ಸೊರಬ: ಸಮರ್ಪಕ ಹಾಗೂ ನಿಗದಿಪಡಿಸಿದ ವಿದ್ಯುತ್ ಒದಗಿಸಬೇಕು, ಭತ್ತದ ಖರೀದಿ ಕೇಂದ್ರ ತೆರೆಯಬೇಕು ಹಾಗೂ ಬಗರ್ಹುಕುಂ ಸಮಿತಿ ರಚಿಸುವಂತೆ ಒತ್ತಾಯಿಸಿ ರೈತರು ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮಂಗಳವಾರ ತಾಲೂಕಿನ ಉಳವಿ ಭಾಗದ ರೈತರು ಹಾಗೂ ಮುಖಂಡರು ವಿದ್ಯುತ್ ಹಾಗೂ ಇತರೆ ಸಮಸ್ಯೆ ಬಗ್ಗೆ ಶಾಸಕರ ಜತೆ ಚರ್ಚಿಸಲು ಪಟ್ಟಣಕ್ಕೆ ಆಗಮಿಸಿದ್ದರು. ಶಾಸಕರು ರಂಗಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ರೈತರು ಶಾಸಕರನ್ನು ಕಾಣಲು ಬಂದಿರುವ ಮಾಹಿತಿ ಗೊತ್ತಿದ್ದರೂ ಹೊರಗೆ ಬಾರದೆ ಸಭೆ ನಡೆಸುತ್ತಿದ್ದಾರೆ ಎಂದು ಕೋಪಗೊಂಡ ರೈತರು ರಂಗ ಮಂದಿರದ ಹೊರಗೆ ಪ್ರತಿಭಟನೆ ನಡೆಸಲು ಮುಂದಾದರು. ಬಳಿಕ ಶಾಸಕರು ಹೊರಗೆ ಬಂದು ರೈತರ ಬಳಿ ಅಹವಾಲು ಸ್ವೀಕರಿಸಿದರು.
ರೈತ ಸಂಘದ ಅಧ್ಯಕ್ಷ ಹಾಲೇಶಪ್ಪಗೌಡ ಮಾತನಾಡಿ, ಉಳವಿ ಭಾಗದ ಗ್ರಾಮಗಳಿಗೆ ನಿಗದಿತ ಏಳು ತಾಸು ವಿದ್ಯುತ್ ನೀಡುತ್ತಿಲ್ಲ. ಪದೇಪದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕೊನೆಯಲ್ಲಿ ಒಂದು ಅಥವಾ ಎರಡು ತಾಸು ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಈ ರೀತಿ 15 ದಿನಗಳಿಂದಲೂ ಆಗುತ್ತಿದ್ದು, ಇದರಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೇ ಒಣಗುತ್ತಿವೆ. ಆದ್ದರಿಂದ ಕೂಡಲೇ ಸಮರ್ಪಕ ವಿದ್ಯುತ್ ಕೊಡಿಸುವಂತೆ ಶಾಸಕರನ್ನು ಒತ್ತಾಯಿಸಿದರು.
ಗ್ರಿಡ್ ಇಲ್ಲದಿರುವುದರಿಂದ ಈ ರೀತಿ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಆಗುತ್ತಿದೆ. ಈಗಾಗಲೇ ಉಳವಿ, ಕುಪ್ಪಗಡ್ಡೆ ಹಾಗೂ ಮಾವಲಿಯಲ್ಲಿ ಗ್ರಿಡ್ ಪ್ರಾರಂಭಿಸಲು ಪ್ರಕ್ರಿಯೆಗಳು ನಡೆಯುತ್ತಿವೆ. ಈ ಸಮಸ್ಯೆ ಇನ್ನೂ ಕೆಲವು ದಿನ ಮುಂದುವರಿಯಲಿದ್ದು, ರೈತರು ಸಹಕರಿಸಬೇಕೆಂದು ಶಾಸಕರು ಮನವಿ ಮಾಡಿದರು. ಸ್ಥಳದಲ್ಲಿದ್ದ ಮೆಸ್ಕಾಂ ಎಇಇ ಅವರಿಗೆ ವಿದ್ಯುತ್ ಕಡಿತಗೊಳಿಸಿದ ಬಗ್ಗೆ ರೈತರಿಗೆ ವಿವರಿಸುವಂತೆ ಸೂಚಿಸಿದರು.
ಎಇಇ ವಿನಯಕುಮಾರ ಪ್ರತಿಕ್ರಿಯಿಸಿ, ವಾರದಿಂದ ಇಲಾಖೆ ಮೇಲಧಿಕಾರಿಗಳ ಸೂಚನೆಯತ್ತೆ ಸ್ಟೇಷನ್ನಲ್ಲಿ ಆಗಾಗ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ನಾಳೆಯಿಂದ ಎಂದಿನಂತೆ ನಿಗದಿತ ಸಮಯದಂತೆ ಪೂರೈಕೆ ಮಾಡಲಾಗುವುದು ಎಂದರು.
ನಂತರ ರೈತರು ಬಗರಹುಕುಂ ಸಮಿತಿ ಹಾಗೂ ಭತ್ತದ ಖರೀದಿ ಕೇಂದ್ರ ತೆರೆಯಲು ಮತ್ತು ತೋಟಗಾರಿಕೆ ಇಲಾಖೆಯ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಫಲಾನುಭವಿಗಳಿಗೆ ವಿತರಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಲು ಶಾಸಕರಿಗೆ ಮನವಿ ಮಾಡಿದರು.
ವೇದಮೂರ್ತಿ, ಶಿವಪ್ಪ, ಶಿವಪೂಜಪ್ಪ ಗೌಡ, ಬಾಪಟ್ ಶಿಂಡ್ಲಿ, ಗುತ್ಯಪ್ಪ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಂಗಳವಾರ ತಾಲೂಕಿನ ಉಳವಿ ಭಾಗದ ರೈತರು ಹಾಗೂ ಮುಖಂಡರು ವಿದ್ಯುತ್ ಹಾಗೂ ಇತರೆ ಸಮಸ್ಯೆ ಬಗ್ಗೆ ಶಾಸಕರ ಜತೆ ಚರ್ಚಿಸಲು ಪಟ್ಟಣಕ್ಕೆ ಆಗಮಿಸಿದ್ದರು. ಶಾಸಕರು ರಂಗಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ರೈತರು ಶಾಸಕರನ್ನು ಕಾಣಲು ಬಂದಿರುವ ಮಾಹಿತಿ ಗೊತ್ತಿದ್ದರೂ ಹೊರಗೆ ಬಾರದೆ ಸಭೆ ನಡೆಸುತ್ತಿದ್ದಾರೆ ಎಂದು ಕೋಪಗೊಂಡ ರೈತರು ರಂಗ ಮಂದಿರದ ಹೊರಗೆ ಪ್ರತಿಭಟನೆ ನಡೆಸಲು ಮುಂದಾದರು. ಬಳಿಕ ಶಾಸಕರು ಹೊರಗೆ ಬಂದು ರೈತರ ಬಳಿ ಅಹವಾಲು ಸ್ವೀಕರಿಸಿದರು.
ರೈತ ಸಂಘದ ಅಧ್ಯಕ್ಷ ಹಾಲೇಶಪ್ಪಗೌಡ ಮಾತನಾಡಿ, ಉಳವಿ ಭಾಗದ ಗ್ರಾಮಗಳಿಗೆ ನಿಗದಿತ ಏಳು ತಾಸು ವಿದ್ಯುತ್ ನೀಡುತ್ತಿಲ್ಲ. ಪದೇಪದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕೊನೆಯಲ್ಲಿ ಒಂದು ಅಥವಾ ಎರಡು ತಾಸು ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಈ ರೀತಿ 15 ದಿನಗಳಿಂದಲೂ ಆಗುತ್ತಿದ್ದು, ಇದರಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೇ ಒಣಗುತ್ತಿವೆ. ಆದ್ದರಿಂದ ಕೂಡಲೇ ಸಮರ್ಪಕ ವಿದ್ಯುತ್ ಕೊಡಿಸುವಂತೆ ಶಾಸಕರನ್ನು ಒತ್ತಾಯಿಸಿದರು.
ಗ್ರಿಡ್ ಇಲ್ಲದಿರುವುದರಿಂದ ಈ ರೀತಿ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಆಗುತ್ತಿದೆ. ಈಗಾಗಲೇ ಉಳವಿ, ಕುಪ್ಪಗಡ್ಡೆ ಹಾಗೂ ಮಾವಲಿಯಲ್ಲಿ ಗ್ರಿಡ್ ಪ್ರಾರಂಭಿಸಲು ಪ್ರಕ್ರಿಯೆಗಳು ನಡೆಯುತ್ತಿವೆ. ಈ ಸಮಸ್ಯೆ ಇನ್ನೂ ಕೆಲವು ದಿನ ಮುಂದುವರಿಯಲಿದ್ದು, ರೈತರು ಸಹಕರಿಸಬೇಕೆಂದು ಶಾಸಕರು ಮನವಿ ಮಾಡಿದರು. ಸ್ಥಳದಲ್ಲಿದ್ದ ಮೆಸ್ಕಾಂ ಎಇಇ ಅವರಿಗೆ ವಿದ್ಯುತ್ ಕಡಿತಗೊಳಿಸಿದ ಬಗ್ಗೆ ರೈತರಿಗೆ ವಿವರಿಸುವಂತೆ ಸೂಚಿಸಿದರು.
ಎಇಇ ವಿನಯಕುಮಾರ ಪ್ರತಿಕ್ರಿಯಿಸಿ, ವಾರದಿಂದ ಇಲಾಖೆ ಮೇಲಧಿಕಾರಿಗಳ ಸೂಚನೆಯತ್ತೆ ಸ್ಟೇಷನ್ನಲ್ಲಿ ಆಗಾಗ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ನಾಳೆಯಿಂದ ಎಂದಿನಂತೆ ನಿಗದಿತ ಸಮಯದಂತೆ ಪೂರೈಕೆ ಮಾಡಲಾಗುವುದು ಎಂದರು.
ನಂತರ ರೈತರು ಬಗರಹುಕುಂ ಸಮಿತಿ ಹಾಗೂ ಭತ್ತದ ಖರೀದಿ ಕೇಂದ್ರ ತೆರೆಯಲು ಮತ್ತು ತೋಟಗಾರಿಕೆ ಇಲಾಖೆಯ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಫಲಾನುಭವಿಗಳಿಗೆ ವಿತರಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಲು ಶಾಸಕರಿಗೆ ಮನವಿ ಮಾಡಿದರು.
ವೇದಮೂರ್ತಿ, ಶಿವಪ್ಪ, ಶಿವಪೂಜಪ್ಪ ಗೌಡ, ಬಾಪಟ್ ಶಿಂಡ್ಲಿ, ಗುತ್ಯಪ್ಪ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.