ಸಾಗರ: ಮಾನವ ಹಕ್ಕುಗಳ ಬಗ್ಗೆ ಸೂಕ್ತ ಮಾಹಿತಿ ಇದ್ದರೆ ಶೋಷಣೆಯ ಸಂದರ್ಭ ಕಾನೂನು ನೆರವು ಪಡೆದುಕೊಳ್ಳಲು ಸಾಧ್ಯ ಎಂದು ಹಿರಿಯ ಹೆಚ್ಚುವರಿ ನ್ಯಾಯಾಧೀಶೆ ಭಾಮಿನಿ ಹೇಳಿದರು.
ಇಲ್ಲಿನ ಎಂಡಿಎಫ್ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷಚೇತನರ ಮತ್ತು ಮಾನವ ಹಕ್ಕುಗಳ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶೇಷಚೇತನರನ್ನು ಸಮಾಜ ನೋಡುವ ಮನೋಭಾವ ಬದಲಾಗಬೇಕು. ವಿಶೇಷಚೇತನರಿಗೆ ಸಾಂತ್ವನದ ಮಾತುಗಳಿಗಿಂತಲೂ, ಪ್ರೋತ್ಸಾಹದ ಕೆಲಸವನ್ನು ಮಾಡುವ ಮನೋಭಾವ ಹೆಚ್ಚಾಗಬೇಕು. ವಿದ್ಯಾರ್ಥಿಗಳು ತಮ್ಮ ನಡುವಿನ ವಿಶೇಷಚೇತರನ್ನು ಪ್ರತ್ಯೇಕವಾಗಿ ನೋಡುವ ಬದಲು, ತಮ್ಮೊಳಗಿನ ವ್ಯಕ್ತಿಯನ್ನಾಗಿ ಪರಿಗಣಿಸಬೇಕೆಂದರು.
ವಕೀಲೆ ಮಂಗಳಗೌರಿ ಮಾತನಾಡಿ, ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಒಳ್ಗೊಳ್ಳುವ ನಿಟ್ಟಿನಲ್ಲಿ ಸುಶಿಕ್ಷಿತ ಸಮಾಜ ಕೆಲಸ ಮಾಡಬೇಕು. ಸಾರ್ವಜನಿಕ ಕಟ್ಟಡಗಳಲ್ಲಿ ಸಹ ವಿಶೇಷಚೇತನರಿಗೆ ಅನುಕೂಲಕ ಸೌಲಭ್ಯ ಒದಗಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ರವೀಶ್ಕುಮಾರ್ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಜಿ.ಪಿ.ಶ್ರೀಪಾದ ಅಧ್ಯಕ್ಷ ತೆ ವಹಿಸಿದ್ದರು. ಆಕಾಶ್ ಸ್ವಾಗತಿಸಿ, ಬಿ.ಜಿ.ಮಂಜಪ್ಪ ವಂದಿಸಿ, ಅನ್ವಿತಾ ನಿರೂಪಿಸಿದರು.
ಇಲ್ಲಿನ ಎಂಡಿಎಫ್ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷಚೇತನರ ಮತ್ತು ಮಾನವ ಹಕ್ಕುಗಳ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶೇಷಚೇತನರನ್ನು ಸಮಾಜ ನೋಡುವ ಮನೋಭಾವ ಬದಲಾಗಬೇಕು. ವಿಶೇಷಚೇತನರಿಗೆ ಸಾಂತ್ವನದ ಮಾತುಗಳಿಗಿಂತಲೂ, ಪ್ರೋತ್ಸಾಹದ ಕೆಲಸವನ್ನು ಮಾಡುವ ಮನೋಭಾವ ಹೆಚ್ಚಾಗಬೇಕು. ವಿದ್ಯಾರ್ಥಿಗಳು ತಮ್ಮ ನಡುವಿನ ವಿಶೇಷಚೇತರನ್ನು ಪ್ರತ್ಯೇಕವಾಗಿ ನೋಡುವ ಬದಲು, ತಮ್ಮೊಳಗಿನ ವ್ಯಕ್ತಿಯನ್ನಾಗಿ ಪರಿಗಣಿಸಬೇಕೆಂದರು.
ವಕೀಲೆ ಮಂಗಳಗೌರಿ ಮಾತನಾಡಿ, ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಒಳ್ಗೊಳ್ಳುವ ನಿಟ್ಟಿನಲ್ಲಿ ಸುಶಿಕ್ಷಿತ ಸಮಾಜ ಕೆಲಸ ಮಾಡಬೇಕು. ಸಾರ್ವಜನಿಕ ಕಟ್ಟಡಗಳಲ್ಲಿ ಸಹ ವಿಶೇಷಚೇತನರಿಗೆ ಅನುಕೂಲಕ ಸೌಲಭ್ಯ ಒದಗಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ರವೀಶ್ಕುಮಾರ್ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಜಿ.ಪಿ.ಶ್ರೀಪಾದ ಅಧ್ಯಕ್ಷ ತೆ ವಹಿಸಿದ್ದರು. ಆಕಾಶ್ ಸ್ವಾಗತಿಸಿ, ಬಿ.ಜಿ.ಮಂಜಪ್ಪ ವಂದಿಸಿ, ಅನ್ವಿತಾ ನಿರೂಪಿಸಿದರು.