ಆ್ಯಪ್ನಗರ

ಶ್ರೀನರಸಿಂಹ ಜಯಂತಿಗೆ ವಿಶೇಷಪೂಜೆ

ನರಸೀಪುರದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ನರಸಿಂಹ ಜಯಂತಿ ಪ್ರಯುಕ್ತ ಶನಿವಾರ ವಿಶೇಷ ಪೂಜೆ ಮತ್ತು ಉತ್ಸವ ನಡೆಯಿತು. ಈ ನಿಮಿತ್ತ ದೇಗುಲದ ಆವರಣದಲ್ಲಿ ಬೆಳಗ್ಗೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ದೇವರಿಗೆ ಎಳನೀರು ಮತ್ತು ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾ ಪೂಜೆ ನಡೆಯಿತು.

Vijaya Karnataka 19 May 2019, 5:00 am
ಆನಂದಪುರಂ: ನರಸೀಪುರದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ನರಸಿಂಹ ಜಯಂತಿ ಪ್ರಯುಕ್ತ ಶನಿವಾರ ವಿಶೇಷ ಪೂಜೆ ಮತ್ತು ಉತ್ಸವ ನಡೆಯಿತು. ಈ ನಿಮಿತ್ತ ದೇಗುಲದ ಆವರಣದಲ್ಲಿ ಬೆಳಗ್ಗೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ದೇವರಿಗೆ ಎಳನೀರು ಮತ್ತು ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾ ಪೂಜೆ ನಡೆಯಿತು.
Vijaya Karnataka Web SMR-18ANPP2

ದೇವರ ಉತ್ಸವ ಮೂರ್ತಿಯ ಪ್ರಾಕಾರೋತ್ಸವ ಮತ್ತು ಬಲಿ ಪೂಜೆ ನಡೆಸಲಾಯಿತು. ದೇವಾಲಯ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಗಮನ ಸೆಳೆದ ಫಲಕ: ದೇವಾಲಯದ ಉತ್ಸವ ನಿಮಿತ್ತ ಸಾರ್ವಜನಿಕರಿಗೆ ಪರಿಸರ ಮತ್ತು ನೀರಿನ ಮಹತ್ವದ ಅರಿವು ಮೂಡಿಸಲು ಆನಂದಪುರಂನ ಗೆಳೆಯರ ಬಳಗದಿಂದ ಜಲ ಸಂರಕ್ಷ ಣಾ ಮಹತ್ವ ಸಾರುವ ಫಲಕ (ಫ್ಲೆಕ್ಸಿ) ಹಾಕಲಾಗಿತ್ತು. ದೇವಾಲಯ ಆವರಣ ಪ್ರವೇಶಿಸುತ್ತಿದ್ದಂತೆ ಕಾಣುತ್ತಿದ್ದ ಈ ಫಲಕದ ಒಕ್ಕಣೆಯನ್ನು ಜನ ಓದಿ ಮುಂದೆ ಸಾಗಿದ ದೃಶ್ಯ ಕಂಡು ಬಂತು. ಸ್ವಚ್ಛ ಪರಿಸರ -ಸ್ವಸ್ಥ ಜೀವನ, ನಾಳೆಯ ನೀರಿಗಾಗಿ ಇಂದೇ ತಯಾರಿ ಮಾಡಿಕೊಳ್ಳಿ, ಪ್ರಕೃತಿ ಸಂರಕ್ಷ ಣೆಯೇ ನಮ್ಮ ಸಂರಕ್ಷ ಣೆ ಇತ್ಯಾದಿ ಘೋಷ ವಾಕ್ಯ ಗಮನ ಸೆಳೆದವು.

ನರಸಿಂಹ ಸ್ವಾಮಿ ದೇಗುಲ ಕಾರಣದಿಂದ ಈ ಗ್ರಾಮಕ್ಕೆ ನರಸಿಂಹಪುರ ಎಂಬ ಹೆಸರು ಪ್ರಾಚೀನ ಕಾಲದಲ್ಲಿತ್ತು. ಕ್ರಮೇಣ ನರಸೀಪುರವಾಗಿ ಬದಲಾಗಿದೆ.

ಈಗಿರುವ ದೇವಾಲಯ ಹಿಂದೆ ಗ್ರಾಮದ ಗುಡ್ಡದ ಮೇಲೆ ಇತ್ತು. ಈ ಗುಡ್ಡಕ್ಕೆ ಜನ ಈಗಲೂ ದೇವರ ಗುಡ್ಡ ಎಂದೇ ಕರೆಯುತ್ತಾರೆ. ಗುಡ್ಡದಲ್ಲಿ ಚಿಕ್ಕ ಗುಡಿ, ಸುತ್ತ ಕಲ್ಲಿನ ಆವರಣ ಗೋಡೆ, ಶಿಲಾ ಶಾಸನ ಅವಶೇಷವಿದೆ. ಗುಡ್ಡದ ಮೇಲಿನ ದೇಗುಲದ ದೇವರ ಮೂರ್ತಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತಿತ್ತು. ಕಣ್ಣೂರಲ್ಲಿ ಶ್ರೀಕಣ್ವೇಶ್ವರ ಗುಡಿ ಸ್ಥಾಪಿಸಿ ಹಲವು ಕಾಲ ಆರಾಧಿಸುತ್ತಾ ಈ ಭಾಗದಲ್ಲಿ ತಪೋನಿರತರಾದ ಕಣ್ವ ಮಹರ್ಷಿಗಳು ಇಲ್ಲಿನ ಪ್ರಾಚೀನ ಗುಡಿಯಲ್ಲಿ ಕೆಲಕಾಲ ನೆಲಸಿದ್ದರು ಎಂಬ ಪ್ರತೀತಿ ಇದೆ. ಅದೇ ರೀತಿ ಗೌತಮೇಶ್ವರ ಲಿಂಗ ಪ್ರತಿಷ್ಠಾಪಿಸಿ ಗೌತಮಪುರದಲ್ಲಿ ಕೆಲ ವರ್ಷ ನೆಲೆಸಿದ್ದ ಗೌತಮ ಋುಷಿಗಳು ಸಹ ಶಕ್ತಿ ಸಂಪಾದನೆಗೆ ಇಲ್ಲಿನ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯನ್ನು ಆರಾಧಿಸಿದ್ದರು ಎಂಬ ದಂತ ಕಥೆಯಿದೆ. ಪ್ರತಿ ವರ್ಷ ಶ್ರೀನರಸಿಂಹ ಜಯಂತಿಯಂದು ಉತ್ಸವ ಪೂಜೆ ನಡೆಸುವ ರೂಢಿ ಇಲ್ಲಿನದ್ದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ