ಆ್ಯಪ್ನಗರ

‘ಬದುಕು ರೂಪಿಸುವ ಶಿಕ್ಷಣ ಭೂಷಣ’

ಜನರ ನಡುವೆ ಜೀವಿಸುವಂತೆ ಮಾಡುವ ಶಿಕ್ಷ ಣ ನಮಗೆ ಅಗತ್ಯ ಎಂದು ಸಾಗರದ ಇಂದಿರಾಗಾಂಧಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ.ಪ್ರಭಾಕರ ರಾವ್‌ ಹೇಳಿದರು.

Vijaya Karnataka 31 Jan 2019, 5:00 am
ತಾಳಗುಪ್ಪ : ಜನರ ನಡುವೆ ಜೀವಿಸುವಂತೆ ಮಾಡುವ ಶಿಕ್ಷ ಣ ನಮಗೆ ಅಗತ್ಯ ಎಂದು ಸಾಗರದ ಇಂದಿರಾಗಾಂಧಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ.ಪ್ರಭಾಕರ ರಾವ್‌ ಹೇಳಿದರು.
Vijaya Karnataka Web SMR-30TGP1


ಅವರು ಕೆಲುವೆ-ವಿಂಡ್ಲೆಕೊಪ್ಪ ಸರಕಾರಿ ಶಾಲೆಯಲ್ಲಿ ಇತ್ತೀಚೆಗೆ ಶಾಲಾ ಹಬ್ಬ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಶೈಕ್ಷ ಣಿಕ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಶಿಕ್ಷ ಣ ಎನ್ನುವುದು ಅಂಕಗಳ ಮಾನದಂಡವಾಗಬಾರದು. ಬದುಕನ್ನು ರೂಪಿಸುವ ಸಂಸ್ಕೃತಿ ಬೆಳೆಸುವ, ಆದರ್ಶ ಅನುಭವಿಸುವ ಶಿಕ್ಷ ಣದ ಆಯ್ಕೆ ನಮ್ಮದಾಗಬೇಕು. ಮಕ್ಕಳನ್ನು ಭತ್ತ ತುಂಬುವ ಚೀಲಗಳನ್ನಾಗಿಸದೆ ಭತ್ತ ಬೆಳೆಯುವ ಗದ್ದೆಗಳನ್ನಾಗಿಸಬೇಕು. ಇಂದಿನ ಶಿಕ್ಷ ಣವನ್ನು ಗಮನಿಸಿದರೆ ನಮ್ಮ ಮಕ್ಕಳನ್ನು ತುಂಬಾ ಒತ್ತಡದಲ್ಲಿ ಸಿಲುಕಿಸಿರುವುದು ವಿಪರ್ಯಾಸದ ಸಂಗತಿ. ನಮ್ಮ ಗ್ರಾಮೀಣ ಪ್ರದೇಶಗಳು ಮತ್ತಷ್ಟು ಸಬಲೀಕರಣವಾಗಬೇಕಿದೆ, ಮಕ್ಕಳ ಮನಸ್ಸನ್ನು ಸದೃಢಗೊಳಿಸಬೇಕಾಗಿದೆ. ಮಕ್ಕಳ ಕಲಿಕೆಗೆ ಪೂರಕವಾದ ಪರಿಸರ ನಿರ್ಮಿಸುವ ಕಾರ‍್ಯ ಆಗಬೇಕಿದೆ. ಅದು ಇಂತಹ ಹಳ್ಳಿ ಶಾಲೆಗಳಿಂದ ಮಾತ್ರ ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮಪಂಚಾಯಿತಿ ಸದಸ್ಯ ಅಣ್ಣಪ್ಪ, ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಸರಕಾರಗಳು ಹೆಚ್ಚಿನ ಒತ್ತು ನೀಡಬೇಕು. ಮಕ್ಕಳಲ್ಲಿರುವ ಬಹುಮುಖ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕೆಂದರು. ಎಸ್‌ಡಿಎಂಸಿ ಅಧ್ಯಕ್ಷ ಎಂ.ಮಹೇಶ್‌ ಅಧ್ಯಕ್ಷ ತೆ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಶಾರದಾ, ಮಾಜಿ ಅಧ್ಯಕ್ಷ ಧರ್ಮಪ್ಪ, ವಿಂಡ್ಲೆಕೊಪ್ಪ ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ಪರಶುರಾಮ, ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಡಿ.ಗಣಪತಪ್ಪ, ಸಂಪನ್ಮೂಲ ವ್ಯಕ್ತಿ ಜಯಶಾಂತ್‌, ಕಾನ್ಲೆ ಶಾಲೆ ಮುಖ್ಯ ಶಿಕ್ಷ ಕ ಶರಣಪ್ಪ, ಚಂದ್ರಕಲಾ, ಅಶ್ವಿನಿ ಇತರರು ಇದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯ ಶಿಕ್ಷ ಕ ವಿ.ಟಿ.ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ನೇತ್ರಾವತಿ ನಿರೂಪಿಸಿ,

ಶಿಕ್ಷ ಕ ಮೃತ್ಯಂಜಯ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ