ಆ್ಯಪ್ನಗರ

8, 9ಕ್ಕೆ ನಗರದಲ್ಲಿ ಶ್ರೀರಾಮಪಟ್ಟಾಭಿಷೇಕ ಉತ್ಸವ

ವೈದಿಕ ಪರಿಷತ್‌, ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನ ಸಮಿತಿಯಿಂದ ಲೋಕ ಕಲ್ಯಾಣಾರ್ಥವಾಗಿ ಮಾ.8 ಮತ್ತು 9ರಂದು ಕೋಟೆ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಶ್ರೀರಾಮಪಟ್ಟಾಭಿಷೇಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವೈದಿಕ ಪರಿಷತ್‌ ಅಧ್ಯಕ್ಷ ಬಾ.ರಾ.ಜಗದೀಶಚಾರ್ಯ ಹೇಳಿದರು.

Vijaya Karnataka 7 Mar 2019, 5:00 am
ಶಿವಮೊಗ್ಗ: ವೈದಿಕ ಪರಿಷತ್‌, ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನ ಸಮಿತಿಯಿಂದ ಲೋಕ ಕಲ್ಯಾಣಾರ್ಥವಾಗಿ ಮಾ.8 ಮತ್ತು 9ರಂದು ಕೋಟೆ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಶ್ರೀರಾಮಪಟ್ಟಾಭಿಷೇಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವೈದಿಕ ಪರಿಷತ್‌ ಅಧ್ಯಕ್ಷ ಬಾ.ರಾ.ಜಗದೀಶಚಾರ್ಯ ಹೇಳಿದರು.
Vijaya Karnataka Web sri rama patabhishek festival at 8 9
8, 9ಕ್ಕೆ ನಗರದಲ್ಲಿ ಶ್ರೀರಾಮಪಟ್ಟಾಭಿಷೇಕ ಉತ್ಸವ


ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ಮಾತನಾಡಿ, ಶ್ರೀರಾಮನ ಪೂಜೆಯಿಂದ ಇಷ್ಟಾರ್ಥ ಲಾಭವು ಸಿಗುತ್ತದೆ. ಹಾಗಾಗಿ ಶ್ರೀರಾಮರ ಮಹಾಸಾಮ್ರಾಜ್ಯದ ಪಟ್ಟಾಭಿಷೇಕ ಉತ್ಸವ ಆಯೋಜಿಸಲಾಗಿದೆ ಎಂದರು.

ಮಾ.8ರಂದು ಸಂಜೆ 6.30ರಿಂದ ಉತ್ಸವಕ್ಕೆ ಚಾಲನೆ ನೀಡಲಾಗುವುದು. ದೇವತಾ ಪ್ರಾರ್ಥನೆ, ಗಣಪತಿ ಪೂಜೆ, 108 ಕಳಸ ಸ್ಥಾಪನೆ, ಉದಕ ಶಾಂತಿ, ವಿಷ್ಣುಸಹಸ್ರ ನಾಮ, ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಮಾ.9ರಂದು ಬೆಳಗ್ಗೆಯಿಂದ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ ಜರುಗಲಿವೆ ಎಂದರು.

ಅಂದು ಕೂಡ 108 ಕಳಸಗಳ ಅಭಿಷೇಕ, ರಾಮತಾರಕ ಹೋಮ ನಡೆಯಲಿದೆ. ಬೆಳಗ್ಗೆ 11ಕ್ಕೆ ಶ್ರೀರಾಮ ಪಟ್ಟಾಭಿಷೇಕ ಮತ್ತು ಹಿಂದುತ್ವ ಕುರಿತು ಪುತ್ತೂರಿನ ಶ್ರೀಕೃಷ್ಣ ಉಪಾಧ್ಯಾಯ ಅವರು ಉಪನ್ಯಾಸ ನೀಡುವರು. ಮಧ್ಯಾಹ್ನ 12ಕ್ಕೆ ಪಟ್ಟಾಭಿಷೇಕ ಉತ್ಸವ ಆರಂಭವಾಗಲಿದ್ದು, ಉತ್ಸವದಲ್ಲಿ ಶ್ರೀ ರಾಮನ ವೇಷ ಭೂಷಣ, ವೇದಘೋಷ, ಚಂಡವಾದ್ಯ, ಭಜನೆ, ಪಟ್ಟಾಭಿಷೇಕದ ಪೂಜೆ, ಅಷ್ಟಾವಧಾನ, ಕಿರೀಟಧಾರಣೆ, ಮಹಾಮಂಗಳಾರತಿ ಮತ್ತು ಮಹಾಪ್ರಸಾದ ವಿನಿಯೋಗವಿದೆ ಎಂದರು.

ಶ್ರೀರಾಮ ಪಟ್ಟಾಭಿಷೇಕ ಉತ್ಸವದ ಅಂಗವಾಗಿ ಮಾ.9ರಂದು ಬೆಳಗ್ಗೆ 10ಕ್ಕೆ ಪ್ರಧಾನ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವೈದಿಕ ಪರಿಷತ್‌ ಗೌರವಾಧ್ಯಕ್ಷ ಶ್ರೀ ಶಂಕರಾನಂದ ಜೋಯಿಸ್‌, ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, ಶಾಸಕ ಕೆ.ಎಸ್‌.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ್‌, ಎಸ್‌.ರುದ್ರೇಗೌಡ, ಮೇಯರ್‌ ಲತಾ ಗಣೇಶ್‌, ಉಪಮೇಯರ್‌ ಎಸ್‌.ಎನ್‌.ಚನ್ನಬಸಪ್ಪ, ಪ್ರಮುಖರಾದ ಡಿ.ಎಸ್‌.ಅರುಣ್‌, ಎಸ್‌.ದತ್ತಾತ್ರಿ, ಎಂ.ಬಿ.ಭಾನುಪ್ರಕಾಶ್‌, ದೀನದಯಾಳು, ಪ್ರಭಾಕರ್‌ ಮತ್ತಿತರರು ಭಾಗವಹಿಸುವರು ಎಂದರು.

ಗೋಷ್ಠಿಯಲ್ಲಿ ವೈದಿಕ ಪರಿಷತ್‌ ಪದಾಧಿಕಾರಿಗಳಾದ ಸಿ.ಸುಬ್ರಮಣ್ಯ ಭಟ್‌ , ಕೆ.ಎನ್‌.ರವೀಂದ್ರ ಭಟ್‌, ಕೆ.ಮಂಜುನಾಥ ಭಟ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ