ಆ್ಯಪ್ನಗರ

ಸಿದ್ಧಗಂಗಾ ಶ್ರೀ ಆಧುನಿಕ ಬಸವಣ್ಣ: ಮಳಲಿ ಶ್ರೀ

12ನೇ ಶತಮಾನದಲ್ಲಿ ಬಸವಣ್ಣನವರು ಕ್ರಾಂತಿ ಮಾಡಿದರೆ ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿಗಳು, ಅವರ ತತ್ವ, ಸಿದ್ಧಾಂತ ಪರಿಪಾಲನೆಯೊಂದಿಗೆ ಅಧುನಿಕ ಬಸವಣ್ಣರಾಗಿದ್ದಾರೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 17 Feb 2019, 5:00 am
ರಿಪ್ಪನ್‌ಪೇಟೆ: 12ನೇ ಶತಮಾನದಲ್ಲಿ ಬಸವಣ್ಣನವರು ಕ್ರಾಂತಿ ಮಾಡಿದರೆ ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿಗಳು, ಅವರ ತತ್ವ, ಸಿದ್ಧಾಂತ ಪರಿಪಾಲನೆಯೊಂದಿಗೆ ಅಧುನಿಕ ಬಸವಣ್ಣರಾಗಿದ್ದಾರೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web SMR-15RPT1


ಪಟ್ಟಣದ ಶ್ರೀಬಸವೇಶ್ವರ ವೀರಶೈವ ಸಮಾಜ ಹಾಗೂ ವೀರಶೈವ ಯುವ ವೇದಿಕೆ ಶಿವಮಂದಿರದಲ್ಲಿ ಗುರುವಾರ ಆಯೋಜಿಸಿದ್ದ 'ಸಿದ್ಧಗಂಗಾ ಶ್ರೀಗಳಿಗೆ ನುಡಿನಮನ' ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿಗಳ ಅದರ್ಶ ನಮ್ಮ ಬದುಕಿಗೆ ದಾರಿದೀಪವಾಗಲಿ ಎಂದರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಪತಿ ಹಳಗುಂದ ವಿಶೇಷ ಉಪನ್ಯಾಸ ನೀಡಿ, ಡಾ.ಶಿವಕುಮಾರ ಸ್ವಾಮಿಗಳು ಸದಾ ಶೈಕ್ಷ ಣಿಕ ಮತ್ತು ಸಾಮಾಜಿಕ ಕ್ರಾಂತಿ ಮಾಡುವುದರೊಂದಿಗೆ ತಮ್ಮ ಜೀವನವನ್ನು ಮಕ್ಕಳಿಗಾಗಿ ಮುಡುಪಾಗಿಟ್ಟ ಅದರ್ಶ ಪವಾಡ ಪುರುಷ ಎಂದರು. ಅಧ್ಯಕ್ಷ ತೆ ವಹಿಸಿದ್ದ ಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜ್‌ಗೌಡ ಮಾತನಾಡಿ, ಸಿದ್ಧಗಂಗಾ ಶ್ರೀಗಳ ಜನ್ಮದಿನವನ್ನು ಸರಕಾರ ಆಚರಿಸಬೇಕೆಂದು ಆಗ್ರಹಿಸಿದರು. ಬಸವೇಶ್ವರ ವೀರಶೈವ ಸಮಾಜದ ಮುಖಂಡ ಡಿ.ಸಿ.ಈಶ್ವರಪ್ಪಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಎಪಿಎಂಸಿ ಎಚ್‌.ವಿ.ಈಶ್ವರಪ್ಪಗೌಡ, ಬಸವೇಶ್ವರ ಸಮಾಜದ ಉಪಾಧ್ಯಕ್ಷ ಎಂ.ಆರ್‌.ಶಾಂತವೀರಪ್ಪಗೌಡ, ಸಮಾಜದ ಮುಖಂಡ ಜೆ.ಎಸ್‌.ಚಂದ್ರಪ್ಪ, ಶಿಕ್ಷ ಕ ನಾಗರಾಜ್‌,ದಾನೇಶಪ್ಪ,ಎಂ.ಡಿ.ಇಂದ್ರಮ್ಮ,ಜೆ.ಜಿ.ಸದಾನಂದ,ಎಚ್‌.ಎಂ.ವರ್ತೇಶ್‌, ಕೆ.ವಿ.ಲಿಂಗಪ್ಪ ಕಗ್ಗಲಿ ನುಡಿನಮನ ಸಲ್ಲಿಸಿದರು. ಐಶ್ವರ್ಯ ಪ್ರಾರ್ಥಿಸಿ, ಕಗ್ಗಲಿ ಪ್ರಕಾಶ್‌ ಸ್ವಾಗತಿಸಿದರು. ಜಂಬಳ್ಳಿ ಶಾಂತಕುಮಾರ್‌ ನಿರೂಪಿಸಿ, ಜಿ.ಡಿ.ಮಲ್ಲಿಕಾರ್ಜುನ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ