ಆತೀಶ್ ಬಿ.ಕನ್ನಾಳೆ ಶಿವಮೊಗ್ಗ
ಶಿವಮೊಗ್ಗ: 'ಗಂಡ, ಹೆಂಡತಿ ಜಗಳದ ನಡುವೆ ಕೂಸು ಬಡವಾಯಿತು' ಎಂಬಂತಾಗಿದೆ ಶಿವಮೊಗ್ಗದ ವ್ಯಾಪಾರಸ್ಥರ ಸ್ಥಿತಿ! ಸಮಾಜವಾದದ ಸಿದ್ಧಾಂತವನ್ನು ಸಾರಿದ ಪುಣ್ಯಭೂಮಿ ಶಿವಮೊಗ್ಗ. ಈ ಶಾಂತಿಯ ತೋಟ ಕೋಮುಜ್ವಾಲೆಗೆ ಸಿಲುಕಿ ಅಕ್ಷರಶಃ ಅಗ್ನಿಯ ಕುಂಡವಾಗಿ ಮಾರ್ಪಡುತ್ತಿದೆ. ಒಂದಾದ ಮೇಲೊಂದರಂತೆ ಕೋಮು ಸೌಹಾರ್ದತೆ ಕದಡುವ ಘಟನೆಗಳು ನಡೆಯುತ್ತಿದ್ದು, ಇದು ಬಡವರು, ದುಡಿಯುವ ವರ್ಗ ಹಾಗೂ ಉದ್ಯಮಿಗಳ ಮೇಲೆ ನೇರ ಪರಿಣಾಮ ಬೀರಿದೆ. ನಿರಂತರ ಕೋಮುಗಲಭೆಗಳಿಂದಾಗಿ ಉದ್ಯಮ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿದೆ. ಜಿಲ್ಲೆಯ ಜನ ಸದಾ ಅನುಮಾನ ಮತ್ತು ಭೀತಿಯಲ್ಲೇ ಬದುಕುವಂತಾಗಿದೆ. ಮೂರು ವರ್ಷಗಳ ಕಾಲ ಕಾಡಿದ ಕೋವಿಡ್ನಿಂದಾಗಿ ಉದ್ಯಮಗಳು ಕಮರಿದ್ದವು. ಇದಾದ ಬಳಿಕವಾದರೂ ವ್ಯಾಪಾರ ವಹಿವಾಟು ಮತ್ತೆ ಹಳಿಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಎದುರಾಗಿದ್ದು ಮಾತ್ರ ಬರೀ ನಿರಾಸೆ. ಇದಕ್ಕೆ ಕಾರಣ, ನಗರದಲ್ಲಿ ನಡೆದ ಸಾಲು ಸಾಲು ಅಹಿತಕರ ಘಟನೆಗಳು ಹಾಗೂ ಅದರಿಂದ ಎದುರಾದ ನಿಷೇಧಾಜ್ಞೆಯಂತಹ ತೊಡಕುಗಳು.
ಇತ್ತೀಚೆಗೆ ಅಮೀರ್ ಅಹಮ್ಮದ್ ವೃತ್ತದಲ್ಲಿ ನಡೆದ ಗಲಾಟೆಯೂ ದುಡಿಯುವ ವರ್ಗವನ್ನು ಮತ್ತಷ್ಟು ಪಾತಾಳಕ್ಕೆ ತಳ್ಳಿದೆ. ಬರೀ ಈ ಮೂರು ದಿನಗಳಲ್ಲಿ ಅಂದಾಜು 30-35 ಕೋಟಿಯಷ್ಟು ನಷ್ಟವಾಗಿದೆ. ಶ್ರಾವಣ ಆರಂಭವಾಗಿದ್ದು ಮದುವೆ ಇತ್ಯಾದಿ ಶುಭ ಕಾರ್ಯಗಳಿಗೆ ಬಟ್ಟೆಗಳನ್ನು ಖರೀದಿಸುವ ಪ್ರಕ್ರಿಯೆ ಜೋರಾಗಿ ನಡೆಯಬೇಕಿತ್ತು. ಆದರೆ, ಅನಪೇಕ್ಷಿತ ಬಂದ್ ಜವಳಿ ಉದ್ಯಮದ ಮೇಲೆ ತಣ್ಣೀರು ಎರಚಿದೆ. ಜತೆಗೆ, ದಿನಸಿ ಅಂಗಡಿ, ಬೀದಿ ಬದಿ ವ್ಯಾಪಾರಿಗಳ ಬದುಕಿಗೂ ಗಲಭೆಗಳು ಕರಿಛಾಯೆಯಾಗಿ ಕಾಡುತ್ತಿವೆ. ಸಾಮಾನ್ಯವಾಗಿ ಶ್ರಾವಣ ಸೀಸನ್ನಲ್ಲಿ ಎಲ್ಲ ಉದ್ಯಮಗಳು ಸೇರಿ ನಿತ್ಯ ಅಂದಾಜು 10 ಕೋಟಿ ರೂ.ಗೂ ಅಧಿಕ ವಹಿವಾಟು ಆಗುತ್ತದೆ. ಆದರೆ, ನಿಷೇಧಾಜ್ಞೆ ಈ ಖುಷಿಯನ್ನು ಕಸಿದಿದೆ.
ಹೋಟೆಲ್, ಹೂವು, ಹಣ್ಣಿನ ವ್ಯಾಪಾರಸ್ಥರಂತೂ ಹಿಡಿಶಾಪ ಹಾಕುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಸುಮಾರು 150ಕ್ಕೂ ಅಧಿಕ ಹೋಟೆಲ್ಗಳಿದ್ದು, ಜನರ ಓಡಾಟವೇ ವಿರಳವಾಗಿರುವುದರಿಂದ ವ್ಯಾಪಾರವೇ ಇಲ್ಲ. ಇದು ತರಕಾರಿ, ದಿನಸಿ ಸಾಮಗ್ರಿಗಳ ಬೇಡಿಕೆಯನ್ನು ಕುಸಿಯುವಂತೆ ಮಾಡಿದೆ. ಪರೋಕ್ಷವಾಗಿ ಬೆಳೆ ಬೆಳೆದ ರೈತನ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ.
ಸರಣಿ ಸವಾಲುಗಳ ನಡುವೆ ಉದ್ಯಮಿಗಳು
ಕೋವಿಡ್, ಹಿಜಾಬ್, ಹರ್ಷ ಕೊಲೆ ಪ್ರಕರಣಗಳಿಂದಾಗಿಯೇ ಹಣ್ಣುಗಾಯಿ ನೀರುಗಾಯಿಯಾಗಿರುವ ಉದ್ಯಮಿಗಳಿಗೆ ವೀರ ಸಾವರ್ಕರ್ ಅವರ ಫ್ಲೆಕ್ಸ್ ತೆರವು ಪ್ರಕರಣ ಗಾಯದ ಮೇಲೆ ಬರೆ ಎಳೆದಿದೆ.
ಶಿವಮೊಗ್ಗ ಹಿಂದೆಂದೂ ಕಂಡುಕೇಳರಿಯದ ಕಫ್ರ್ಯೂ, ನಿಷೇಧಾಜ್ಞೆಗಳಿಗೆ ಸಾಕ್ಷಿಯಾಗಿದೆ. ಸಾವರ್ಕರ್ ಚಿತ್ರ ತೆರವುಗೊಳಿಸಿದ್ದಕ್ಕೆ ಈಗ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಇದನ್ನೇ ನಂಬಿಕೊಂಡಿರುವ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ.
ನಿಷೇಧಾಜ್ಞೆಯಂತಹ ತುರ್ತು ಸಂದರ್ಭಗಳಲ್ಲಿ ವ್ಯಾಪಾರ, ವಹಿವಾಟು ನಿಲ್ಲಿಸಬಹುದು. ಆದರೆ, ವ್ಯಾಪಾರಸ್ಥರು ಕಡ್ಡಾಯವಾಗಿ ಬಾಡಿಗೆ, ವಿದ್ಯುತ್ ಬಿಲ್ ಪಾವತಿಸಲೇಬೇಕು. ನೌಕರರಿಗೆ ಸಂಬಳ ನೀಡಲೇಬೇಕು. ಇದು ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ಹೊರೆಯಾಗಿ ಪರಿಣಮಿಸುತ್ತಿದೆ. ಜತೆಗೆ, ಅರೆಕಾಲಿಕ ನಿರುದ್ಯೋಗಕ್ಕೂ ಕಾರಣವಾಗುತ್ತಿದೆ. ಇದನ್ನು ಜಿಲ್ಲಾಡಳಿತ, ಜಿಲ್ಲಾಪೊಲೀಸ್ ಇಲಾಖೆ ಹಾಗೂ ಆಡಳಿತಾರೂಢ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ಸ್ಥಳೀಯ ಉದ್ಯಮಿಗಳ ಆಗ್ರಹವಾಗಿದೆ.
ಉಸಾಬರಿಯೇ ಬೇಡವೆಂದು ಬೇರೆ ಜಿಲ್ಲೆಗೆ ಶಿಫ್ಟ್
ಶಿವಮೊಗ್ಗ ಜಿಲ್ಲೆ ವಿಭಜನೆಗೊಂಡು ಭೌಗೋಳಿಕವಾಗಿ ಬೇರ್ಪಟ್ಟರೂ ದಾವಣಗೆರೆ ಜಿಲ್ಲೆಯ ಕೆಲವು ತಾಲೂಕಿನವರು ಈಗಲೂ ಶಿವಮೊಗ್ಗದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು ತಾಲೂಕಿನವರ ಪಾಲಿಗೆ ಆರೋಗ್ಯ ಮತ್ತು ವಾಣಿಜ್ಯಕ್ಕೆ ಶಿವಮೊಗ್ಗವೇ ಅಚ್ಚುಮೆಚ್ಚು. ಆದರೆ, ಇತ್ತೀಚಿನ ಘಟನೆಗಳಿಂದಾಗಿ ನೆರೆ ಜಿಲ್ಲೆಯ ಕೆಲವು ತಾಲೂಕಿನವರು ಶಿವಮೊಗ್ಗದ ಸಹವಾಸವೇ ಬೇಡವೆಂದು ತಮ್ಮ ಜಿಲ್ಲಾವ್ಯಾಪ್ತಿಯಲ್ಲೇ ವ್ಯಾಪಾರಕ್ಕೆ ಮುಂದಾಗುತ್ತಿದ್ದಾರೆ. ಇದರಿಂದ ಶಾಶ್ವತವಾಗಿಯೇ ಈ ವಹಿವಾಟಿನ ಕೊಂಡಿ ಕಳಚುವ ಭೀತಿಯೂ ವ್ಯಾಪಾರಿಗಳಿಗಿದೆ. ಇದ್ಯಾವುದೂ ಆಳುವ ವರ್ಗಗಳ ಕಣ್ಣಿಗೆ ಕಾಣುತ್ತಿಲ್ಲ ಎನ್ನುವುದು ವ್ಯಾಪಾರಿಗಳ ಅಳಲು.
ಪಿಎಂ ಸ್ವನಿಧಿ ಕಂತು ಕಟ್ಟುವುದಕ್ಕೂ ಕಷ್ಟ
ಬೀದಿ ಬದಿ ವ್ಯಾಪಾರಿಗಳ ಬದುಕು ಹಸನಾಗಲಿ ಎಂಬ ಕಾರಣಕ್ಕೆ ಕೇಂದ್ರ ಸರಕಾರ ಪಿಎಂ ಸ್ವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಇದರಡಿ ಶಿವಮೊಗ್ಗದಲ್ಲಿ 2500 ಬೀದಿ ಬದಿ ವ್ಯಾಪಾರಿಗಳು 10 ಸಾವಿರ ರೂ. ಸಾಲ ಪಡೆದಿದ್ದಾರೆ. ಮಾಸಿಕ 800 ರೂ. ಅನ್ನು ಕಂತಿನ ರೂಪದಲ್ಲಿ ಬ್ಯಾಂಕ್ಗಳಿಗೆ ಪಾವತಿಸಬೇಕು. ಕೇಂದ್ರದ ಇನ್ನೊಂದು ಯೋಜನೆಯಾದ ಸಂಕಲ್ಪ ನಿಧಿಯಡಿ 20 ಸಾವಿರ ರೂ. ಸಾಲ ಪಡೆದಿದ್ದಾರೆ. ಆದರೆ, ವಹಿವಾಟು ಸರಿಯಾಗಿ ನಡೆಯದೇ ಇರುವುದರಿಂದ ಕಂತು ಪಾವತಿಗೂ ಹಣವಿಲ್ಲ.
ಗಲಾಟೆ ಹಿನ್ನೆಲೆ ನಿಷೇಧಾಜ್ಞೆ ವಿಧಿಸಿರುವುದರಿಂದ ಶಿವಮೊಗ್ಗ ನಗರ ವ್ಯಾಪ್ತಿಯೊಂದರಲ್ಲೇ ಕಳೆದ ಮೂರು ದಿನಗಳಲ್ಲಿ ಅಂದಾಜು 30 ಕೋಟಿ ರೂ.ದಷ್ಟು ನಷ್ಟ ಉಂಟಾಗಿದೆ. ಜವಳಿ ಉದ್ಯಮವಂತೂ ನೆಲಕ್ಕಚ್ಚಿದೆ. ಶ್ರಾವಣ ಆರಂಭಗೊಂಡಿದ್ದು, ಖರೀದಿ ಭರ್ಜರಿಯಾಗಿ ನಡೆಯಬೇಕು. ಆದರೆ, ನಮ್ಮಲ್ಲಿ ನಿಷೇಧಾಜ್ಞೆಯಿಂದ ಅಂಗಡಿಗಳೇ ತೆರೆಯುವಂತಿಲ್ಲ. ತೆರೆದರೂ ಜನರು ಹೊರಗೆ ಬರುವುದಕ್ಕೂ ಭಯಪಡುವ ವಾತಾವರಣವಿದೆ. ಈ ಕುರಿತು ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಶುಕ್ರವಾರ ಸಭೆ ಕರೆಯಲಾಗಿದೆ.
ಎನ್.ಗೋಪಿನಾಥ್, ಅಧ್ಯಕ್ಷ, ಜಿಲ್ಲಾವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಪಾಲಿಕೆಯಿಂದ ಜನಸಂಖ್ಯೆಯ ಆಧಾರದ ಮೇಲೆ ಇದುವರೆಗೆ ಎರಡೂವರೆ ಸಾವಿರ ಜನರಿಗೆ ಗುರುತಿನ ಚೀಟಿ ನೀಡಲಾಗಿದೆ. ಪ್ರತಿ ಸಲ ಕಫ್ರ್ಯೂ, ನಿಷೇಧಾಜ್ಞೆ ಆದಾಗಲೂ ಮೊದಲು ಕಷ್ಟ ಎದುರಾಗುವುದೇ ಬೀದಿ ಬದಿ ವ್ಯಾಪಾರಿಗಳಿಗೆ. ದಿನದ ದುಡಿಮೆಯನ್ನೇ ನಂಬಿಕೊಂಡಿರುವವರ ಹೊಟ್ಟೆಯ ಮೇಲೆ ನಿರಂತರ ಪ್ರಹಾರ ಮಾಡಲಾಗುತ್ತಿದೆ.
ಚನ್ನವೀರಪ್ಪ, ಅಧ್ಯಕ್ಷ, ಬೀದಿ ಬದಿ ವ್ಯಾಪಾರಿಗಳ ಸಂಘ, ಶಿವಮೊಗ್ಗ
ಶಿವಮೊಗ್ಗ: 'ಗಂಡ, ಹೆಂಡತಿ ಜಗಳದ ನಡುವೆ ಕೂಸು ಬಡವಾಯಿತು' ಎಂಬಂತಾಗಿದೆ ಶಿವಮೊಗ್ಗದ ವ್ಯಾಪಾರಸ್ಥರ ಸ್ಥಿತಿ! ಸಮಾಜವಾದದ ಸಿದ್ಧಾಂತವನ್ನು ಸಾರಿದ ಪುಣ್ಯಭೂಮಿ ಶಿವಮೊಗ್ಗ. ಈ ಶಾಂತಿಯ ತೋಟ ಕೋಮುಜ್ವಾಲೆಗೆ ಸಿಲುಕಿ ಅಕ್ಷರಶಃ ಅಗ್ನಿಯ ಕುಂಡವಾಗಿ ಮಾರ್ಪಡುತ್ತಿದೆ. ಒಂದಾದ ಮೇಲೊಂದರಂತೆ ಕೋಮು ಸೌಹಾರ್ದತೆ ಕದಡುವ ಘಟನೆಗಳು ನಡೆಯುತ್ತಿದ್ದು, ಇದು ಬಡವರು, ದುಡಿಯುವ ವರ್ಗ ಹಾಗೂ ಉದ್ಯಮಿಗಳ ಮೇಲೆ ನೇರ ಪರಿಣಾಮ ಬೀರಿದೆ.
ಇತ್ತೀಚೆಗೆ ಅಮೀರ್ ಅಹಮ್ಮದ್ ವೃತ್ತದಲ್ಲಿ ನಡೆದ ಗಲಾಟೆಯೂ ದುಡಿಯುವ ವರ್ಗವನ್ನು ಮತ್ತಷ್ಟು ಪಾತಾಳಕ್ಕೆ ತಳ್ಳಿದೆ. ಬರೀ ಈ ಮೂರು ದಿನಗಳಲ್ಲಿ ಅಂದಾಜು 30-35 ಕೋಟಿಯಷ್ಟು ನಷ್ಟವಾಗಿದೆ. ಶ್ರಾವಣ ಆರಂಭವಾಗಿದ್ದು ಮದುವೆ ಇತ್ಯಾದಿ ಶುಭ ಕಾರ್ಯಗಳಿಗೆ ಬಟ್ಟೆಗಳನ್ನು ಖರೀದಿಸುವ ಪ್ರಕ್ರಿಯೆ ಜೋರಾಗಿ ನಡೆಯಬೇಕಿತ್ತು. ಆದರೆ, ಅನಪೇಕ್ಷಿತ ಬಂದ್ ಜವಳಿ ಉದ್ಯಮದ ಮೇಲೆ ತಣ್ಣೀರು ಎರಚಿದೆ. ಜತೆಗೆ, ದಿನಸಿ ಅಂಗಡಿ, ಬೀದಿ ಬದಿ ವ್ಯಾಪಾರಿಗಳ ಬದುಕಿಗೂ ಗಲಭೆಗಳು ಕರಿಛಾಯೆಯಾಗಿ ಕಾಡುತ್ತಿವೆ. ಸಾಮಾನ್ಯವಾಗಿ ಶ್ರಾವಣ ಸೀಸನ್ನಲ್ಲಿ ಎಲ್ಲ ಉದ್ಯಮಗಳು ಸೇರಿ ನಿತ್ಯ ಅಂದಾಜು 10 ಕೋಟಿ ರೂ.ಗೂ ಅಧಿಕ ವಹಿವಾಟು ಆಗುತ್ತದೆ. ಆದರೆ, ನಿಷೇಧಾಜ್ಞೆ ಈ ಖುಷಿಯನ್ನು ಕಸಿದಿದೆ.
ಹೋಟೆಲ್, ಹೂವು, ಹಣ್ಣಿನ ವ್ಯಾಪಾರಸ್ಥರಂತೂ ಹಿಡಿಶಾಪ ಹಾಕುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಸುಮಾರು 150ಕ್ಕೂ ಅಧಿಕ ಹೋಟೆಲ್ಗಳಿದ್ದು, ಜನರ ಓಡಾಟವೇ ವಿರಳವಾಗಿರುವುದರಿಂದ ವ್ಯಾಪಾರವೇ ಇಲ್ಲ. ಇದು ತರಕಾರಿ, ದಿನಸಿ ಸಾಮಗ್ರಿಗಳ ಬೇಡಿಕೆಯನ್ನು ಕುಸಿಯುವಂತೆ ಮಾಡಿದೆ. ಪರೋಕ್ಷವಾಗಿ ಬೆಳೆ ಬೆಳೆದ ರೈತನ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ.
ಸರಣಿ ಸವಾಲುಗಳ ನಡುವೆ ಉದ್ಯಮಿಗಳು
ಕೋವಿಡ್, ಹಿಜಾಬ್, ಹರ್ಷ ಕೊಲೆ ಪ್ರಕರಣಗಳಿಂದಾಗಿಯೇ ಹಣ್ಣುಗಾಯಿ ನೀರುಗಾಯಿಯಾಗಿರುವ ಉದ್ಯಮಿಗಳಿಗೆ ವೀರ ಸಾವರ್ಕರ್ ಅವರ ಫ್ಲೆಕ್ಸ್ ತೆರವು ಪ್ರಕರಣ ಗಾಯದ ಮೇಲೆ ಬರೆ ಎಳೆದಿದೆ.
ಶಿವಮೊಗ್ಗ ಹಿಂದೆಂದೂ ಕಂಡುಕೇಳರಿಯದ ಕಫ್ರ್ಯೂ, ನಿಷೇಧಾಜ್ಞೆಗಳಿಗೆ ಸಾಕ್ಷಿಯಾಗಿದೆ. ಸಾವರ್ಕರ್ ಚಿತ್ರ ತೆರವುಗೊಳಿಸಿದ್ದಕ್ಕೆ ಈಗ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಇದನ್ನೇ ನಂಬಿಕೊಂಡಿರುವ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ.
ನಿಷೇಧಾಜ್ಞೆಯಂತಹ ತುರ್ತು ಸಂದರ್ಭಗಳಲ್ಲಿ ವ್ಯಾಪಾರ, ವಹಿವಾಟು ನಿಲ್ಲಿಸಬಹುದು. ಆದರೆ, ವ್ಯಾಪಾರಸ್ಥರು ಕಡ್ಡಾಯವಾಗಿ ಬಾಡಿಗೆ, ವಿದ್ಯುತ್ ಬಿಲ್ ಪಾವತಿಸಲೇಬೇಕು. ನೌಕರರಿಗೆ ಸಂಬಳ ನೀಡಲೇಬೇಕು. ಇದು ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ಹೊರೆಯಾಗಿ ಪರಿಣಮಿಸುತ್ತಿದೆ. ಜತೆಗೆ, ಅರೆಕಾಲಿಕ ನಿರುದ್ಯೋಗಕ್ಕೂ ಕಾರಣವಾಗುತ್ತಿದೆ. ಇದನ್ನು ಜಿಲ್ಲಾಡಳಿತ, ಜಿಲ್ಲಾಪೊಲೀಸ್ ಇಲಾಖೆ ಹಾಗೂ ಆಡಳಿತಾರೂಢ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ಸ್ಥಳೀಯ ಉದ್ಯಮಿಗಳ ಆಗ್ರಹವಾಗಿದೆ.
ಉಸಾಬರಿಯೇ ಬೇಡವೆಂದು ಬೇರೆ ಜಿಲ್ಲೆಗೆ ಶಿಫ್ಟ್
ಶಿವಮೊಗ್ಗ ಜಿಲ್ಲೆ ವಿಭಜನೆಗೊಂಡು ಭೌಗೋಳಿಕವಾಗಿ ಬೇರ್ಪಟ್ಟರೂ ದಾವಣಗೆರೆ ಜಿಲ್ಲೆಯ ಕೆಲವು ತಾಲೂಕಿನವರು ಈಗಲೂ ಶಿವಮೊಗ್ಗದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು ತಾಲೂಕಿನವರ ಪಾಲಿಗೆ ಆರೋಗ್ಯ ಮತ್ತು ವಾಣಿಜ್ಯಕ್ಕೆ ಶಿವಮೊಗ್ಗವೇ ಅಚ್ಚುಮೆಚ್ಚು. ಆದರೆ, ಇತ್ತೀಚಿನ ಘಟನೆಗಳಿಂದಾಗಿ ನೆರೆ ಜಿಲ್ಲೆಯ ಕೆಲವು ತಾಲೂಕಿನವರು ಶಿವಮೊಗ್ಗದ ಸಹವಾಸವೇ ಬೇಡವೆಂದು ತಮ್ಮ ಜಿಲ್ಲಾವ್ಯಾಪ್ತಿಯಲ್ಲೇ ವ್ಯಾಪಾರಕ್ಕೆ ಮುಂದಾಗುತ್ತಿದ್ದಾರೆ. ಇದರಿಂದ ಶಾಶ್ವತವಾಗಿಯೇ ಈ ವಹಿವಾಟಿನ ಕೊಂಡಿ ಕಳಚುವ ಭೀತಿಯೂ ವ್ಯಾಪಾರಿಗಳಿಗಿದೆ. ಇದ್ಯಾವುದೂ ಆಳುವ ವರ್ಗಗಳ ಕಣ್ಣಿಗೆ ಕಾಣುತ್ತಿಲ್ಲ ಎನ್ನುವುದು ವ್ಯಾಪಾರಿಗಳ ಅಳಲು.
ಪಿಎಂ ಸ್ವನಿಧಿ ಕಂತು ಕಟ್ಟುವುದಕ್ಕೂ ಕಷ್ಟ
ಬೀದಿ ಬದಿ ವ್ಯಾಪಾರಿಗಳ ಬದುಕು ಹಸನಾಗಲಿ ಎಂಬ ಕಾರಣಕ್ಕೆ ಕೇಂದ್ರ ಸರಕಾರ ಪಿಎಂ ಸ್ವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಇದರಡಿ ಶಿವಮೊಗ್ಗದಲ್ಲಿ 2500 ಬೀದಿ ಬದಿ ವ್ಯಾಪಾರಿಗಳು 10 ಸಾವಿರ ರೂ. ಸಾಲ ಪಡೆದಿದ್ದಾರೆ. ಮಾಸಿಕ 800 ರೂ. ಅನ್ನು ಕಂತಿನ ರೂಪದಲ್ಲಿ ಬ್ಯಾಂಕ್ಗಳಿಗೆ ಪಾವತಿಸಬೇಕು. ಕೇಂದ್ರದ ಇನ್ನೊಂದು ಯೋಜನೆಯಾದ ಸಂಕಲ್ಪ ನಿಧಿಯಡಿ 20 ಸಾವಿರ ರೂ. ಸಾಲ ಪಡೆದಿದ್ದಾರೆ. ಆದರೆ, ವಹಿವಾಟು ಸರಿಯಾಗಿ ನಡೆಯದೇ ಇರುವುದರಿಂದ ಕಂತು ಪಾವತಿಗೂ ಹಣವಿಲ್ಲ.
ಗಲಾಟೆ ಹಿನ್ನೆಲೆ ನಿಷೇಧಾಜ್ಞೆ ವಿಧಿಸಿರುವುದರಿಂದ ಶಿವಮೊಗ್ಗ ನಗರ ವ್ಯಾಪ್ತಿಯೊಂದರಲ್ಲೇ ಕಳೆದ ಮೂರು ದಿನಗಳಲ್ಲಿ ಅಂದಾಜು 30 ಕೋಟಿ ರೂ.ದಷ್ಟು ನಷ್ಟ ಉಂಟಾಗಿದೆ. ಜವಳಿ ಉದ್ಯಮವಂತೂ ನೆಲಕ್ಕಚ್ಚಿದೆ. ಶ್ರಾವಣ ಆರಂಭಗೊಂಡಿದ್ದು, ಖರೀದಿ ಭರ್ಜರಿಯಾಗಿ ನಡೆಯಬೇಕು. ಆದರೆ, ನಮ್ಮಲ್ಲಿ ನಿಷೇಧಾಜ್ಞೆಯಿಂದ ಅಂಗಡಿಗಳೇ ತೆರೆಯುವಂತಿಲ್ಲ. ತೆರೆದರೂ ಜನರು ಹೊರಗೆ ಬರುವುದಕ್ಕೂ ಭಯಪಡುವ ವಾತಾವರಣವಿದೆ. ಈ ಕುರಿತು ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಶುಕ್ರವಾರ ಸಭೆ ಕರೆಯಲಾಗಿದೆ.
ಎನ್.ಗೋಪಿನಾಥ್, ಅಧ್ಯಕ್ಷ, ಜಿಲ್ಲಾವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಪಾಲಿಕೆಯಿಂದ ಜನಸಂಖ್ಯೆಯ ಆಧಾರದ ಮೇಲೆ ಇದುವರೆಗೆ ಎರಡೂವರೆ ಸಾವಿರ ಜನರಿಗೆ ಗುರುತಿನ ಚೀಟಿ ನೀಡಲಾಗಿದೆ. ಪ್ರತಿ ಸಲ ಕಫ್ರ್ಯೂ, ನಿಷೇಧಾಜ್ಞೆ ಆದಾಗಲೂ ಮೊದಲು ಕಷ್ಟ ಎದುರಾಗುವುದೇ ಬೀದಿ ಬದಿ ವ್ಯಾಪಾರಿಗಳಿಗೆ. ದಿನದ ದುಡಿಮೆಯನ್ನೇ ನಂಬಿಕೊಂಡಿರುವವರ ಹೊಟ್ಟೆಯ ಮೇಲೆ ನಿರಂತರ ಪ್ರಹಾರ ಮಾಡಲಾಗುತ್ತಿದೆ.
ಚನ್ನವೀರಪ್ಪ, ಅಧ್ಯಕ್ಷ, ಬೀದಿ ಬದಿ ವ್ಯಾಪಾರಿಗಳ ಸಂಘ, ಶಿವಮೊಗ್ಗ