ಶಿಕಾರಿಪುರ: ತಾಲೂಕಿನ ಬೇಗೂರು ಗ್ರಾಮದಲ್ಲಿ ಫೆಬ್ರವರಿ 25ರಂದು ತಾಲೂಕು ಮಟ್ಟದ ಶ್ರೀಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತ್ಯುತ್ಸವ ಆಚರಿಸಲಾಗುವುದು ಎಂದು ತಾಲೂಕು ಮರಾಠ ಸಮಾಜದ ಅಧ್ಯಕ್ಷ ಗುರುರಾಜ ಜಗತಾಪ್ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕು ಆಡಳಿತ, ತಾಲೂಕು ಮರಾಠ ಸಮಾಜ, ತುಳಜಾ ಭವಾನಿ ಟ್ರಸ್ಟ್, ಶಿವಾಜಿ ಯುವಕ ಸಂಘ, ಬೇಗೂರು ಸಮಾಜ, ಗ್ರಾಮಸ್ಥರ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ಶಿವಾಜಿ ಮಹಾರಾಜರ ಪುತ್ಥಳಿ ಮೆರವಣಿಗೆ ಇದೆ. ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಗವಿಪುರಂನ ಗೋಸಾಯಿ ಮಠದ ಶ್ರೀಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೊದಲ ಬಾರಿಗೆ ಗುರುಗಳು ತಾಲೂಕಿಗೆ ಆಗಮಿಸುತ್ತಿರುವುದರಿಂದ ಭವ್ಯ ಮೆರವಣಿಗೆ ನಡೆಸಲಾಗುವುದು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಪ್ರತಿಪಕ್ಷ ದ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ತಾಲೂಕಿನ ಪ್ರಮುಖ ರಾಜಕೀಯ ಮುಖಂಡರು, ಎಲ್ಲ ಸಮಾಜದ ಅಧ್ಯಕ್ಷ ರು, ಸಮಾಜ ಬಾಂಧವರು, ಅತಿಥಿಗಳಾಗಿ ಪಾಲ್ಗೊಳ್ಳುವರು. ಹಿಂದೂ ಜಾಗರಣ ವೇದಿಕೆ ಸಂಚಾಲಕ ಆದರ್ಶ ಗೋಖಲೆ ಉಪನ್ಯಾಸ ನೀಡುವರು. ಸಮಸ್ತ ಸಮುದಾಯದವರು ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಮನವಿಮಾಡಿದರು. ಮರಾಠ ಸಮಾಜ ಮುಖಂಡರಾದ ಎನ್.ನಾರಾಯಣರಾವ್, ಈ.ವೈ.ಗಣೇಶರಾವ್, ದಿನೇಶ್ರಾವ್, ಜ್ಯೋತಿರಾವ್, ಚಂದ್ರೋಜಿರಾವ್, ರಘುನಾಥರಾವ್ ಪವಾರ್, ಪ್ರಶಾಂತ್ ಸಾಳಂಕೆ ಮತ್ತಿತರರು ಇದ್ದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕು ಆಡಳಿತ, ತಾಲೂಕು ಮರಾಠ ಸಮಾಜ, ತುಳಜಾ ಭವಾನಿ ಟ್ರಸ್ಟ್, ಶಿವಾಜಿ ಯುವಕ ಸಂಘ, ಬೇಗೂರು ಸಮಾಜ, ಗ್ರಾಮಸ್ಥರ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ಶಿವಾಜಿ ಮಹಾರಾಜರ ಪುತ್ಥಳಿ ಮೆರವಣಿಗೆ ಇದೆ. ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಗವಿಪುರಂನ ಗೋಸಾಯಿ ಮಠದ ಶ್ರೀಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೊದಲ ಬಾರಿಗೆ ಗುರುಗಳು ತಾಲೂಕಿಗೆ ಆಗಮಿಸುತ್ತಿರುವುದರಿಂದ ಭವ್ಯ ಮೆರವಣಿಗೆ ನಡೆಸಲಾಗುವುದು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಪ್ರತಿಪಕ್ಷ ದ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ತಾಲೂಕಿನ ಪ್ರಮುಖ ರಾಜಕೀಯ ಮುಖಂಡರು, ಎಲ್ಲ ಸಮಾಜದ ಅಧ್ಯಕ್ಷ ರು, ಸಮಾಜ ಬಾಂಧವರು, ಅತಿಥಿಗಳಾಗಿ ಪಾಲ್ಗೊಳ್ಳುವರು. ಹಿಂದೂ ಜಾಗರಣ ವೇದಿಕೆ ಸಂಚಾಲಕ ಆದರ್ಶ ಗೋಖಲೆ ಉಪನ್ಯಾಸ ನೀಡುವರು. ಸಮಸ್ತ ಸಮುದಾಯದವರು ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಮನವಿಮಾಡಿದರು. ಮರಾಠ ಸಮಾಜ ಮುಖಂಡರಾದ ಎನ್.ನಾರಾಯಣರಾವ್, ಈ.ವೈ.ಗಣೇಶರಾವ್, ದಿನೇಶ್ರಾವ್, ಜ್ಯೋತಿರಾವ್, ಚಂದ್ರೋಜಿರಾವ್, ರಘುನಾಥರಾವ್ ಪವಾರ್, ಪ್ರಶಾಂತ್ ಸಾಳಂಕೆ ಮತ್ತಿತರರು ಇದ್ದರು.