ಶಿವಮೊಗ್ಗ: ಈ ವರ್ಷದ ಪದ್ಮ ಪ್ರಶಸ್ತಿ ಗಮಕ ಗಂಧರ್ವ ಹೊಸಹಳ್ಳಿಯ ಹೆಚ್ಆರ್ ಕೇಶವಮೂರ್ತಿಗೆ ಸಂದಿದೆ. ಮಲೆನಾಡಿನ ತುಂಗಾ ಮಡಿಲಲ್ಲಿರುವ ಪುಟ್ಟ ಹಳ್ಳಿ ಈ ಗಾರುಡಿಗನಿಂದ ದೇಶದಲ್ಲೆ ಹೆಸರು ಮಾಡುವಂತಾಗಿದೆ. ಸುಮಾರು 88 ವರ್ಷ ಇಳಿವಯಸ್ಸಿನಲ್ಲೂ ಸಂಗೀತ ಸುಧೆ ಹರಿಸುವ ಕೇಶವಮೂರ್ತಿಗಳ ಸಾಧನೆಯನ್ನ ಇಡೀ ಜಿಲ್ಲೆ ಕೊಂಡಾಡಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಕೆಸಿ ನಾರಾಯಣ ಗೌಡ ಹಾಗೂ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಕೇಶವಮೂರ್ತಿಯವರ ಮನೆಗೆ ತೆರಳಿ ಗೌರವಿಸಿದರು. ಅವರ ಗಮಕ ಗಾಯನ ಕೇಳಿ ಮೂಕ ವಿಸ್ಮಿತರಾದರು. ಶಿವಮೊಗ್ಗದ ಮತ್ತೂರು-ಹೊಸಹಳ್ಳಿ ಅವಳಿ ಗ್ರಾಮಗಳು ಸಂಗೀತ ಪರಂಪರೆ, ವೇದ-ಶಾಸ್ತ್ರ ಅಧ್ಯಯನಗಳಿಗೆ ತನ್ನದೇ ಆದ ಕೊಡುಗೆಗಳನ್ನ ನೀಡಿವೆ. ಮತ್ತೂರು ಸಂಸ್ಕೃತ ಗ್ರಾಮ ಎಂದು ಎಲ್ಲರಿಗೂ ತಿಳಿದಿದೆ ಆದರೆ ಹೊಸಹಳ್ಳಿ ಗಮಕ ಗ್ರಾಮ ಎಂಬುದು ಗೊತ್ತಿಲ್ಲ. ಆದರೆ ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದ ನಂತರ ಗಮಕ ಕಲೆಯ ಬಗ್ಗೆ ಎಲ್ಲರೂ ಆಸಕ್ತಿಯಿಂದ ನೋಡುತ್ತಿದ್ದಾರೆ. ಹೊಸಹಳ್ಳಿ ಬಗ್ಗೆ ತಿಳಿಯಲು ಉತ್ಸುಕರಾಗಿದ್ದಾರೆ.
ಕೇಶವಮೂರ್ತಿಯವರ ತಂದೆ ರಾಮಸ್ವಾಮಿ ಶಾಸ್ತ್ರಿ ಹಾಗೂ ತಾಯಿ ಲಕ್ಷ್ಮಿದೇವಮ್ಮ. ಶ್ರೀಯುತರು 1934ರಲ್ಲಿ ಜನಿಸಿದರು.. ಬಾಲ್ಯದಿಂದಲೇ ಗಮಕ ಗಾಯನದಲ್ಲಿ ಆಸಕ್ತಿ ಹೊಂದಿದ್ದ ಇವರು ಹದಿನೈದನೇ ವರ್ಷಕ್ಕೆ ಅಭ್ಯಾಸ ಶುರು ಮಾಡಿದರು. ಸುಮಾರು ವರ್ಷಗಳ ಕಾಲ ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಪಂಪನ ಮಹಾ ಭಾರತ, ರನ್ನನ ಗಧಾಯುದ್ಧ, ರಘುವಂಶ, ಕುಮಾರಸಂಭವದ ಶ್ಲೋಕಗಳಿಗೆ ರಾಗ ಸಂಯೋಜನೆ ಮಾಡಿ ಸುಮಾರು ಆರು ದಶಕಗಳ ಕಾಲ ಗಮಕವನ್ನ ದೇಶದೆಲ್ಲೆಡೆ ಪಸರಿಸಿದ್ದಾರೆ.
ಸಿದ್ದಲಿಂಗಯ್ಯ ಸೇರಿದಂತೆ ರಾಜ್ಯದ ಐವರಿಗೆ ಪದ್ಮ ಶ್ರೀ: ಬಿಪಿನ್ ರಾವತ್ ಪದ್ಮ ವಿಭೂಷಣ
ಬಹಳ ಮುಖ್ಯವಾಗಿ ಕೇಶವಮೂರ್ತಿಯವರು ಯಾವುದೇ ಕಾರ್ಯಕ್ರಮಕ್ಕೂ ಬಿಡಿಗಾಸು ಪಡೆದಿಲ್ಲ ಎಂಬುದು ಆಪ್ತರ ಮಾತು. ಹೊಸಹಳ್ಳಿಯಲ್ಲಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಕಲೆಯನ್ನ ಅಭ್ಯಾಸ ಮಾಡಿಸಿರುವ ಕೀರ್ತಿಯೂ ಸಹ ಈ ಹಿರಿಯಜ್ಜನಿಗೆ ಸಲ್ಲುತ್ತೆ. ದೇಶದ ಅನೇಕ ಸಾಧಕರು ಇವರನ್ನ ಹಾಡಿ ಹೊಗಳಿದ್ದಾರೆ. ಕುಮಾರವ್ಯಾಸ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವರ್ಷದ ಗಾಯಕ ಪ್ರಶಸ್ತಿ, ಗಮಕ ಸಿಂಧು, ಗಮಕ ಗಂಧರ್ವ, ಗಮಕ ಕೇಸರಿ, ಗಮಕ ಚೂಡಾಮಣಿ ಪ್ರಶಸ್ತಿಗಳ ಗೌರವ ಸಂದಿದೆ.
ಇಂತಹ ಮಹಾನ್ ಸಾಧಕನನ್ನ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದ್ದು ಎಲ್ಲರಿಗೂ ಸಂತಸ ತಂದಿದೆ. ಶ್ಲೋಕಗಳನ್ನ ವಾಚನ ಮಾಡುವುದು ಸಾಮಾನ್ಯ ಅದನ್ನ ರಾಗ ಸಂಯೋಜನೆ ಮಾಡಿ ಗಾಯನ ಮಾಡುವುದು ಗಮಕ ಕಲೆಯ ಪ್ರಾಕಾರ. ಇದು ಕಠಿಣವೂ ಹೌದು ಚಂಪೂ ಕಾವ್ಯದಂತಹ ಸಾಲುಗಳಿಗೆ, ಪ್ರತಿ ಸಾಲಿಗೂ ವಿವಿಧ ರಾಗ ಸಂಯೋಜನೆ ಮಾಡಲು ವರ್ಷಗಳೇ ಶ್ರಮಿಸಿದ್ದಾರೆ ಕೇಶವಮೂರ್ತಿ. ಅವರಿಗೆ ತುಂಬಾ ಇಷ್ಟವಾದದ್ದು ಕುಮಾರವ್ಯಾಸನ ಗದುಗಿನ ಭಾರತ.
ಸ್ವತ: ಕೇಶವ ಮೂರ್ತಿ ಮಾತನಾಡಿ, ಪದ್ಮಶ್ರೀ ಎಂದೂ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಹಳ್ಳಿಗನೊಬ್ಬನನ್ನ ಅರಸಿ ಬಂದಿದ್ದು ಖುಷಿ ತಂದಿದೆ. ಸರ್ಕಾರ ಗಮಕ ಪ್ರತ್ಸಾಹ ಮಾಡಬೇಕು ಎನ್ನುತ್ತಾರೆ. ಶಿವಮೊಗ್ಗ ಎಂಪಿ ಬಿವೈ ರಾಘವೇಂದ್ರ ಮಾತನಾಡಿ ಅಧ್ಭುತ ಸಾಧಕರನ್ನ ಗುರುತಿಸಿದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ.
ರೈತ ವಿಜ್ಞಾನಿಗೆ ಸಂದ ಪದ್ಮಶ್ರೀ ಗೌರವ : ಅಣ್ಣಿಗೇರಿಯ ಹೆಮ್ಮೆ ಈ ಅಬ್ದುಲ್ ಖಾದರ ನಡಕಟ್ಟಿನ
ಸಚಿವ ನಾರಾಯಣ ಗೌಡ ಮಾತನಾಡಿ ತಮಗೂ ಕೇಶವಮೂರ್ತಿಯವರ ದರ್ಶನ ಜೀವನ ಸಾರ್ಥಕತೆ ತಂದಿದೆ ಎಂದರು. ಬಹಳ ಮುಖ್ಯವಾಗಿ ಹೊಸಹಳ್ಳಿ ಗಮಕ ಕಲೆ ಬೆಳೆದ ಬಗ್ಗೆ ವಿವರಿಸಿದ ಮಧುಕರ್ ಪಟ್ಟಾಭಿ ಮತ್ತೂರ್, ಮೂರ್ತಿಯವರು ಈ ಸಾಧನೆಯನ್ನ ಅನವರತ ಮಾಡಿಕೊಂಡು ಬಂದಿದ್ದಾರೆ. ಈ ವಯಸ್ಸಿನಲ್ಲೂ ಬತ್ತದ ಉತ್ಸಾಹ ಯಾವುದೇ ಯುವ ಕಲಾವಿದನಿಗೆ ಮಾದರಿ. ಹಾಗೂ ಗಮಕ ಗ್ರಾಮ ಹೊಸಹಳ್ಳಿ ಇನ್ನಷ್ಟು ಮೇಲ್ಸ್ತರಕ್ಕೆ ಏರಲಿ ಎಂದರು.
ಕೇಶವಮೂರ್ತಿಯವರ ತಂದೆ ರಾಮಸ್ವಾಮಿ ಶಾಸ್ತ್ರಿ ಹಾಗೂ ತಾಯಿ ಲಕ್ಷ್ಮಿದೇವಮ್ಮ. ಶ್ರೀಯುತರು 1934ರಲ್ಲಿ ಜನಿಸಿದರು.. ಬಾಲ್ಯದಿಂದಲೇ ಗಮಕ ಗಾಯನದಲ್ಲಿ ಆಸಕ್ತಿ ಹೊಂದಿದ್ದ ಇವರು ಹದಿನೈದನೇ ವರ್ಷಕ್ಕೆ ಅಭ್ಯಾಸ ಶುರು ಮಾಡಿದರು. ಸುಮಾರು ವರ್ಷಗಳ ಕಾಲ ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಪಂಪನ ಮಹಾ ಭಾರತ, ರನ್ನನ ಗಧಾಯುದ್ಧ, ರಘುವಂಶ, ಕುಮಾರಸಂಭವದ ಶ್ಲೋಕಗಳಿಗೆ ರಾಗ ಸಂಯೋಜನೆ ಮಾಡಿ ಸುಮಾರು ಆರು ದಶಕಗಳ ಕಾಲ ಗಮಕವನ್ನ ದೇಶದೆಲ್ಲೆಡೆ ಪಸರಿಸಿದ್ದಾರೆ.
ಸಿದ್ದಲಿಂಗಯ್ಯ ಸೇರಿದಂತೆ ರಾಜ್ಯದ ಐವರಿಗೆ ಪದ್ಮ ಶ್ರೀ: ಬಿಪಿನ್ ರಾವತ್ ಪದ್ಮ ವಿಭೂಷಣ
ಬಹಳ ಮುಖ್ಯವಾಗಿ ಕೇಶವಮೂರ್ತಿಯವರು ಯಾವುದೇ ಕಾರ್ಯಕ್ರಮಕ್ಕೂ ಬಿಡಿಗಾಸು ಪಡೆದಿಲ್ಲ ಎಂಬುದು ಆಪ್ತರ ಮಾತು. ಹೊಸಹಳ್ಳಿಯಲ್ಲಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಕಲೆಯನ್ನ ಅಭ್ಯಾಸ ಮಾಡಿಸಿರುವ ಕೀರ್ತಿಯೂ ಸಹ ಈ ಹಿರಿಯಜ್ಜನಿಗೆ ಸಲ್ಲುತ್ತೆ. ದೇಶದ ಅನೇಕ ಸಾಧಕರು ಇವರನ್ನ ಹಾಡಿ ಹೊಗಳಿದ್ದಾರೆ. ಕುಮಾರವ್ಯಾಸ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವರ್ಷದ ಗಾಯಕ ಪ್ರಶಸ್ತಿ, ಗಮಕ ಸಿಂಧು, ಗಮಕ ಗಂಧರ್ವ, ಗಮಕ ಕೇಸರಿ, ಗಮಕ ಚೂಡಾಮಣಿ ಪ್ರಶಸ್ತಿಗಳ ಗೌರವ ಸಂದಿದೆ.
ಇಂತಹ ಮಹಾನ್ ಸಾಧಕನನ್ನ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದ್ದು ಎಲ್ಲರಿಗೂ ಸಂತಸ ತಂದಿದೆ. ಶ್ಲೋಕಗಳನ್ನ ವಾಚನ ಮಾಡುವುದು ಸಾಮಾನ್ಯ ಅದನ್ನ ರಾಗ ಸಂಯೋಜನೆ ಮಾಡಿ ಗಾಯನ ಮಾಡುವುದು ಗಮಕ ಕಲೆಯ ಪ್ರಾಕಾರ. ಇದು ಕಠಿಣವೂ ಹೌದು ಚಂಪೂ ಕಾವ್ಯದಂತಹ ಸಾಲುಗಳಿಗೆ, ಪ್ರತಿ ಸಾಲಿಗೂ ವಿವಿಧ ರಾಗ ಸಂಯೋಜನೆ ಮಾಡಲು ವರ್ಷಗಳೇ ಶ್ರಮಿಸಿದ್ದಾರೆ ಕೇಶವಮೂರ್ತಿ. ಅವರಿಗೆ ತುಂಬಾ ಇಷ್ಟವಾದದ್ದು ಕುಮಾರವ್ಯಾಸನ ಗದುಗಿನ ಭಾರತ.
ಸ್ವತ: ಕೇಶವ ಮೂರ್ತಿ ಮಾತನಾಡಿ, ಪದ್ಮಶ್ರೀ ಎಂದೂ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಹಳ್ಳಿಗನೊಬ್ಬನನ್ನ ಅರಸಿ ಬಂದಿದ್ದು ಖುಷಿ ತಂದಿದೆ. ಸರ್ಕಾರ ಗಮಕ ಪ್ರತ್ಸಾಹ ಮಾಡಬೇಕು ಎನ್ನುತ್ತಾರೆ. ಶಿವಮೊಗ್ಗ ಎಂಪಿ ಬಿವೈ ರಾಘವೇಂದ್ರ ಮಾತನಾಡಿ ಅಧ್ಭುತ ಸಾಧಕರನ್ನ ಗುರುತಿಸಿದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ.
ರೈತ ವಿಜ್ಞಾನಿಗೆ ಸಂದ ಪದ್ಮಶ್ರೀ ಗೌರವ : ಅಣ್ಣಿಗೇರಿಯ ಹೆಮ್ಮೆ ಈ ಅಬ್ದುಲ್ ಖಾದರ ನಡಕಟ್ಟಿನ
ಸಚಿವ ನಾರಾಯಣ ಗೌಡ ಮಾತನಾಡಿ ತಮಗೂ ಕೇಶವಮೂರ್ತಿಯವರ ದರ್ಶನ ಜೀವನ ಸಾರ್ಥಕತೆ ತಂದಿದೆ ಎಂದರು. ಬಹಳ ಮುಖ್ಯವಾಗಿ ಹೊಸಹಳ್ಳಿ ಗಮಕ ಕಲೆ ಬೆಳೆದ ಬಗ್ಗೆ ವಿವರಿಸಿದ ಮಧುಕರ್ ಪಟ್ಟಾಭಿ ಮತ್ತೂರ್, ಮೂರ್ತಿಯವರು ಈ ಸಾಧನೆಯನ್ನ ಅನವರತ ಮಾಡಿಕೊಂಡು ಬಂದಿದ್ದಾರೆ. ಈ ವಯಸ್ಸಿನಲ್ಲೂ ಬತ್ತದ ಉತ್ಸಾಹ ಯಾವುದೇ ಯುವ ಕಲಾವಿದನಿಗೆ ಮಾದರಿ. ಹಾಗೂ ಗಮಕ ಗ್ರಾಮ ಹೊಸಹಳ್ಳಿ ಇನ್ನಷ್ಟು ಮೇಲ್ಸ್ತರಕ್ಕೆ ಏರಲಿ ಎಂದರು.