ಆ್ಯಪ್ನಗರ

ಶಿವಮೊಗ್ಗ ಡಿವೈಎಸ್‌ಪಿ, ಸಿಪಿಐ ವರ್ಗ

ಅಕ್ರಮ ಮರಳು ಸಾಗಣೆ ಆರೋಪಕ್ಕೆ ಗುರಿಯಾಗಿರುವ ಶಿವಮೊಗ್ಗ ಡಿವೈಎಸ್‌ಪಿ ಸುದರ್ಶನ್‌ ಮತ್ತು ಗ್ರಾಮಾಂತರ ವೃತ್ತದ ಇನ್ಸ್‌ಪೆಕ್ಟರ್‌ ಕುಮಾರಸ್ವಾಮಿ ಅವರನ್ನು ವರ್ಗಾವಣೆ ಮಾಡಲಾಗಿದೆ.

Vijaya Karnataka 30 Jan 2019, 5:00 am
ಶಿವಮೊಗ್ಗ : ಅಕ್ರಮ ಮರಳು ಸಾಗಣೆ ಆರೋಪಕ್ಕೆ ಗುರಿಯಾಗಿರುವ ಶಿವಮೊಗ್ಗ ಡಿವೈಎಸ್‌ಪಿ ಸುದರ್ಶನ್‌ ಮತ್ತು ಗ್ರಾಮಾಂತರ ವೃತ್ತದ ಇನ್ಸ್‌ಪೆಕ್ಟರ್‌ ಕುಮಾರಸ್ವಾಮಿ ಅವರನ್ನು ವರ್ಗಾವಣೆ ಮಾಡಲಾಗಿದೆ.
Vijaya Karnataka Web shimoga dysp cpi transfer
ಶಿವಮೊಗ್ಗ ಡಿವೈಎಸ್‌ಪಿ, ಸಿಪಿಐ ವರ್ಗ


ಡಿಜಿಪಿ ನೀಲಮಣಿ ಎನ್‌.ರಾಜು ಅವರು ಮಂಗಳವಾರ ವರ್ಗಾವಣೆ ಆದೇಶ ಹೊರಡಿಸಿದ್ದು ಅದರ ಅನುಸಾರ ಶಿವಮೊಗ್ಗ ಡಿವೈಎಸ್‌ಪಿಯಾಗಿ ಉಮೇಶ್‌ ಈಶ್ವರ ನಾಯಕ್‌ರನ್ನು ಮತ್ತು ಶಿವಮೊಗ್ಗ ಸಿಪಿಐಯಾಗಿ ಚಿತ್ರದುರ್ಗ ಬೆಸ್ಕಾಂ ಜಾಗೃತ ದಳದ ಸಿಪಿಐ ಜೆ.ಲೋಕೇಶ್‌ರನ್ನು ವರ್ಗ ಮಾಡಲಾಗಿದೆ. ಆದರೆ, ಸುದರ್ಶನ್‌ ಮತ್ತು ಕುಮಾರಸ್ವಾಮಿ ಅವರಿಗೆ ಸ್ಥಳ ತೋರಿಸಿಲ್ಲ.

ಗ್ರಾಮಾಂತರ ಠಾಣೆಯ ಮುಖ್ಯಪೇದೆ ಯಲ್ಲಪ್ಪ ಇತ್ತೀಚೆಗೆ ಅಕ್ರಮ ಮರಳು ಸಾಗಿಸಲು ಅವಕಾಶ ಮಾಡಿಕೊಡುವುದಕ್ಕಾಗಿ 17,500 ರೂ. ಲಂಚ ಸ್ವೀಕರಿಸುವಾಗ ಎಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆಯಲ್ಲಿ ನ್ಯಾಯಾಧೀಶರ ಎದುರಿನಲ್ಲೇ ಲಂಚಾವತಾರದ ಹಿಂದೆ ಡಿವೈಎಸ್ಪಿ, ಇನ್ಸ್‌ಪೆಕ್ಟರ್‌ ಮತ್ತು ಸಬ್‌ ಇನ್ಸ್‌ಪೆಕ್ಟರ್‌ ಸಹ ಇದ್ದಾರೆ ಎಂಬ ಹೇಳಿಕೆ ನೀಡಿದ್ದರು. ತಮ್ಮ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಂಧನ ಭೀತಿಯಲ್ಲಿದ್ದ ಡಿವೈಎಸ್‌ಪಿ ಸುದರ್ಶನ್‌ ಮತ್ತು ಸಬ್‌ ಇನ್ಸ್‌ಪೆಕ್ಟರ್‌ ಭಾರತಿ ಅವರು ನಿರೀಕ್ಷನಾ ಜಾಮೀನು ಪಡೆದುಕೊಂಡಿದ್ದರು.

ರಜೆ ಮೇಲೆ ತೆರಳಿದ್ದ ಈ ಇಬ್ಬರು ಅಧಿಕಾರಿಗಳು ನಿರೀಕ್ಷಣಾ ಜಾಮೀನು ಸಿಗುತ್ತಿದ್ದಂತೆ ಕರ್ತವ್ಯಕ್ಕೆ ಹಾಜರಾದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಅಧಿಕಾರಿಗಳು ವರ್ಗಾ ಮಾಡಬೇಕೆಂಬ ಒತ್ತಾಯಗಳು ಬಂದಿದ್ದವು. ಅದರ ಬೆನ್ನಿಗೆ ಇಲಾಖೆಯು ಇಬ್ಬರು ಅಧಿಕಾರಿಗಳನ್ನು ವರ್ಗ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ