ಆ್ಯಪ್ನಗರ

ಶೃಂಗೇರಿ ಶ್ರೀಗಳಿಂದ ಹೊಸಗುಂದ ದೇವಾಲಯ ಕುಂಭಾಭಿಷೇಕ

ಸಮೀಪದ ಹೊಸಗುಂದದಲ್ಲಿ ಬುಧವಾರ ದೇವಾಲಯಗಳ ಕಳಸಗಳಿಗೆ ಗುರುವಾರ ಕುಂಭಾಭಿಷೇಕ ಕಾರ್ಯಕ್ರಮ ಅತ್ಯಂತ ವೈಭವದಿಂದ ನಡೆಯಿತು.

Vijaya Karnataka 3 May 2019, 5:00 am
ಆನಂದಪುರಂ : ಸಮೀಪದ ಹೊಸಗುಂದದಲ್ಲಿ ಬುಧವಾರ ದೇವಾಲಯಗಳ ಕಳಸಗಳಿಗೆ ಗುರುವಾರ ಕುಂಭಾಭಿಷೇಕ ಕಾರ್ಯಕ್ರಮ ಅತ್ಯಂತ ವೈಭವದಿಂದ ನಡೆಯಿತು.
Vijaya Karnataka Web SMR-2ANPP1 UMAMESHARA TEMPLE KUMBHA


ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರುಗಳಾದ ಶ್ರೀವಿಧುಶೇಖರ ಭಾರತೀ ಸ್ವಾಮೀಜಿಗಳಿಂದ ದೇವರ ಮೂರ್ತಿಗಳಿಗೆ ಅಭಿಷೇಕ, ಮಹಾಪೂಜೆ ಮತ್ತು ಗೋಪುರದ ಮೇಲ್ಭಾಗದ ಕಳಸಗಳಿಗೆ ಕುಂಭಾಭಿಷೇಕ ನೆರವೇರಿತು.

ಶ್ರೀಉಮಾಮಹೇಶ್ವರ , ಶ್ರೀಲಕ್ಷ್ಮೀಗಣಪತಿ, ಶ್ರೀಮಹಿಷಮರ್ಧಿನಿ, ಶ್ರೀವೀರಭದ್ರ, ಶ್ರೀಕಂಚಿಕಾಳಮ್ಮ ದೇವರುಗಳಿಗೆ ಶ್ರೀಗಳು ಪೂಜೆ ಸಲ್ಲಿಸಿ ಕಲಶಾಭಿಷೇಕ ನಡೆಸಿದರು.

ಬ್ರಹ್ಮಶ್ರೀ ಕಟ್ಟೆ ಶಂಕರ ಭಟ್ರು ಹೊನ್ನಾವರ,ಜ್ಯೋತಿಷ್ಯ ರತ್ನ ಬೇಳ ಪದ್ಮನಾಭ ಶರ್ಮ ಕೇಋುಲ,ಕುಲ ಪುರೋಹಿತ ಪರಕ್ಕಜೆ ಮಹಾಲಿಂಗ ಭಟ್‌, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್‌ ಪೌರೋಹಿತ್ಯದಲ್ಲಿ ಈ ನಿಮಿತ್ತ ವಿವಿಧ ಹೋಮ ಹವನಾದಿ ಧಾರ್ಮಿಕ ಕಾರ್ಯಗಳು ಸಹ ನಡೆದವು. ಶ್ರೀಉಮಾಮಹೇಶ್ವರ ಸೇವಾ ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಎನ್‌.ಶಾಸ್ತ್ರಿ, ಪದಾಧಿಕಾರಿಗಳಾದ ಶೋಭಾ ಶಾಸ್ತ್ರಿ, ಪುಟ್ಟಪ್ಪ ಕೋವಿ, ಹೆಡ್ತ್ರಿ ಬಸವರಾಜಪ್ಪ ಗೌಡ, ಗಿರೀಶ ಕೋವಿ, ಜ್ಯೋತಿ ಕೋವಿ, ಮಹೇಶ ಹೆಗಡೆ ಮಂಕಾಳೆ, ಶೇಷಗಿರಿ, ಶ್ರೀಧರ ಅಡಿಗ, ಸಿಗಂದೂರಿನ ಧರ್ಮದರ್ಶಿ ಡಾ.ರಾಮಪ್ಪ, ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ.ಗೌರಿಶಂಕರ, ದೆಹಲಿಯ ಭಾರತೀ ಪೀಠದ ಶ್ರೀಸರ್ವಾನಂದ ಭಾರತೀ ಸ್ವಾಮೀಜಿ, ದೀನದಯಾಳ ಸೇವಾ ಟ್ರಸ್ಟಿನ ಮುಖ್ಯಸ್ಥ ಅತುಲ್‌ ಜೈನ್‌, ಆರೆಸ್ಸೆಸ್‌ನ ಪರ್ಯಾವರಣ ಸಂರಕ್ಷ ಣ ವಿಭಾಗದ ಸಂಚಾಲಕ ನವದೆಹಲಿಯ ಗೋಪಾಲ ಆರ್ಯ, ರಾಜೇಶ ಅಗರವಾಲ್‌ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ