ್ಯಾಚರಣೆ ನಡೆಸಿ, ಕೊಯಮತ್ತೂರು ಜಿಲ್ಲೆಯ ತಡಗಂ ಪೊಲೀಸ್ ಠಾಣಾ ವ್ಯಾಪ್ತಿಯ ಅನೈಕಟ್ಟಿ ಚೆಕ್ಪೋಸ್ಟ್ ಸಮೀಪ ಬಂಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ, ಈ ಕುರಿತಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿಲ್ಲ.
ಶೋಭಾ ತಾಲೂಕಿನ ನಗರ ಹೋಬಳಿ ಯಡೂರು ಸಮೀಪದ ಉಳ್ತಿಗಾ ಗ್ರಾಮದ ಮೇಲು ಸುಂಕದವಳು. 2006ರಲ್ಲಿಯೇ ಮನೆಯನ್ನು ತೊರೆದು ನಕ್ಸಲ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಳು ಎನ್ನುವ ಆರೋಪವಿದೆ. ಜಿಲ್ಲೆಯ ಹೊಸನಗರ, ನಗರ, ಆಗುಂಬೆ ಪೊಲೀಸ್ ಠಾಣೆಗಳಲ್ಲಿಇವಳ ವಿರುದ್ಧ ಪ್ರಕರಣಗಳಿವೆ.
ಇದಕ್ಕೂ ಮೊದಲು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕು ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಾಲೆಕೊಪ್ಪ, ಬೆಳಗೋಡು ಕೊಡಿಗೆಯ ಶ್ರೀಮತಿಯನ್ನು ಕೆರಳದ ಕ್ಯೂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ ಎಂಬ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ಹರಿದಾಡಿತ್ತು. ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಆರೋಪ ಹೊತ್ತಿರುವ ಶ್ರೀಮತಿ, ಹಲವಾರು ವರ್ಷಗಳಿಂದ ನಾಪತ್ತೆಯಾಗಿದ್ದಾಳೆ. ಕಳೆದ 2019ರ ಅಕ್ಟೋಬರ್ನಲ್ಲಿ ಕೆರಳ ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದಾಳೆ ಎಂಬ ಕುರಿತೂ ಸುದ್ದಿ ಹರಡಿತ್ತು. ಅಂತಿಮವಾಗಿ ಅದು ದೃಢವಾಗಿರಲಿಲ್ಲ.
ಶೋಭಾ ತಾಲೂಕಿನ ನಗರ ಹೋಬಳಿ ಯಡೂರು ಸಮೀಪದ ಉಳ್ತಿಗಾ ಗ್ರಾಮದ ಮೇಲು ಸುಂಕದವಳು. 2006ರಲ್ಲಿಯೇ ಮನೆಯನ್ನು ತೊರೆದು ನಕ್ಸಲ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಳು ಎನ್ನುವ ಆರೋಪವಿದೆ. ಜಿಲ್ಲೆಯ ಹೊಸನಗರ, ನಗರ, ಆಗುಂಬೆ ಪೊಲೀಸ್ ಠಾಣೆಗಳಲ್ಲಿಇವಳ ವಿರುದ್ಧ ಪ್ರಕರಣಗಳಿವೆ.
ಇದಕ್ಕೂ ಮೊದಲು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕು ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಾಲೆಕೊಪ್ಪ, ಬೆಳಗೋಡು ಕೊಡಿಗೆಯ ಶ್ರೀಮತಿಯನ್ನು ಕೆರಳದ ಕ್ಯೂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ ಎಂಬ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ಹರಿದಾಡಿತ್ತು. ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಆರೋಪ ಹೊತ್ತಿರುವ ಶ್ರೀಮತಿ, ಹಲವಾರು ವರ್ಷಗಳಿಂದ ನಾಪತ್ತೆಯಾಗಿದ್ದಾಳೆ. ಕಳೆದ 2019ರ ಅಕ್ಟೋಬರ್ನಲ್ಲಿ ಕೆರಳ ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದಾಳೆ ಎಂಬ ಕುರಿತೂ ಸುದ್ದಿ ಹರಡಿತ್ತು. ಅಂತಿಮವಾಗಿ ಅದು ದೃಢವಾಗಿರಲಿಲ್ಲ.