ಆ್ಯಪ್ನಗರ

ಏನ್‌ ಕಳ್ರಪ್ಪ..! ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬಂದು ಶಿವಮೊಗ್ಗದಲ್ಲಿ ಸರಗಳ್ಳತನ ಮಾಡ್ತಾರೆ..!

ಸರಗಳ್ಳರು ಅಂದರೇ ಅದೇ ಏರಿಯಾದವರು ಅಥವಾ ಅಂತರ್‌ಜಿಲ್ಲೆಯವರಾಗಿರುತ್ತಾರೆ. ಆದ್ರೆ, ಶಿವಮೊಗ್ಗದಲ್ಲಿ ವಿಮಾನದಲ್ಲಿ ಬಂದ ಗ್ಯಾಗೊಂದು ಸರಗಳ್ಳತನ ಮಾಡುತ್ತಿದೆ. ಹೌದು, ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka Web 28 Oct 2020, 7:55 pm
ಶಿವಮೊಗ್ಗ: ಉತ್ತರ ಪ್ರದೇಶದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಶಿವಮೊಗ್ಗದಲ್ಲಿ ಸರಗಳ್ಳತನ ಮಾಡಿರುವ ಆರೋಪಿ ಸೇರಿ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಅಂದಾಜು 9,31,050 ರೂ. ಮೌಲ್ಯದ 213.20 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಹೇಳಿದರು.
Vijaya Karnataka Web six member interstate chain snatching gang arrested
ಏನ್‌ ಕಳ್ರಪ್ಪ..! ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬಂದು ಶಿವಮೊಗ್ಗದಲ್ಲಿ ಸರಗಳ್ಳತನ ಮಾಡ್ತಾರೆ..!


ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಳೆದ ತಿಂಗಳು ನಡೆದ ಸರಗಳ್ಳತನ ಮತ್ತು ದರೋಡೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿರುವ ತಂಡವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದರು. ಉತ್ತರ ಪ್ರದೇಶ ಮೀರತ್‌ನ ಫೈಜ್‌ಲ್(25), ಸಲ್ಮಾನ್(24), ಆಶೀಷ್ ಕುಮಾರ್(36), ಮೆಹತಾಬ್(35), ಸಲ್ಮಾನ್(22), ಶಿವಮೊಗ್ಗ ಜೋಸೆಫ್ ನಗರದ ನಿವಾಸಿ ಹಾಗೂ ಮೀರತ್ ಮೂಲದ ಮೊಹಮ್ಮದ್ ಚಾಂದ್ ಎಂಬುವವರನ್ನು ಬಂಧಿಸಲಾಗಿದೆ.

ಮೊಹಮ್ಮದ್ ಚಾಂದ್ ಎಂಬಾತ ಶಿವಮೊಗ್ಗದಲ್ಲಿದ್ದು ಕಳ್ಳತನ ಮತ್ತು ದರೋಡೆಗೆ ಸಹಕಾರ ನೀಡುತ್ತಿದ್ದ ಎಂಬುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಬಂಧಿತರಲ್ಲಿ ಒಬ್ಬ ಉತ್ತರ ಪ್ರದೇಶದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಅಲ್ಲಿಂದ ಬೈಕ್‌ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದಾನೆ ಎಂದು ಮಾಹಿತಿ ನೀಡಿದರು. ಸೆ.16ರಂದು ವಿದ್ಯಾನಗರ ಮತ್ತೂರು ರಸ್ತೆಯಲ್ಲಿ ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕಿದ್ದ ಆರು ಜನರ ತಂಡವನ್ನು ಪೊಲೀಸರು ಬಂಧಿಸಿ ಅವರುಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಗಳ ಸಂತೆ ಪಶು ಆಸ್ಪತ್ರೆ: ಹೊಸನಗರದಲ್ಲಿ ಕಡುಕಷ್ಟವಾದ ಜಾನುವಾರು ಸಾಕಣೆ!

ಇವರ ವಿರುದ್ಧ ಶಿವಮೊಗ್ಗದ ಕೋಟೆ ಮತ್ತು ಜಯನಗರ ಪೊಲೀಸ್ ಠಾಣೆಗಳಲ್ಲಿ 2019 ಮತ್ತು 2020ರಲ್ಲಿ ತಲಾ ನಾಲ್ಕು ಸೇರಿ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಆರೋಪಿಗಳಿಂದ ಒಂದು ದ್ವಿಚಕ್ರ ವಾಹನ ಹಾಗೂ 2 ಪಿಸ್ತೂಲ್, 12 ಜೀವಂತ ಗುಂಡುಗಳು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸೊರಬ ಪಟ್ಟಣದಲ್ಲಿ ಬಂಗಾರಪ್ಪನವರ ಸ್ಮಾರಕ ನಿರ್ಮಾಣಕ್ಕೆ 1ಕೋಟಿ ರೂ. ಬಿಡುಗಡೆ: ಸಿಎಂ ಬಿಎಸ್‍ವೈ

ತಂಡಕ್ಕೆ ಬಹುಮಾನಎಎಸ್‌ಪಿ ಎಚ್.ಟಿ.ಶೇಖರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ತಂಡದಲ್ಲಿ ಡಿವೈಎಸ್‌ಪಿ ಉಮೇಶ್ ನಾಯ್ಕ್‌, ಕೋಟೆ ಠಾಣೆ ಸಿಪಿಐ ಟಿ.ಕೆ.ಚಂದ್ರಶೇಖರ್, ಮಹಿಳಾ ಠಾಣೆಯ ಅಭಯ್ ಪ್ರಕಾಶ್ ಸೋಮನಾಳ್, ಪಿಎಸ್‌ಐ ಉಮೇಶ್, ಶಿವಾನಂದ್, ರಹತ್ ಅಲಿ, ಕೋಟೆ ವೃತ್ತದ ಅಧಿಕಾರಿ ವೀರೇಶಯ್ಯ, ನಾಗಪ್ಪ, ಎಎಸ್‌ಐ ಹರ್ಷ, ಸೋಮು, ಸುರೇಶ್, ಮೋಹನ್ ‌ಕುಮಾರ್, ಸುಧಾಕರ್, ಗೋಪಾಲ್, ಕಲ್ಲನಗೌಡ, ರಾಮಕೃಷ್ಣ ಇತರರು ಇದ್ದರು. ಚಾಕಚಕ್ಯತೆಯಿಂದ ಸರಗಳ್ಳರನ್ನು ಹಿಡಿದಿದ್ದಕ್ಕೆ 20 ಸಾವಿರ ರೂ. ಬಹುಮಾನ ಘೋಷಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ