ರವಿರಾಜ ಎಂ.ಜಿ.ಭಟ್
ಹೊಸನಗರ : ತ್ಯಾಜ್ಯ ವಿಲೇವಾರಿ ಸವಾಲೇ ಸರಿ. ಆದರೂ ಸರಕಾರ ಹಲವಾರು ಕಾಯಿದೆ ಜಾರಿಗೆ ತಂದಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಸ್ಥಳೀಯ ಸರಕಾರಗಳು ಎಡವುತ್ತಿವೆ. ಇದಕ್ಕೊಂದು ತಾಜಾ ನಿದರ್ಶನ ಪಟ್ಟಣಕ್ಕೆ ಸಮೀಪದ ಕಲ್ಲುಹಳ್ಳದಲ್ಲಿ ನಿರಂತರವಾಗಿ ಮಾಂಸ ತ್ಯಾಜ್ಯ ಬಿಸಾಡಲಾಗುತ್ತಿದೆ. ಮಾಂಸ ಹಾಗೂ ತ್ಯಾಜ್ಯ ವಸ್ತುಗಳನ್ನು ನಾಯಿ, ಕಾಗೆಗಳು ಕಚ್ಚಿ ಎಳೆದಾಡಿ ಎಲ್ಲೆಂದರಲ್ಲಿ ಹಾಕುತ್ತಿದೆ. ಇದರಿಂದ ಸುತ್ತಮುತ್ತಲ ಪರಿಸರ ನಾರುತ್ತಿದೆ. ಬಿಸಾಡಿರುವ ತ್ಯಾಜ್ಯ ರಾಶಿ ನೋಡಿದರೆ 'ಸ್ವಚ್ಛತೆ' ಜಾಗೃತಿ ಎಲ್ಲಿ ಹೋಯ್ತು ಎಂಬ ಪ್ರಶ್ನೆ ಕಾಡುವುದು ಸಹಜ.
ಪಟ್ಟಣಕ್ಕೆ ಸಮೀಪದಲ್ಲೇ ಇದ್ದರೂ, ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಈ ಜಾಗದಲ್ಲಿ ಹಲವು ಸಮಯದಿಂದ ತ್ಯಾಜ್ಯ ಹಾಕಲಾಗುತ್ತದೆ. ಪೌಲ್ಟ್ರಿ ಫಾರಂ, ಮಾಂಸದಂಗಡಿ ತ್ಯಾಜ್ಯ, ನೂರಾರು ಕಾಲಿ ಬಾಟಲಿ, ಕಸ, ಕಡ್ಡಿ, ಪ್ಲಾಸ್ಟಿಕ್, ಬಟ್ಟೆ, ಚೀಲ ಸೇರಿದಂತೆ ಕಸದ ರಾಶಿಯೇ ಬಿದ್ದು, ನಾರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ನಿತ್ಯವೂ ಸುರಿಯುವ ತ್ಯಾಜ್ಯದಿಂದ ಈ ಪ್ರದೇಶದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಸಾಗುವ ಯಾತನೆ ಹೇಳತೀರದಾಗಿದೆ.
ನೀರು ಕಲುಷಿತ
ಬೇಕಾಬಿಟ್ಟಿ ಸುರಿಯುತ್ತಿರುವ ತ್ಯಾಜ್ಯ ಕಲ್ಲುಹಳ್ಳದ ನೀರಿಗೆ ಸೇರುತ್ತಿರುವುದು ಸಮಸ್ಯೆಯ ಗಂಭೀರತೆಯನ್ನು ಇಮ್ಮಡಿಗೊಳಿಸಿದೆ. ಇಡೀ ಪಟ್ಟಣಕ್ಕೆ ಕುಡಿಯುವ ನೀರಿನ ಮೂಲವಾಗಿರುವ ಜಾಕ್ವೆಲ್ನತ್ತ ಈ ನೀರು ಹರಿಯುತ್ತದೆ. ಕೊಳೆತ ತಾಜ್ಯ ನೀರಿಗೆ ಸೇರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪ್ಲಾಸ್ಟಿಕ್ ಮೊದಲಾದ ತಾಜ್ಯಗಳು ಈಗಾಗಲೇ ಹಳ್ಳ ಸೇರಿದ್ದು, ನೀರು ಒಂದಿಷ್ಟು ಕಲುಷಿತಗೊಂಡಿದೆ.
ಗಡಿ ಸಮಸ್ಯೆ:
ಪ್ರಸ್ತುತ ಕಲುಷಿತಗೊಂಡಿರುವ ಪ್ರದೇಶ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ್ದರೂ, ವಾಸ್ತವದಲ್ಲಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಕ್ಕಿಂತಲೂ ಪಟ್ಟಣಕ್ಕೇ ಹತ್ತಿರದಲ್ಲಿದೆ. ಈ ಕಾರಣಕ್ಕೆ ನಿತ್ಯ ಕಸ ತಂದು ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ನಿತ್ಯವೂ ತ್ಯಾಜ್ಯ ಹಾಕುತ್ತಿರುವವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಇಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡಲು ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು ಎನ್ನುವುದು ಪಟ್ಟಣದ ನಾಗರಿಕರ ಆಗ್ರಹ.
ಕಾಯಿದೆ ಪಾಲನೆಯಾಗುತ್ತಿಲ್ಲ
ತ್ಯಾಜ್ಯ ವಿಲೇವಾರಿ ಕುರಿತು ಸ್ಥಳೀಯ ಸಂಸ್ಥೆಗಳಿಗೆ ಗುರುತರ ಜವಾಬ್ದಾರಿಯಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಈ ಹಿಂದೆಯೇ ಆದೇಶವಾಗಿದ್ದರೂ, ಬಹುತೇಕ ಕಾರ್ಯರೂಪಕ್ಕೆ ಬಂದಿಲ್ಲ. ಪಂಚಾಯತ್ರಾಜ್ ಅಧಿನಿಯಮ 1993ರ ಪ್ರಕರಣ 58ರ ಅಡಿಯಲ್ಲಿ ಕಡ್ಡಾಯವಾಗಿ ಕೈಗೊಳ್ಳಬೇಕಾದ ನೈರ್ಮಲ್ಯ ಕಾರ್ಯಕ್ರಮಗಳ ಕುರಿತು ತಿಳಿಸಲಾಗಿದೆ. ಪರಿಸರ ನೈರ್ಮಲ್ಯ ಕಾಪಾಡಲು ವಿಫಲವಾದಲ್ಲಿ ಕಾಯಿದೆಯ ಪ್ರಕರಣ 268ರ ಅಡಿಯಲ್ಲಿ ಶಿಸ್ತು ಕ್ರಮಕ್ಕೆ ಅವಕಾಶವಿದೆ. ಆದರೂ ಕಸ ವಿಲೇವಾರಿ ವಿಷಯದಲ್ಲಿ ಕಾನೂನು ಪಾಲಿಸದಿರುವುದು ವಿಪರಾರಯಸ.
ಸೂಕ್ತ ಕ್ರಮ ವಹಿಸಲಿ
ಈ ಪ್ರದೇಶ ಹಿಂದೆ ಅತ್ಯಂತ ಸುಂದರ ಪರಿಸರ ಹೊಂದಿತ್ತು. ಆದರೆ ಇತ್ತೀಚೆಗೆ ನಿರಂತರವಾಗಿ ತ್ಯಾಜ್ಯ ಸುರಿಯುತ್ತಿರುವ ಕಾರಣಕ್ಕೆ ಇಲ್ಲಿನ ನೈರ್ಮಲ್ಯ ಹದಗೆಟ್ಟಿದೆ. ನಾರುತ್ತಿರುವುದರಿಂದ ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸಲಿ.
- ಜಿ.ಉಮೇಶ, ಜಯನಗರ.
ಕೂಡಲೇ ನೋಟಿಸ್:
ಪ್ರಸ್ತುತ ತ್ಯಾಜ್ಯ ಸುರಿದಿರುವ ಪ್ರದೇಶ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಲ್ಲ. ಆದರೂ ಪಟ್ಟಣಕ್ಕೆ ಸಮೀಪ ಇರುವುದರಿಂದ ಎಲ್ಲ ಮಾಂಸದಂಗಡಿಗಳಿಗೂ ಕೂಡಲೇ ನೋಟಿಸ್ ನೀಡಲಾಗುವುದು. ತ್ಯಾಜ್ಯ ವಿಲೇವಾರಿಗೆ ಪಟ್ಟಣ ಪಂಚಾಯಿತಿ ಕೈಗೊಂಡಿರುವ ಕ್ರಮವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗುವುದು. ಅಲ್ಲದೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೂ ಮಾಹಿತಿ ನೀಡಲಾಗುವುದು.
-ಬಾಲಚಂದ್ರಪ್ಪ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಹೊಸನಗರ.
ಸ್ವಚ್ಛತೆಗೆ ಬದ್ಧ :
ಕಲ್ಲುಹಳ್ಳ ಅಕ್ಕಪಕ್ಕ ಮಾಂಸತ್ಯಾಜ್ಯ ಸುರಿಯುತ್ತಿರುವ ಕುರಿತು ಸಾರ್ವಜನಿಕರಿಂದ ಈವರೆಗೆ ದೂರು ಬಂದಿಲ್ಲ. ಆದರೂ ಕೂಡಲೇ ಕ್ರಮ ವಹಿಸಲಾಗುವುದು. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಸೂಕ್ತ ಕ್ರಮ ಕೈಗೊಳ್ಳಲು ಬದ್ಧವಾಗಿದೆ.
- ಸತೀಶ ಕಾಲ್ಸಸಿ, ಅಧ್ಯಕ್ಷ , ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ.
ಹೊಸನಗರ : ತ್ಯಾಜ್ಯ ವಿಲೇವಾರಿ ಸವಾಲೇ ಸರಿ. ಆದರೂ ಸರಕಾರ ಹಲವಾರು ಕಾಯಿದೆ ಜಾರಿಗೆ ತಂದಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಸ್ಥಳೀಯ ಸರಕಾರಗಳು ಎಡವುತ್ತಿವೆ. ಇದಕ್ಕೊಂದು ತಾಜಾ ನಿದರ್ಶನ ಪಟ್ಟಣಕ್ಕೆ ಸಮೀಪದ ಕಲ್ಲುಹಳ್ಳದಲ್ಲಿ ನಿರಂತರವಾಗಿ ಮಾಂಸ ತ್ಯಾಜ್ಯ ಬಿಸಾಡಲಾಗುತ್ತಿದೆ. ಮಾಂಸ ಹಾಗೂ ತ್ಯಾಜ್ಯ ವಸ್ತುಗಳನ್ನು ನಾಯಿ, ಕಾಗೆಗಳು ಕಚ್ಚಿ ಎಳೆದಾಡಿ ಎಲ್ಲೆಂದರಲ್ಲಿ ಹಾಕುತ್ತಿದೆ. ಇದರಿಂದ ಸುತ್ತಮುತ್ತಲ ಪರಿಸರ ನಾರುತ್ತಿದೆ. ಬಿಸಾಡಿರುವ ತ್ಯಾಜ್ಯ ರಾಶಿ ನೋಡಿದರೆ 'ಸ್ವಚ್ಛತೆ' ಜಾಗೃತಿ ಎಲ್ಲಿ ಹೋಯ್ತು ಎಂಬ ಪ್ರಶ್ನೆ ಕಾಡುವುದು ಸಹಜ.
ಪಟ್ಟಣಕ್ಕೆ ಸಮೀಪದಲ್ಲೇ ಇದ್ದರೂ, ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಈ ಜಾಗದಲ್ಲಿ ಹಲವು ಸಮಯದಿಂದ ತ್ಯಾಜ್ಯ ಹಾಕಲಾಗುತ್ತದೆ. ಪೌಲ್ಟ್ರಿ ಫಾರಂ, ಮಾಂಸದಂಗಡಿ ತ್ಯಾಜ್ಯ, ನೂರಾರು ಕಾಲಿ ಬಾಟಲಿ, ಕಸ, ಕಡ್ಡಿ, ಪ್ಲಾಸ್ಟಿಕ್, ಬಟ್ಟೆ, ಚೀಲ ಸೇರಿದಂತೆ ಕಸದ ರಾಶಿಯೇ ಬಿದ್ದು, ನಾರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ನಿತ್ಯವೂ ಸುರಿಯುವ ತ್ಯಾಜ್ಯದಿಂದ ಈ ಪ್ರದೇಶದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಸಾಗುವ ಯಾತನೆ ಹೇಳತೀರದಾಗಿದೆ.
ನೀರು ಕಲುಷಿತ
ಬೇಕಾಬಿಟ್ಟಿ ಸುರಿಯುತ್ತಿರುವ ತ್ಯಾಜ್ಯ ಕಲ್ಲುಹಳ್ಳದ ನೀರಿಗೆ ಸೇರುತ್ತಿರುವುದು ಸಮಸ್ಯೆಯ ಗಂಭೀರತೆಯನ್ನು ಇಮ್ಮಡಿಗೊಳಿಸಿದೆ. ಇಡೀ ಪಟ್ಟಣಕ್ಕೆ ಕುಡಿಯುವ ನೀರಿನ ಮೂಲವಾಗಿರುವ ಜಾಕ್ವೆಲ್ನತ್ತ ಈ ನೀರು ಹರಿಯುತ್ತದೆ. ಕೊಳೆತ ತಾಜ್ಯ ನೀರಿಗೆ ಸೇರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪ್ಲಾಸ್ಟಿಕ್ ಮೊದಲಾದ ತಾಜ್ಯಗಳು ಈಗಾಗಲೇ ಹಳ್ಳ ಸೇರಿದ್ದು, ನೀರು ಒಂದಿಷ್ಟು ಕಲುಷಿತಗೊಂಡಿದೆ.
ಗಡಿ ಸಮಸ್ಯೆ:
ಪ್ರಸ್ತುತ ಕಲುಷಿತಗೊಂಡಿರುವ ಪ್ರದೇಶ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ್ದರೂ, ವಾಸ್ತವದಲ್ಲಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಕ್ಕಿಂತಲೂ ಪಟ್ಟಣಕ್ಕೇ ಹತ್ತಿರದಲ್ಲಿದೆ. ಈ ಕಾರಣಕ್ಕೆ ನಿತ್ಯ ಕಸ ತಂದು ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ನಿತ್ಯವೂ ತ್ಯಾಜ್ಯ ಹಾಕುತ್ತಿರುವವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಇಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡಲು ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು ಎನ್ನುವುದು ಪಟ್ಟಣದ ನಾಗರಿಕರ ಆಗ್ರಹ.
ಕಾಯಿದೆ ಪಾಲನೆಯಾಗುತ್ತಿಲ್ಲ
ತ್ಯಾಜ್ಯ ವಿಲೇವಾರಿ ಕುರಿತು ಸ್ಥಳೀಯ ಸಂಸ್ಥೆಗಳಿಗೆ ಗುರುತರ ಜವಾಬ್ದಾರಿಯಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಈ ಹಿಂದೆಯೇ ಆದೇಶವಾಗಿದ್ದರೂ, ಬಹುತೇಕ ಕಾರ್ಯರೂಪಕ್ಕೆ ಬಂದಿಲ್ಲ. ಪಂಚಾಯತ್ರಾಜ್ ಅಧಿನಿಯಮ 1993ರ ಪ್ರಕರಣ 58ರ ಅಡಿಯಲ್ಲಿ ಕಡ್ಡಾಯವಾಗಿ ಕೈಗೊಳ್ಳಬೇಕಾದ ನೈರ್ಮಲ್ಯ ಕಾರ್ಯಕ್ರಮಗಳ ಕುರಿತು ತಿಳಿಸಲಾಗಿದೆ. ಪರಿಸರ ನೈರ್ಮಲ್ಯ ಕಾಪಾಡಲು ವಿಫಲವಾದಲ್ಲಿ ಕಾಯಿದೆಯ ಪ್ರಕರಣ 268ರ ಅಡಿಯಲ್ಲಿ ಶಿಸ್ತು ಕ್ರಮಕ್ಕೆ ಅವಕಾಶವಿದೆ. ಆದರೂ ಕಸ ವಿಲೇವಾರಿ ವಿಷಯದಲ್ಲಿ ಕಾನೂನು ಪಾಲಿಸದಿರುವುದು ವಿಪರಾರಯಸ.
ಸೂಕ್ತ ಕ್ರಮ ವಹಿಸಲಿ
ಈ ಪ್ರದೇಶ ಹಿಂದೆ ಅತ್ಯಂತ ಸುಂದರ ಪರಿಸರ ಹೊಂದಿತ್ತು. ಆದರೆ ಇತ್ತೀಚೆಗೆ ನಿರಂತರವಾಗಿ ತ್ಯಾಜ್ಯ ಸುರಿಯುತ್ತಿರುವ ಕಾರಣಕ್ಕೆ ಇಲ್ಲಿನ ನೈರ್ಮಲ್ಯ ಹದಗೆಟ್ಟಿದೆ. ನಾರುತ್ತಿರುವುದರಿಂದ ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸಲಿ.
- ಜಿ.ಉಮೇಶ, ಜಯನಗರ.
ಕೂಡಲೇ ನೋಟಿಸ್:
ಪ್ರಸ್ತುತ ತ್ಯಾಜ್ಯ ಸುರಿದಿರುವ ಪ್ರದೇಶ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಲ್ಲ. ಆದರೂ ಪಟ್ಟಣಕ್ಕೆ ಸಮೀಪ ಇರುವುದರಿಂದ ಎಲ್ಲ ಮಾಂಸದಂಗಡಿಗಳಿಗೂ ಕೂಡಲೇ ನೋಟಿಸ್ ನೀಡಲಾಗುವುದು. ತ್ಯಾಜ್ಯ ವಿಲೇವಾರಿಗೆ ಪಟ್ಟಣ ಪಂಚಾಯಿತಿ ಕೈಗೊಂಡಿರುವ ಕ್ರಮವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗುವುದು. ಅಲ್ಲದೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೂ ಮಾಹಿತಿ ನೀಡಲಾಗುವುದು.
-ಬಾಲಚಂದ್ರಪ್ಪ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಹೊಸನಗರ.
ಸ್ವಚ್ಛತೆಗೆ ಬದ್ಧ :
ಕಲ್ಲುಹಳ್ಳ ಅಕ್ಕಪಕ್ಕ ಮಾಂಸತ್ಯಾಜ್ಯ ಸುರಿಯುತ್ತಿರುವ ಕುರಿತು ಸಾರ್ವಜನಿಕರಿಂದ ಈವರೆಗೆ ದೂರು ಬಂದಿಲ್ಲ. ಆದರೂ ಕೂಡಲೇ ಕ್ರಮ ವಹಿಸಲಾಗುವುದು. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಸೂಕ್ತ ಕ್ರಮ ಕೈಗೊಳ್ಳಲು ಬದ್ಧವಾಗಿದೆ.
- ಸತೀಶ ಕಾಲ್ಸಸಿ, ಅಧ್ಯಕ್ಷ , ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ.