ಆ್ಯಪ್ನಗರ

ಸುಸೂತ್ರ ಕೆಲಸಕ್ಕೆ ‘ಪರೀಕ್ಷಾ ಮಿತ್ರ’

ಪದವಿ ಮುಗಿದರೂ ಯಾವುದೇ ಸರ್ಟಿಫಿಕೇಟ್‌ಗಾಗಿ ವಿಶ್ವವಿದ್ಯಾಲಯಕ್ಕೆ ಬರಲೇಬೇಕು. ಒಂದುವೇಳೆ, ದೂರದ ಪ್ರದೇಶದಲ್ಲಿದ್ದರೆ ಬಂದುಹೋಗುವ ಪ್ರಯಾಣ ಅನಿವಾರ್ಯ. ಲಭ್ಯವಿರುವ ಒಂದೆರಡು ದಿನದ ರಜೆಯಲ್ಲಿ ಕುಲಪತಿ, ಕುಲಸಚಿವರು ಇಲ್ಲದಿದ್ದರೆ ಉದ್ದೇಶಿತ ಕೆಲಸ ಮುಂದೂಡಿಕೆ. ಹೀಗೆ, ದೈಹಿಕ ಮತ್ತು ಮಾನಸಿಕ ಶ್ರಮದೊಂದಿಗೆ ಆರ್ಥಿಕವಾಗಿಯೂ ಹಳೆಯ ವಿದ್ಯಾರ್ಥಿಗಳು ಪರದಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ಕುವೆಂಪು ವಿಶ್ವವಿದ್ಯಾಲಯ ಸ್ಮಾರ್ಟ್‌ ಹೆಜ್ಜೆ ಇಟ್ಟಿದೆ. 'ಪರೀಕ್ಷಾ ಮಿತ್ರ'ವೆಂಬ ಸಾಫ್ಟ್‌ವೇರ್‌ ಸಿದ್ಧಪಡಿಸಿದ್ದು, ರಾಜ್ಯದ ಇನ್ನುಳಿದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿ ಇಲ್ಲದ ಸೌಲಭ್ಯಗಳನ್ನು ನೀಡುವ ಮೂಲಕ ವಿವಿ ಮಾದರಿಯಾಗಿದೆ.

Vijaya Karnataka 5 Jul 2019, 5:00 am
Vijaya Karnataka Web kuvempu v v

ಆತೀಶ್‌ ಬಿ. ಕನ್ನಾಳೆ
ಶಿವಮೊಗ್ಗ :
ಪದವಿ ಮುಗಿದರೂ ಯಾವುದೇ ಸರ್ಟಿಫಿಕೇಟ್‌ಗಾಗಿ ವಿಶ್ವವಿದ್ಯಾಲಯಕ್ಕೆ ಬರಲೇಬೇಕು. ಒಂದುವೇಳೆ, ದೂರದ ಪ್ರದೇಶದಲ್ಲಿದ್ದರೆ ಬಂದುಹೋಗುವ ಪ್ರಯಾಣ ಅನಿವಾರ್ಯ. ಲಭ್ಯವಿರುವ ಒಂದೆರಡು ದಿನದ ರಜೆಯಲ್ಲಿ ಕುಲಪತಿ, ಕುಲಸಚಿವರು ಇಲ್ಲದಿದ್ದರೆ ಉದ್ದೇಶಿತ ಕೆಲಸ ಮುಂದೂಡಿಕೆ. ಹೀಗೆ, ದೈಹಿಕ ಮತ್ತು ಮಾನಸಿಕ ಶ್ರಮದೊಂದಿಗೆ ಆರ್ಥಿಕವಾಗಿಯೂ ಹಳೆಯ ವಿದ್ಯಾರ್ಥಿಗಳು ಪರದಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ಕುವೆಂಪು ವಿಶ್ವವಿದ್ಯಾಲಯ ಸ್ಮಾರ್ಟ್‌ ಹೆಜ್ಜೆ ಇಟ್ಟಿದೆ. 'ಪರೀಕ್ಷಾ ಮಿತ್ರ'ವೆಂಬ ಸಾಫ್ಟ್‌ವೇರ್‌ ಸಿದ್ಧಪಡಿಸಿದ್ದು, ರಾಜ್ಯದ ಇನ್ನುಳಿದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿ ಇಲ್ಲದ ಸೌಲಭ್ಯಗಳನ್ನು ನೀಡುವ ಮೂಲಕ ವಿವಿ ಮಾದರಿಯಾಗಿದೆ.

ಇದಕ್ಕಾಗಿ, ಹೆಚ್ಚುವರಿ ಸ್ಪೇಸ್‌ ಅಥವಾ ಸಂಪನ್ಮೂಲ ವ್ಯಯ ಮಾಡಿಲ್ಲ. ಸರ್ಟಿಫಿಕೇಟ್‌ಗಾಗಿ ಶುಲ್ಕ ಪಾವತಿ, ಎನ್‌ಸಿಎಲ್‌ ಕ್ಯಾನ್ಸಲೇಷನ್‌, ಅಂಕಪಟ್ಟಿಯಲ್ಲಿ ಹೆಸರು ಬದಲಾವಣೆ, ನಕಲು ಅಂಕಪಟ್ಟಿ, ಪ್ರಾವಿಜನಲ್‌ ಪಾಸ್‌ ಸರ್ಟಿಫಿಕೇಟ್‌, ಪದವಿ ಪ್ರಮಾಣ ಪತ್ರ, ಪರೀಕ್ಷಾ ಅರ್ಜಿ ಸೇರಿ ಒಟ್ಟು 11 ಸೇವೆಗಳನ್ನು ಪರೀಕ್ಷಾ ಮಿತ್ರ ಮೂಲಕ ನೀಡಲಾಗುತ್ತಿದೆ.

2017ರಲ್ಲಿ ಈ ಸೌಲಭ್ಯವನ್ನು ಆರಂಭಿಸಲಾಗಿದ್ದು, ಇದುವರೆಗೆ 1,186 ಜನರು ಪ್ರಮಾಣ ಪತ್ರ ಹಾಗೂ 2,500 ಮಂದಿ ಶುಲ್ಕ ಸಂಬಂಧಪಟ್ಟಂತೆ ಪ್ರಯೋಜನ ಪಡೆದಿದ್ದಾರೆ. ಬಳಸುವುದೂ ಅತ್ಯಂತ ಸುಲಭವಾಗಿದ್ದು, ಕೇಳಲಾದ ಮಾಹಿತಿಗಳನ್ನು ನೀಡಿದರೆ ಸಾಕು. ಅರ್ಜಿದಾರರು ನಮೂದಿಸುವ ವಿಳಾಸಕ್ಕೆ ನೇರವಾಗಿ ಪ್ರಮಾಣ ಪತ್ರ ಕಳುಹಿಸಲಾಗುತ್ತದೆ.

ರಾಜ್ಯ ಸೇರಿದಂತೆ ನಾನಾ ಕಡೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಸಣ್ಣ ಪುಟ್ಟ ಕೆಲಸಗಳಿಗೂ ವಿವಿಗೆ ಬರುವುದು ಕಷ್ಟ. ಅದರಲ್ಲೂ ವಿದ್ಯಾಭ್ಯಾಸ ಮುಗಿಸಿ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳೂ ಇದ್ದಾರೆ. ಒಂದು ಪ್ರಮಾಣ ಪತ್ರಕ್ಕಾಗಿ ವಿವಿಗೆ ಬರುವುದು ಕಷ್ಟ. ಈ ಎಲ್ಲ ಅಂಶಗಳನ್ನು ಮನಗಂಡು ವಿದ್ಯಾರ್ಥಿ ಸ್ನೇಹಿಯಾದ ವ್ಯವಸ್ಥೆಯನ್ನು ರೂಪಿಸಲಾಗಿದೆ.
----------

ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪರೀಕ್ಷಾ ವಿಭಾಗಕ್ಕೆ ಸಂಬಂಧಪಟ್ಟ ಕೆಲಸಗಳಿಗೆ ಈ ಸೌಲಭ್ಯವನ್ನು ಆರಂಭಿಸಲಾಗಿದೆ. ಆನ್‌ಲೈನ್‌ನಲ್ಲೇ ಶುಲ್ಕ ಪಾವತಿಸುವ ಅವಕಾಶವೂ ಇಲ್ಲಿದೆ. ಸಾಕಷ್ಟು ಜನ ಇದರ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ.

- ಡಾ.ಎಸ್‌.ಎಸ್‌.ಪಾಟೀಲ್‌,
ಪ್ರಭಾರ ಕುಲಪತಿ, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ