ಆ್ಯಪ್ನಗರ

ಸಿದ್ದಗಂಗಾ ಮಠ ಎಲ್ಲ ಮಠಗಳಿಗೆ ಮಾದರಿ: ಸ್ವಾಮೀಜಿ

ಎಲ್ಲ ವರ್ಗದ ಬಡವರು, ನೊಂದು ಬಂದವರಿಗೆ ಶಿಕ್ಷ ಣ, ದಾಸೋಹ, ಅರಿವು ನೀಡುವ ಮೂಲಕ ತಮಕೂರು ಸಿದ್ದಗಂಗಾ ಮಠ ಎಲ್ಲ ಮಠಗಳಿಗೆ ಮಾದರಿಯಾಗಿದೆ ಎಂದು ಕಾಳೇನಹಳ್ಳಿ ಶ್ರೀರೇವಣಸಿದ್ದ ಸ್ವಾಮೀಜಿ ಹೇಳಿದರು.

Vijaya Karnataka 7 Feb 2019, 5:00 am
ಶಿಕಾರಿಪುರ: ಎಲ್ಲ ವರ್ಗದ ಬಡವರು, ನೊಂದು ಬಂದವರಿಗೆ ಶಿಕ್ಷ ಣ, ದಾಸೋಹ, ಅರಿವು ನೀಡುವ ಮೂಲಕ ತಮಕೂರು ಸಿದ್ದಗಂಗಾ ಮಠ ಎಲ್ಲ ಮಠಗಳಿಗೆ ಮಾದರಿಯಾಗಿದೆ ಎಂದು ಕಾಳೇನಹಳ್ಳಿ ಶ್ರೀರೇವಣಸಿದ್ದ ಸ್ವಾಮೀಜಿ ಹೇಳಿದರು.
Vijaya Karnataka Web SMR-4SKP2


ತಾಲೂಕಿನ ಭದ್ರಾಪುರದಲ್ಲಿ ಸೋಮವಾರ ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆ, ಗ್ರಾಮದ ಈಶ್ವರ, ಬಸವೇಶ್ವರ ಸ್ವಾಮಿಗೆ ಅಭಿಷೇಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆಧುನಿಕತೆಯಿಂದಾಗಿ ಭಕ್ತಿಮಾರ್ಗ, ಹಿರಿಯರು ನಡೆಸಿಕೊಂಡು ಬಂದಿರುವ ಆಚಾರ ವಿಚಾರ ಮರೆಯಾಗುತ್ತಿರುವುದು ಆತಂಕದ ಸಂಗತಿ. ಹಿಂದೂ ಧರ್ಮದಲ್ಲಿ ಎಲ್ಲ ಆಚರಣೆಗೂ ವೈಜ್ಞಾನಿಕ ಹಿನ್ನೆಲೆ ಇದ್ದು, ಅದನ್ನು ಅನುಸರಿಸಿದಲ್ಲಿ ಪ್ರಕೃತಿ, ಮನುಷ್ಯರಿಗೆ ಒಳ್ಳೆಯದಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಳ್ಳಿ ವೀರಪ್ಪ ಮಾತನಾಡಿ, ಸಿದ್ದಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ನಮ್ಮನ್ನಗಲಿರುವುದು ತುಂಬಲಾರದ ನಷ್ಟ. ನಾಡಿನ ಲಕ್ಷಾಂತರ ಜನರಿಗೆ ಶಿಕ್ಷ ಣ, ದಾಸೋಹ ನೀಡಿರುವ ಅವರು ಎಲ್ಲ ಮಠ ಮಂದಿರಕ್ಕೆ ಮಾದರಿಯಾಗಲಿ. ತನ್ಮೂಲಕ ಎಲ್ಲರಿಗೂ ಶಿಕ್ಷ ಣ ಸಿಗುವಂತಾಗಲಿ ಎಂದು ಹೇಳಿದರು.

ಕಾರ‍್ಯಕ್ರಮ ಅಂಗವಾಗಿ ಈಶ್ವರ, ಬಸವೇಶ್ವರ ದೇವರಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಕಾರ‍್ಯಕ್ರಮ ನಂತರ ಪ್ರಸಾದ ವಿನಿಯೋಗ ನಡೆಸಲಾಯಿತು. ಮುಖಂಡರಾದ ಮೌನೇಶಪ್ಪ, ಶೇಖರಪ್ಪ, ಕೆ.ಯಲ್ಲಪ್ಪ, ಚಂದಪ್ಪ, ಕೃಷ್ಣಪ್ಪ, ಎನ್‌.ಶಿವಯ್ಯಶಾಸ್ತ್ರಿ, ಸಂಗಯ್ಯಶಾಸ್ತ್ರಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ