ಆ್ಯಪ್ನಗರ

ಮಹಿಳೆಯರು ಸಂಘಟಿತರಾದರೆ ಸಮಾಜ ಸೇವೆ

ಮಹಿಳೆಯರು ಕೂಡ ಸಂಘಟಿತರಾಗಿ ಸಮಾಜದಲ್ಲಿ ಉತ್ತಮ ಸೇವೆ ಮಾಡಬಹುದು ಎಂದು ಕೊಪ್ಪ ದೊಡ್ಡಕೆರೆ ನೀರು ಬಳಕೆದಾರರ ಸಹಕಾರ ಸಂಘದ ನಿರ್ದೇಶಕಿ ಶಾಂತ ರವಿಕುಮಾರ್‌ ಹೇಳಿದರು.

Vijaya Karnataka 4 Apr 2019, 5:00 am
ಹೊಳೆಹೊನ್ನೂರು : ಮಹಿಳೆಯರು ಕೂಡ ಸಂಘಟಿತರಾಗಿ ಸಮಾಜದಲ್ಲಿ ಉತ್ತಮ ಸೇವೆ ಮಾಡಬಹುದು ಎಂದು ಕೊಪ್ಪ ದೊಡ್ಡಕೆರೆ ನೀರು ಬಳಕೆದಾರರ ಸಹಕಾರ ಸಂಘದ ನಿರ್ದೇಶಕಿ ಶಾಂತ ರವಿಕುಮಾರ್‌ ಹೇಳಿದರು.
Vijaya Karnataka Web SMR-2HHR1


ಪಟ್ಟಣದ ಕೊಪ್ಪ ಡೊಡ್ಡಕೆರೆ ನೀರು ಬಳಕೆದಾರರ ಸಹಕಾರ ಸಂಘದಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶುಕ್ರವಾರ ನಡೆಸಿದ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನಿರ್ಮಿಸಿರುವ ಕಾಲುವೆಗಳ ಸ್ವಚ್ಛತಾ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ಮಹಿಳೆಯರು ಒಗ್ಗಟ್ಟಾಗಬೇಕು. ಸಮಾಜ ಮುಖಿ ಉತ್ತಮ ಕಾರ‍್ಯ ಮಾಡಬೇಕು. ಇದಕ್ಕೆ ಪೂರಕವಾಗಿ ಸಂಘದ ಮಹಿಳೆಯರು ತಮ್ಮ ಕೆರೆಯಿಂದ ಹಾಯುವರಿ ಪ್ರದೇಶದಲ್ಲಿ ಸಂಘದಿಂದ ನಿರ್ಮಿಸಿರುವ ಕಾಲುವೆಗಳಲ್ಲಿ ಈಗಾಗಲೇ ಕಸ ಬೆಳೆದಿದ್ದು ನೀರು ಮುಂದೆ ಹೋಗಲು ತೊಂದರೆ ಆಗುತ್ತಿರುವುದನ್ನು ಮನಗಂಡು ಕಾಲುವೆ ಸ್ವಚ್ಛಗೊಳಿಸುವ ಕಾರ‍್ಯ ಕೈಗೊಳ್ಳಲಾಯಿತು. ಇದೇ ರೀತಿ ಎಲ್ಲರೂ ಕಾರ‍್ಯಪ್ರವೃತ್ತರಾಗಬೇಕೆಂದರು.

ಸಂಘದ ಅಧ್ಯಕ್ಷ ಹಾಲಸ್ವಾಮಿ, ಸಿಇಒ ಎಂ.ಕೆ.ರವಿ, ನಿರ್ದೇಶಕರಾದ ರಂಗಮ್ಮ, ನಿರ್ಮಲಾ, ವೈ.ರವಿಕುಮಾರ್‌, ಚೌಡಪ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ