ಆ್ಯಪ್ನಗರ

‘ಸಿದ್ಧಗಂಗಾ ಶ್ರೀಗಳ ಹೆಸರಲ್ಲೇ ಸಾಧಕರಿಗೆ ಪ್ರಶಸ್ತಿ ಕೊಡಿ’

ಎಲ್ಲ ಧರ್ಮಗಳನ್ನು ಮೀರಿದ ಮನುಷ್ಯ ಧರ್ಮವನ್ನು ಮುಂದಿಟ್ಟುಕೊಂಡು ಸೇವೆ ಸಲ್ಲಿಸಿದ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮಿಗಳು ಪ್ರತಿಯೊಬ್ಬರಿಗೂ ಆದರ್ಶವಾಗಬೇಕೆಂದು ಸಮಾಜ ಚಿಂತಕ ರಾಜಪ್ಪ ಮಾಸ್ತರ್‌ ಹೇಳಿದರು.

Vijaya Karnataka 24 Jan 2019, 5:00 am
ಸೊರಬ: ಎಲ್ಲ ಧರ್ಮಗಳನ್ನು ಮೀರಿದ ಮನುಷ್ಯ ಧರ್ಮವನ್ನು ಮುಂದಿಟ್ಟುಕೊಂಡು ಸೇವೆ ಸಲ್ಲಿಸಿದ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮಿಗಳು ಪ್ರತಿಯೊಬ್ಬರಿಗೂ ಆದರ್ಶವಾಗಬೇಕೆಂದು ಸಮಾಜ ಚಿಂತಕ ರಾಜಪ್ಪ ಮಾಸ್ತರ್‌ ಹೇಳಿದರು.
Vijaya Karnataka Web SMR-23SRBP2


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ನಿಧನರಾದ ಹಿನ್ನೆಲೆಯಲ್ಲಿ ರೋಟರಿ ಕ್ಲಬ್‌ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು.

ಜಾತಿ, ಧರ್ಮವನ್ನು ಮೀರಿ ಬಡ ಮಕ್ಕಳಿಗೆ ಶಿಕ್ಷ ಣ, ಅನ್ನ, ವಸತಿ ನೀಡಿದ ಮಹಾನ್‌ ದಾರ್ಶನಿಕರು ಶಿವಕುಮಾರ್‌ ಸ್ವಾಮೀಜಿ. ಇವರ ಸೇವೆ ಗುರುತಿಸಿ ಸರಕಾರ ಯಾವುದೇ ಪ್ರಶಸ್ತಿ ನೀಡಿದರೂ ಕಡಿಮೆಯೇ. ಈ ದೃಷ್ಟಿಯಿಂದ ಸಾಧಕರಿಗೆ ಸ್ವಾಮಿಗಳ ಹೆಸರಲ್ಲೇ ವಿಶೇಷ ಪ್ರಶಸ್ತಿ ನೀಡುವುದನ್ನು ಪ್ರಾರಂಭಿಸಬೇಕೆಂದರು.

ರೋಟರಿ ಕ್ಲಬ್‌ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್‌.ಇ.ಜ್ಞಾನೇಶ್‌ ಮಾತನಾಡಿ, ಬಡ ವಿದ್ಯಾರ್ಥಿಗಳಿಗೆ ಅಕ್ಷ ರಜ್ಞಾನ ನೀಡುವ ಮೂಲಕ ಮಾನವೀಯತೆಯಲ್ಲಿ ನಂಬಿಕೆಯಿಟ್ಟು ಕೊಂಡ ಶಿವಕುಮಾರ ಸ್ವಾಮೀಜಿ ಅವರು ನಾಡಿನ ಸಂತರಿಗೆ ಮಾರ್ಗದರ್ಶಕರಾಗಿ ಮಠ-ಮಾನ್ಯಗಳ ಪರಂಪರೆ ಎತ್ತಿಹಿಡಿದರು ಎಂದರು. ರೋಟರಿ ಕ್ಲಬ್‌ ಅಧ್ಯಕ್ಷ ಡಿ.ಎಸ್‌.ಶಂಕರ್‌ ಮಾತನಾಡಿ, ತ್ರಿವಿಧ ದಾಸೋಹದ ಮೂಲಕ ಶಿವಕುಮಾರ ಸ್ವಾಮೀಜಿಗಳು ಭಕ್ತ ಸಮೂಹದ ಆರಾಧ್ಯ ದೇವರಾಗಿದ್ದರು. ಇವರ ಸೇವೆ ಮಹತ್ವದ್ದು ಎಂದರು. ರೋಟರಿ ಕ್ಲಬ್‌ ನಿಕಟಪೂರ್ವ ಅಧ್ಯಕ್ಷ ನಾಗರಾಜ್‌ಗುತ್ತಿ, ಪಾಣಿ ರಾಜಪ್ಪ, ಹಾಲೇಶ್‌ ನವುಲೆ, ಯಶೋಧರ್‌, ಚೇತನಕ್ಕ, ಮಹಂತೇಶ್‌, ರೇಣುಕಮ್ಮಗೌಳಿ, ಕೃಷ್ಣಾನಂದ್‌, ಶಿವಕುಮಾರ್‌, ರಾಜು ಹಿರಿಯಾವಲಿ, ಪುನೀತ್‌, ವಿರುಪಾಕ್ಷ ಪ್ಪ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ