ಆ್ಯಪ್ನಗರ

ಎಲ್ಲರ ಹೃದಯದಲ್ಲಿ ಶಿವಶರಣರ ಭಾವೈಕ್ಯ ಜ್ಯೋತಿ

ಬಸವಾದಿ ಶಿವಶರಣರು ಭಾವೈಕ್ಯತೆಯ ಮೂಲಕವೇ ಸಮಾಜವನ್ನು ಕಟ್ಟಿದ್ದರು. ಆದರ್ಶ, ಸುಖೀ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಅವರು ಬಿತ್ತಿದ ಭಾವೈಕ್ಯದ ಗುಣಗಳು ಇಂದಿನ ವರೆಗೂ ಕನ್ನಡ ನಾಡಿನ ಜನರಲ್ಲಿರಕ್ತವಾಗಿ ಹರಿದು ಬರುತ್ತಿವೆ. ಅಂತರಂಗ ಬೆಳಗುತ್ತಿವೆ ಎಂದು ಗದಗ ಜಿಲ್ಲೆಯ ಡಂಬಳದ ತೋಂಟದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದರು.

Vijaya Karnataka 29 Nov 2019, 5:00 am
ಆನಂದಪುರಂ: ಬಸವಾದಿ ಶಿವಶರಣರು ಭಾವೈಕ್ಯತೆಯ ಮೂಲಕವೇ ಸಮಾಜವನ್ನು ಕಟ್ಟಿದ್ದರು. ಆದರ್ಶ, ಸುಖೀ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಅವರು ಬಿತ್ತಿದ ಭಾವೈಕ್ಯದ ಗುಣಗಳು ಇಂದಿನ ವರೆಗೂ ಕನ್ನಡ ನಾಡಿನ ಜನರಲ್ಲಿರಕ್ತವಾಗಿ ಹರಿದು ಬರುತ್ತಿವೆ. ಅಂತರಂಗ ಬೆಳಗುತ್ತಿವೆ ಎಂದು ಗದಗ ಜಿಲ್ಲೆಯ ಡಂಬಳದ ತೋಂಟದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದರು.
Vijaya Karnataka Web 28ANPP1_46


ಅವರು ಮಂಗಳವಾರ ಮುರುಘಾಮಠದಲ್ಲಿಐತಿಹಾಸಿಕ ಕಾರ್ತಿಕ ದೀಪೋತ್ಸವ ನಿಮಿತ್ತ ಹಮ್ಮಿಕೊಳ್ಳಲಾದ ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನದ ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು. ಸಾನ್ನಿಧ್ಯ ವಹಿಸಿದ್ಧ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕರಾದ ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ ಮಾತನಾಡಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಮಾಜಿ ಶಾಸಕ ಎಲ್‌.ಟಿ.ಹೆಗಡೆ, ಕವಲೇದುರ್ಗದ ರಾಜಗುರು ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಗುತ್ತಲ ಕಲ್ಮಠದ ಶ್ರೀಪ್ರಭು ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ, ಮಾಡಾಳು ವಿರಕ್ತ ಮಠದ ಶ್ರೀಮರುಳಸಿದ್ಧ ಸ್ವಾಮೀಜಿ, ಹಾರ್ನಹಳ್ಳಿ ಚೌಕಿ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಸಾಗರದ ಎಪಿಎಂಸಿ ಅಧ್ಯಕ್ಷ ರವಿ ಹುಣಾಲಮಡಕೆ, ದಿನೇಶ ಬರದವಳ್ಳಿ, ಪ್ರಾಧ್ಯಾಪಕಿ ವಿಜಯಲಕ್ಷಿತ್ರ್ಮ ಬಾಳೆಕುಂದ್ರಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ