ಆ್ಯಪ್ನಗರ

ಕೇಸರಿಯಲ್ಲಿಕಂಗೊಳಿಸುತ್ತಿದೆ ಶಿವಮೊಗ್ಗ

ನಗರದ ಗಾಂಧಿ ಬಜಾರ್‌ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳು ಕೇಸರಿಮಯವಾಗಿವೆ. 24 ಅಡಿ ಎತ್ತರದ ಬೃಹತ್‌ ಮಹಾದ್ವಾರ, 18 ಅಡಿಯ ಛತ್ರಪತಿ ಶಿವಾಜಿ ಪ್ರತಿಮೆಯ ಅಕರ್ಷಿಸುತ್ತಿವೆ. ರಸ್ತೆಗಳಲ್ಲಿಫ್ಲೆಕ್ಸ್‌ಗಳು ಸೇರಿದಂತೆ ಬಗೆಬಗೆಯ ಅಲಂಕಾರ... ಇದು ಹಿಂದು ಮಹಾಸಭಾ ಗಣಪತಿ ವಿಸರ್ಜನೆಗೆ ನಗರ ಸಜ್ಜುಗೊಂಡಿರುವ ರೀತಿ.

Vijaya Karnataka 11 Sep 2019, 5:00 am
ಶಿವಮೊಗ್ಗ: ನಗರದ ಗಾಂಧಿ ಬಜಾರ್‌ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳು ಕೇಸರಿಮಯವಾಗಿವೆ. 24 ಅಡಿ ಎತ್ತರದ ಬೃಹತ್‌ ಮಹಾದ್ವಾರ, 18 ಅಡಿಯ ಛತ್ರಪತಿ ಶಿವಾಜಿ ಪ್ರತಿಮೆಯ ಅಕರ್ಷಿಸುತ್ತಿವೆ. ರಸ್ತೆಗಳಲ್ಲಿಫ್ಲೆಕ್ಸ್‌ಗಳು ಸೇರಿದಂತೆ ಬಗೆಬಗೆಯ ಅಲಂಕಾರ... ಇದು ಹಿಂದು ಮಹಾಸಭಾ ಗಣಪತಿ ವಿಸರ್ಜನೆಗೆ ನಗರ ಸಜ್ಜುಗೊಂಡಿರುವ ರೀತಿ.
Vijaya Karnataka Web 10GANESH3_46


ನಗರದ ಇತಿಹಾಸ ಪ್ರಸಿದ್ಧ ಹಿಂದೂ ಸಂಘಟನಾ ಮಹಾ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 75ನೇ ವರ್ಷದ ಗಣೇಶ ಮೂರ್ತಿಯ ವಿಸರ್ಜನೆ ಸೆ.12ರಂದು ನಡೆಯಲಿದ್ದು, ಅದಕ್ಕಾಗಿ ಭರ್ಜರಿ ತಯಾರಿ ನಡೆದಿದೆ. ಎಲ್ಲೆಲ್ಲೂಕೇಸರಿ ಬಾವುಟ, ಬ್ಯಾನರ್‌, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ನಗರದ ಪ್ರಮುಖ ವೃತ್ತಗಳು ಕೇಸರಿಯಲ್ಲಿಮಿಂದೇಳುತ್ತಿವೆ.

ಅಲಂಕಾರಕ್ಕೆ 8ಲಕ್ಷಕ್ಕೂ ವೆಚ್ಚ:
ಗಾಂಧಿ ಬಜಾರ್‌ ಸೇರಿದಂತೆ ಶಿವಪ್ಪ ನಾಯಕ ವೃತ್ತ, ಅಮೀರ್‌ ಅಹಮ್ಮದ್‌ ವೃತ್ತ, ಗೋಪಿ ವೃತ್ತ, ರಾಮಣ್ಣಶ್ರೇಷ್ಠಿ ಪಾರ್ಕ್ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳನ್ನು ಅಲಂಕರಿಸಲಾಗಿದೆ. ಇದಕ್ಕಾಗಿ ಸುಮಾರು 8 ಲಕ್ಷ ರೂ.ಗೂ ಅಧಿಕ ಹಣ ವೆಚ್ಚವಾಗಿದೆ ಎಂಬುದು ಸಂಘಟನೆಯವರ ಮಾಹಿತಿ.

ಶಿವಾಜಿ ಪ್ರತಿಮೆ ಆಕರ್ಷಣೆ:
ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಅಂಗವಾಗಿ ಸುಮಾರು 2 ಲಕ್ಷಕ್ಕೂ ಅಧಿಕ ರೂ.ಗಳ ವೆಚ್ಚದಲ್ಲಿಗಾಂಧಿಬಜಾರ್‌ನ ಮುಖ್ಯದ್ವಾರದ ಮೇಲೆ ನಿರ್ಮಿಸಲಾಗಿರುವ ಸಿಂಹಾಸನದ ಮೇಲೆ ಕೂತಿರುವ 18 ಅಡಿಯ ಶಿವಾಜಿ ಪ್ರತಿಮೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಶಿವಾಜಿ ಬೃಹತ್‌ ಪ್ರತಿಮೆ ಶಿವಮೊಗ್ಗದ ಶಿಲ್ಪಿ ಜೀವನ್‌ ಮತ್ತು ತಂಡದವರ ಕೈಚಳದಿಂದ ಮೂಡಿ ಬಂದಿದೆ. ಇದಕ್ಕಾಗಿ ಸುಮಾರು 15 ದಿನಗಳ ಶ್ರಮ ಹಾಕಲಾಗಿದೆ.

24 ಅಡಿ ಮಹಾದ್ವಾರ:
ನಗರದ ಗಾಂಧಿ ಬಜಾರ್‌ನಲ್ಲಿನಿರ್ಮಾಣವಾಗಿರುವ ಹಿಂದೂ ಸಂಘಟನಾ ಮಹಾ ಮಂಡಳಿಯ ಮಹಾದ್ವಾರವೂ ಕೇಂದ್ರ ಬಿಂದುವಾಗಿದ್ದು, ಕಳೆದ ಬಾರಿಗಿಂತಲೂ ಈ ಬಾರಿ ಎತ್ತರವಾಗಿ ಮಹಾದ್ವಾರ ನಿರ್ಮಾಣವಾಗಿದೆ. ಕಳೆದ ಬಾರಿ 18 ಅಡಿಯಷ್ಟು ಎತ್ತರದಲ್ಲಿನಿರ್ಮಾಣ ಮಾಡಲಾಗಿದ್ದ ಮಹಾದ್ವಾರ, ಈ ಬಾರಿ 24 ಅಡಿಗೆ ಹೆಚ್ಚಿಸಲಾಗಿದೆ.

ಅದ್ದೂರಿ ಮೆರವಣಿಗೆ:
ಶಿವಮೊಗ್ಗದಲ್ಲಿಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಎಂದರೆ ಜನಸಾಗರವೇ ಹರಿದು ಬರುತ್ತದೆ. ಈ ಬಾರಿ ಮೆರವಣಿಗೆಯಲ್ಲಿಡೊಳ್ಳು ಕುಣಿತ, ವೀರಗಾಸೆ, ಜನಪದ ಕಲಾ ತಂಡಗಳು ಸೇರಿದಂತೆ ಭಾರತೀಯ ಸಂಸ್ಕೃತಿ ಬಿಂಬಿಸುವ ಎಲ್ಲವಾದ್ಯಗಳು ಇರಲಿವೆ. 75ನೇ ವರ್ಷದ ವಿಸರ್ಜನೆ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದ್ದು, ಈ ಬಾರಿ ಹೆಚ್ಚು ಜನರು ಸೇರುವ ನಿರೀಕ್ಷೆಯನ್ನು ಹಿಂದೂ ಸಂಘಟನಾ ಮಹಾ ಮಂಡಳಿ ಹೊಂದಿದೆ. ಗಣಪತಿ ವಿಸರ್ಜನೆ ಯಶಸ್ವಿಯಾಗಿ ನಡೆಯಲು ಸಾವಿರಾರು ಯುವಕರು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಹಿಂದು ಸಂಘಟನಾ ಮಹಾಮಂಡಳಿ ಗಣಪತಿ ಮಂಟಪ ಆವರಣದಲ್ಲಿಹಲವು ಸಾಂಸ್ಕ್ಕೃತಿಕ ಕಾರ್ಯಕ್ರಮಗಳು ಜರುಗಿವೆ. ಅಲಂಕಾರ ಸಮಿತಿಯವರು ಹಗಲೂರಾತ್ರಿ ಕಷ್ಟಪಟ್ಟಿದ್ದಾರೆ. ಹೀಗಾಗಿ ಎಲ್ಲಶ್ರಮದಿಂದ ಅದ್ಧೂರಿ ಮೆರವಣಿಗೆ ನಡೆಯಲಿದೆ. ಸೆ.12ರ ಬೆಳಗ್ಗೆ 9.30ಕ್ಕೆ ಮೆರವಣಿಗೆ ಆರಂಭವಾಗಿ ಮಧ್ಯರಾತ್ರಿ 1.30ಕ್ಕೆ ಗಣಪತಿ ವಿಸರ್ಜನೆ ಮಾಡಲಾಗುತ್ತದೆ.

-----------
ಹಿಂದು ಮಹಾಸಭಾ ಗಣಪತಿ ವಿಸರ್ಜನೆಯೆಂದರೆ ಅಂದು ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಹೆದರುವಂತಹ ಕಾಲವಿತ್ತು. ಆದರೆ, ಇತ್ತೀಚಿನ ವರ್ಷದಲ್ಲಿಮೆರವಣಿಗೆ ಅತ್ಯಂತ ಶಾಂತಿಯುತವಾಗಿ ನಡೆಯುತ್ತಿದ್ದು, ಮಹಿಳೆಯರೂ ಮೆರೆವಣಿಗೆಯಲ್ಲಿಭಾಗಿಯಾಗುತ್ತಿದ್ದಾರೆ. ಕಳೆದ ವರ್ಷ ಸಾವಿರಾರು ಮಹಿಳೆಯರು ಮೆರವಣಿಗೆಯಲ್ಲಿಭಾಗಿಯಾಗಿದ್ದು, ಈ ಭಾರಿ ಅವರ ಸಂಖ್ಯೆ ಸುಮಾರು 25 ಸಾವಿರ ದಾಟುವ ನಿರೀಕ್ಷೆಯಿದೆ.
- ಎಚ್‌.ಕೆ.ದೀನದಯಾಳ್‌, ಜಿಲ್ಲಾಪ್ರಮುಖ್‌, ಬಜರಂಗದಳ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ