ಆ್ಯಪ್ನಗರ

ಸೈನಿಕ ಹುಳು ಬಾಧೆ, ಮುಂಜಾಗ್ರತೆಗೆ ಸೂಚನೆ

ಭತ್ತದ ಬೆಳೆಗೆ ಕಾಣಿಸಿಕೊಳ್ಳುವ ಲದ್ದಿ(ಸೈನಿಕ) ಹುಳು ಬಾಧೆ ತಾಲೂಕಿನ ವಿವಿಧ ಗ್ರಾಮಗಳಲ್ಲಿಕಾಣಿಸಿಕೊಂಡಿದೆ. ಈ ಕುರಿತು ರೈತರು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಮಂಗಳವಾರ ಪ್ರಕಟಣೆ ಹೊರಡಿಸಿದೆ.

Vijaya Karnataka 6 Nov 2019, 5:00 am
ಹೊಸನಗರ: ಭತ್ತದ ಬೆಳೆಗೆ ಕಾಣಿಸಿಕೊಳ್ಳುವ ಲದ್ದಿ(ಸೈನಿಕ) ಹುಳು ಬಾಧೆ ತಾಲೂಕಿನ ವಿವಿಧ ಗ್ರಾಮಗಳಲ್ಲಿಕಾಣಿಸಿಕೊಂಡಿದೆ. ಈ ಕುರಿತು ರೈತರು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಮಂಗಳವಾರ ಪ್ರಕಟಣೆ ಹೊರಡಿಸಿದೆ.
Vijaya Karnataka Web soldier worm infestation caution
ಸೈನಿಕ ಹುಳು ಬಾಧೆ, ಮುಂಜಾಗ್ರತೆಗೆ ಸೂಚನೆ


ಈ ಕೀಟವು ಸಾವಿರಾರು ಸಂಖ್ಯೆಯಲ್ಲಿಕಾಣಿಸಿಕೊಂಡು ಅತಿ ವೇಗವಾಗಿ ಭತ್ತದ ಗಿಡಗಳನ್ನು ನಾಶ ಮಾಡುತ್ತವೆ. ಆದ್ದರಿಂದ ರೈತರು ಪ್ರತಿ ದಿನ ಭತ್ತದ ಗದ್ದೆಗಳಿಗೆ ಭೇಟಿ ನೀಡಿ ಪರೀಕ್ಷೆ ಮಾಡುವುದು ಮತ್ತು ಕೀಟ ಬಾಧೆ ಲಕ್ಷಣಗಳು ಕಂಡು ಬಂದಾಗ ಇಲಾಖೆ ಗಮನಕ್ಕೆ ತರಬೇಕು. ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಕೀಟವನ್ನು ನಿಯಂತ್ರಣದಲ್ಲಿಡಲು ಸಹಕರಿಸಲು ಕೋರಿದ್ದಾರೆ.

ಜಮೀನಿನಲ್ಲಿನೀರನ್ನು ಪೂರ್ತಿಯಾಗಿ ಬಸಿದು ತೆಗೆದು, ಬದು ಮತ್ತು ಜಮೀನಿನ ಅಕ್ಕಪಕ್ಕ ಇತರೆ ಕಳೆ ಗಿಡಗಳು ಇಲ್ಲದಂತೆ ನೋಡಿಕೊಳ್ಳಬೇಕು. ಕ್ರಿಮಿನಾಶಕಗಳನ್ನು ವಿಷತಿಂಡಿಯೊಂದಿಗೆ ಬೆರೆಸಿ ಸಿಂಪಡಣೆ ಮಾಡುವುದರಿಂದ ಹತೋಟಿಗೆ ತರಬಹುದು. ಈ ಕುರಿತು ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ