ಆ್ಯಪ್ನಗರ

ಲಾರಿಯಲ್ಲಿದ್ದ ಡೈನಾಮೈಟ್‌ ಬ್ಲಾಸ್ಟ್‌: ಸಾವಿನ ಸಂಖ್ಯೆ 8ಕ್ಕೆ ಏರಿಕೆ; ಒಂದೇ ಕ್ಷಣದಲ್ಲಿ ಅಲ್ಲೋಲಕಲ್ಲೋಲ

ಸುಮಾರು 10 ರಿಂದ 10.30ರ ಸಮಯಕ್ಕೆ ಡೈನಾಮೈಟ್‌ ಬಾಕ್ಸ್‌ಗಳನ್ನು ತುಂಬಿದ್ದ ಲಾರಿಯೊಂದು ಶಿವಮೊಗ್ಗದ ಹುಣಸೋಡು ಬಳಿಯಿರುವ ರೈಲ್ವೆ ಕ್ವಾರಿಯತ್ತ ತೆರಳುತ್ತಿತ್ತು. ಇನ್ನೇನು ಕ್ವಾರಿ ತಲುಪುವಷ್ಟರಲ್ಲಿ ಇದ್ದಕ್ಕಿದ್ದಂತೆ ಲಾರಿ ಬ್ಲಾಸ್ಟ್ ಆಗಿದೆ.ಸ್ಫೋಟದ ತೀವ್ರತೆಗೆ ಮೃತದೇಹಗಳು ಛಿದ್ರ.. ಛಿದ್ರವಾಗಿದೆ. ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಲಾರಿ ಛಿದ್ರ ಛಿದ್ರವಾಗಿದ್ರೆ, ಲಾರಿಯಲ್ಲಿದ್ದ ಬಿಹಾರ ಮೂಲದ 8ಕ್ಕೂ ಹೆಚ್ಚು ಕಾರ್ಮಿಕರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಲಾರಿ ಚಾಲಕ, ಕಾರ್ಮಿಕರು ಸೇರಿದಂತೆ 8ಕ್ಕೂ ಹೆಚ್ಚು ಕಾರ್ಮಿಕರ ಮೃತದೇಹವೂ ಒಂದೊಂದು ದಿಕ್ಕಿನಲ್ಲಿ ಛಿದ್ರ ಛಿದ್ರವಾಗಿ ಬಿದ್ದಿವೆ. 15ಕ್ಕೂ ಹೆಚ್ಚು ಮಂದಿ ಸಾವನಪ್ಪಿರುವ ಶಂಕೆಯು ವ್ಯಕ್ತವಾಗಿದೆ.

Vijaya Karnataka Web 22 Jan 2021, 11:11 am
ಶಿವಮೊಗ್ಗ: ದೇಹಕ್ಕೆ ತುಂಬನೇ ದಣಿವಾಗಿತ್ತು. ಇನ್ನೇನು ಈ ಲಾರಿಯಲ್ಲಿರುವ ವಸ್ತು(ಡೈನಾಮೈಟ್‌ ಬಾಕ್ಸ್‌)ಗಳನ್ನು ಇಳಿಸಿ ನೆಮ್ಮದಿಯಾಗಿ ನಿದ್ದೆ ಮಾಡೋಣ ಎಂದು ಕಾರ್ಮಿಕರು ಯೋಚನೆ ಮಾಡುತ್ತಿರುವಾಗಲೇ ಅದು ಎಲ್ಲಿಂದಲೋ ಗೊತ್ತಿಲ್ಲ ನುಗ್ಗಿ ಬಂದ ಜವರಾಯ , ಒಂದೇ ಕ್ಷಣದಲ್ಲಿ ಎಲ್ಲರ ಪ್ರಾಣವನ್ನು ಕಿತ್ತುಕೊಂಡು ಬಿಟ್ಟ.

ಸುಮಾರು ಐವತ್ತು ಡೈನಾಮೈಟ್‌ಗಳು ಸಿಡಿದು ಲಾರಿಯಲ್ಲಿದ್ದವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು, ಒಂದೇ ಒಂದು ಕ್ಷಣದಲ್ಲಿ ವಾತವಾರಣವೇ ಬದಲಾಗಿ ಹೋಗಿತ್ತು.ಸುಮಾರು ಹೊತ್ತು ಹೊಗೆ, ಧೂಳಿನ ಜೊತೆಗೆ ಕಾರ್ಮಿಕರ ಚೀರಾಟ-ಗೂಗಾಟ ಕೇಳಿ ಬರುತ್ತಿತ್ತು. ನಂತರ ಕೆಲವೇ ನಿಮಿಷದಲ್ಲಿ ಕಣ್ಣಿಗೆ ಕಂಡಿದ್ದು ಛಿದ್ರವಾದ ಮೃತದೇಹಗಳು, ಕೇವಲ ಲಾರಿಯ ಅಸ್ಥಿಪಂಜರವಷ್ಟೆ.
ಹೌದು, ಸುಮಾರು 10 ರಿಂದ 10.30ರ ಸಮಯಕ್ಕೆ ಡೈನಾಮೈಟ್‌ ಬಾಕ್ಸ್‌ಗಳನ್ನು ತುಂಬಿದ್ದ ಲಾರಿಯೊಂದು ಶಿವಮೊಗ್ಗದ ಹುಣಸೋಡು ಬಳಿಯಿರುವ ರೈಲ್ವೆ ಕ್ವಾರಿಯತ್ತ ತೆರಳುತ್ತಿತ್ತು. ಇನ್ನೇನು ಕ್ವಾರಿ ತಲುಪುವಷ್ಟರಲ್ಲಿ ಇದ್ದಕ್ಕಿದ್ದಂತೆ ಲಾರಿ ಬ್ಲಾಸ್ಟ್ ಆಗಿದೆ.ಸ್ಫೋಟದ ತೀವ್ರತೆಗೆ ಮೃತದೇಹಗಳು ಛಿದ್ರ.. ಛಿದ್ರವಾಗಿದೆ. ಸ್ಫೋಟದ ತೀವ್ರತೆಗೆ ಲಾರಿಯು ಛಿದ್ರ ಛಿದ್ರವಾಗಿದ್ರೆ, ಲಾರಿಯಲ್ಲಿದ್ದ ಬಿಹಾರ ಮೂಲದ 8ಕ್ಕೂ ಹೆಚ್ಚು ಕಾರ್ಮಿಕರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಲಾರಿ ಚಾಲಕ, ಕಾರ್ಮಿಕರು ಸೇರಿದಂತೆ 8ಕ್ಕೂ ಹೆಚ್ಚು ಕಾರ್ಮಿಕರ ಮೃತದೇಹವೂ ಒಂದೊಂದು ದಿಕ್ಕಿನಲ್ಲಿ ಛಿದ್ರ ಛಿದ್ರವಾಗಿ ಬಿದ್ದಿವೆ. ಇನ್ನು ಕ್ವಾರಿಯಲ್ಲಿದ್ದವರು ಸೇರಿ ಒಟ್ಟು 15ಕ್ಕೂ ಹೆಚ್ಚು ಮಂದಿ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಶಿವಮೊಗ್ಗದ ಹುಣಸೋಡಿನಲ್ಲಿ ಡೈನಾಮೈಟ್‌ ಸ್ಫೋಟ; ಸ್ಥಳದಲ್ಲೇ 6ಕ್ಕೂ ಹೆಚ್ಚು ಕಾರ್ಮಿಕರ ಸಾವು

20 ಎಕರೆ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ20 ಎಕರೆ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಇಂತಹವೊಂದು ಅನಾಹುತಕ್ಕೆ ಕಾರಣ ಶಿವಮೊಗ್ಗದ ಹುಣಸೋಡು ಬಳಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ. ಅವಿನಾಶ್ ಎಂಬುವವರಿಗೆ ಈ ಜಾಗ ಸೇರಿದ್ದು. ಭಾಸ್ಕರ್ ಅನ್ನೋ ವ್ಯಕ್ತಿ ಗುತ್ತಿಗೆ ಪಡೆದು, ರೈಲ್ವೆ ಇಲಾಖೆಗೆ ಜಲ್ಲಿ ಪೂರೈಕೆ ಮಾಡ್ತಿದ್ದರಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ