ಶಿವಮೊಗ್ಗ: ನಗರದ ಗೋಪಾಲಗೌಡ ಬಡಾವಣೆಯಲ್ಲಿ ಚಪ್ಪಲಿ ಕದಿಯುವ ಗ್ಯಾಂಗ್ ಸಕ್ರಿಯವಾಗಿದ್ದು, ಹೊಸ ಪಾದರಕ್ಷೆ ಖರೀದಿಸಿದರೂ ಮನೆಯ ಹೊರಗಡೆ ಇಡುವುದಕ್ಕೆ ಭಯ ಪಡುವಂತಾಗಿದೆ.
ಕಳೆದ 2-3 ತಿಂಗಳಿಂದ ಈ ಕೃತ್ಯ ನಡೆಯುತ್ತಿದ್ದು, ಚಪ್ಪಲಿ ಕಳವಿನ ಬಗ್ಗೆ ಯಾರೂ ಪೊಲೀಸ್ ಠಾಣೆಗೆ ದೂರು ದಾಖಲಿಸುವ ಗೋಜಿಗೆ ಹೋಗಿಲ್ಲ. ರಾತ್ರಿ ಹೊತ್ತಲ್ಲಿ ಮನೆಯ ಮುಂದಿಟ್ಟಿರುವ ಚಪ್ಪಲಿಗಳನ್ನು ಬಂದು ಕಳವು ಮಾಡಲಾಗುತ್ತಿದ್ದು, ಈ ದೃಶ್ಯ ಸಿಸಿ ಟಿವಿನಲ್ಲೂ ಸೆರೆಯಾಗಿದೆ. ಆದರೆ, ಯಾರೂ ಈ ಕೃತ್ಯ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದುಬಂದಿಲ್ಲ.
ಕಳವಿಗೆ ಭಯಪಟ್ಟು ಚಪ್ಪಲಿ ಒಳಗಿಟ್ಟುಕೊಳ್ಳೋಣವೆಂದರೆ ಕೊರೊನಾ ಭೀತಿ. ಇದರ ಲಾಭ ಪಡೆಯುತ್ತಿರುವ ಚಪ್ಪಲಿ ಕಳ್ಳತನ ಮಾಡುತ್ತಿರುವ ಗ್ಯಾಂಗ್ ನಿತ್ಯ ಒಂದಿಲ್ಲೊಂದು ಮನೆಯ ಮುಂದಿಟ್ಟಿರುವ ಚಪ್ಪಲಿಗಳನ್ನು ಕಳವು ಮಾಡುತ್ತಿದ್ದಾರೆ. ಹೀಗಾಗಿ, ತಿಂಗಳಿಗೆ ಎರಡ್ಮೂರು ಜೋಡಿ ಹೊಸ ಚಪ್ಪಲಿಗಳನ್ನು ಇಡೀ ಕುಟುಂಬದವರು ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಿಸಿ ಕ್ಯಾಮೆರಾದಲ್ಲಿ ಚಿರತೆ ಸೆರೆ, ಗದ್ದೆಯಲ್ಲಿ ಆನೆ ಹೆಜ್ಜೆ: ಭದ್ರಾವತಿಯಲ್ಲಿ ವನ್ಯ ಜೀವಿಗಳ ಭಯ!
ಸದ್ದಿಲ್ಲದೇ ಕಾರ್ಯ
ಸಿಸಿಟಿವಿ ದೃಶ್ಯದಲ್ಲಿ ಕೆಲವರಷ್ಟೇ ಓಡಾಡುವುದು ಸೆರೆಯಾಗಿದೆ. ಆದರೆ, ಈ ತಂಡದಲ್ಲಿ ಎಷ್ಟು ಜನರಿದ್ದಾರೆ. ಹೇಗೆ ಸಂಪರ್ಕ ಸಾಧಿಸುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಚಿಹ್ನೆಗಳ ಮೂಲಕ ಸಂವಹನ ಸಾಧಿಸುವ ಗ್ಯಾಂಗ್ನವರು ಸದ್ದಿಲ್ಲದೇ ಬಂದು ಮನೆಯ ಮುಂದಿನ ಚಪ್ಪಲಿಗಳನ್ನು ತೆಗೆದುಕೊಂಡು ಪರಾರಿಯಾಗುತ್ತಾರೆ. ಇತ್ತೀಚೆಗಂತೂ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆಯಲು ಹೋಗಬೇಕೆಂದಾಗ ಆಕೆಯ ಚಪ್ಪಲಿ, ಶೂ ಎರಡೂ ಇರಲಿಲ್ಲ.
ಸಕಾಲಕ್ಕೆ ಕೈಹಿಡಿಯದ ಫಸಲ್ ಬಿಮಾ: ಎರಡು ವರ್ಷಗಳಿಂದ ರೈತರ ಕೈಸೇರದ ಕ್ಲೇಮ್ ಮೊತ್ತ!
ಕಳೆದ 2-3 ತಿಂಗಳಿಂದ ಈ ಕೃತ್ಯ ನಡೆಯುತ್ತಿದ್ದು, ಚಪ್ಪಲಿ ಕಳವಿನ ಬಗ್ಗೆ ಯಾರೂ ಪೊಲೀಸ್ ಠಾಣೆಗೆ ದೂರು ದಾಖಲಿಸುವ ಗೋಜಿಗೆ ಹೋಗಿಲ್ಲ. ರಾತ್ರಿ ಹೊತ್ತಲ್ಲಿ ಮನೆಯ ಮುಂದಿಟ್ಟಿರುವ ಚಪ್ಪಲಿಗಳನ್ನು ಬಂದು ಕಳವು ಮಾಡಲಾಗುತ್ತಿದ್ದು, ಈ ದೃಶ್ಯ ಸಿಸಿ ಟಿವಿನಲ್ಲೂ ಸೆರೆಯಾಗಿದೆ. ಆದರೆ, ಯಾರೂ ಈ ಕೃತ್ಯ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದುಬಂದಿಲ್ಲ.
ಕಳವಿಗೆ ಭಯಪಟ್ಟು ಚಪ್ಪಲಿ ಒಳಗಿಟ್ಟುಕೊಳ್ಳೋಣವೆಂದರೆ ಕೊರೊನಾ ಭೀತಿ. ಇದರ ಲಾಭ ಪಡೆಯುತ್ತಿರುವ ಚಪ್ಪಲಿ ಕಳ್ಳತನ ಮಾಡುತ್ತಿರುವ ಗ್ಯಾಂಗ್ ನಿತ್ಯ ಒಂದಿಲ್ಲೊಂದು ಮನೆಯ ಮುಂದಿಟ್ಟಿರುವ ಚಪ್ಪಲಿಗಳನ್ನು ಕಳವು ಮಾಡುತ್ತಿದ್ದಾರೆ. ಹೀಗಾಗಿ, ತಿಂಗಳಿಗೆ ಎರಡ್ಮೂರು ಜೋಡಿ ಹೊಸ ಚಪ್ಪಲಿಗಳನ್ನು ಇಡೀ ಕುಟುಂಬದವರು ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಿಸಿ ಕ್ಯಾಮೆರಾದಲ್ಲಿ ಚಿರತೆ ಸೆರೆ, ಗದ್ದೆಯಲ್ಲಿ ಆನೆ ಹೆಜ್ಜೆ: ಭದ್ರಾವತಿಯಲ್ಲಿ ವನ್ಯ ಜೀವಿಗಳ ಭಯ!
ಸದ್ದಿಲ್ಲದೇ ಕಾರ್ಯ
ಸಿಸಿಟಿವಿ ದೃಶ್ಯದಲ್ಲಿ ಕೆಲವರಷ್ಟೇ ಓಡಾಡುವುದು ಸೆರೆಯಾಗಿದೆ. ಆದರೆ, ಈ ತಂಡದಲ್ಲಿ ಎಷ್ಟು ಜನರಿದ್ದಾರೆ. ಹೇಗೆ ಸಂಪರ್ಕ ಸಾಧಿಸುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಚಿಹ್ನೆಗಳ ಮೂಲಕ ಸಂವಹನ ಸಾಧಿಸುವ ಗ್ಯಾಂಗ್ನವರು ಸದ್ದಿಲ್ಲದೇ ಬಂದು ಮನೆಯ ಮುಂದಿನ ಚಪ್ಪಲಿಗಳನ್ನು ತೆಗೆದುಕೊಂಡು ಪರಾರಿಯಾಗುತ್ತಾರೆ. ಇತ್ತೀಚೆಗಂತೂ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆಯಲು ಹೋಗಬೇಕೆಂದಾಗ ಆಕೆಯ ಚಪ್ಪಲಿ, ಶೂ ಎರಡೂ ಇರಲಿಲ್ಲ.
ಸಕಾಲಕ್ಕೆ ಕೈಹಿಡಿಯದ ಫಸಲ್ ಬಿಮಾ: ಎರಡು ವರ್ಷಗಳಿಂದ ರೈತರ ಕೈಸೇರದ ಕ್ಲೇಮ್ ಮೊತ್ತ!