ಆ್ಯಪ್ನಗರ

ಒಡೆದ ಕೆರೆ ಕೋಡಿ, ಬೆಳೆಗೆ ಹಾನಿ

ನೆರೆ ಹಾನಿ ಪರಿಹಾರ ಯೋಜನೆ ಅನುದಾನದಡಿ ಅನುಷ್ಠಾನಗೊಂಡ ಕಳಪೆ ಕಾಮಗಾರಿ ಪರಿಣಾಮ ಕೆರೆಕೋಡಿ ಒಡೆದು ಹಲವು ಎಕರೆ ಸಾಗುವಳಿ ಭೂಮಿಗೆ ಹಾನಿಯಾಗಿದೆ.

Vijaya Karnataka 20 Nov 2019, 5:00 am
ತೀರ್ಥಹಳ್ಳಿ: ನೆರೆ ಹಾನಿ ಪರಿಹಾರ ಯೋಜನೆ ಅನುದಾನದಡಿ ಅನುಷ್ಠಾನಗೊಂಡ ಕಳಪೆ ಕಾಮಗಾರಿ ಪರಿಣಾಮ ಕೆರೆಕೋಡಿ ಒಡೆದು ಹಲವು ಎಕರೆ ಸಾಗುವಳಿ ಭೂಮಿಗೆ ಹಾನಿಯಾಗಿದೆ.
Vijaya Karnataka Web split lake cod damage to crop
ಒಡೆದ ಕೆರೆ ಕೋಡಿ, ಬೆಳೆಗೆ ಹಾನಿ

ತಾಲೂಕಿನ ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲುಸಾಲೆ ಗ್ರಾಮದ ಬಾವಿಕೈಸರುನಲ್ಲಿಕೆರೆ ಕೋಡಿ ಒಡೆದಿದ್ದು, ರೈತರು ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 70 ಸಾವಿರ ರೂಪಾಯಿ ಅನುದಾನದಲ್ಲಿಸರಕಾರಿ ಕೆರೆಗೆ ಹೊಸದಾಗಿ ಕೋಡಿ ಕಾಮಗಾರಿ ಮಾಡಲಾಗಿತ್ತು. ಕಾಮಗಾರಿಯನ್ನು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕೋಣಂದೂರು ಮೋಹನ್‌ಶೆಟ್ಟಿ ನಿರ್ವಹಿಸಿದ್ದರು. ಕೋಡಿ ಒಡೆದದ್ದರಿಂದ ರೈತರಿಗೆ ತೀವ್ರ ತೊಂದರೆ ಉಂಟಾಗಿದೆ.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹೊಸದಾಗಿ ಕೆರೆ ಕೋಡಿ ಕಾಮಗಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಒಡೆದ ಕೆರೆಯನ್ನು ದುರಸ್ತಿ ಗೊಳಿಸುವ ಜತೆಗೆ ಕಳಪೆ ಕಾಮಗಾರಿ ಮೂಲಕ ತಪ್ಪು ಎಸೆಗಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ‍್ಯ ಎಂದು ರೈತರು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ