ಶಿವಮೊಗ್ಗ: ನಗರದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಾಲಯದಿಂದ ಸಮೀಪದ ಮಹೇಂದ್ರಗಿರಿ ಕ್ಷೇತ್ರ ಪಿಳ್ಳಂಗಿರಿಗೆ ನ.24ರಂದು 20ನೇ ವರ್ಷದ 'ಶ್ರೀರಂಗ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 6.30ಕ್ಕೆ ದೇವಾಲಯದಿಂದ ಭಜನಾ ಸತ್ಸಂಗದ ಮೂಲಕ ದೇವರ ಪಾದುಕೆಯೊಂದಿಗೆ ಪಾದಯಾತ್ರೆ ಯಲ್ಲಿಪಿಳ್ಳಂಗಿರಿಗೆ ತೆರಳಲಾಗುವುದು. ನಂತರ ಅಲ್ಲಿಮೂಲ ರಂಗನಾಥ ಸ್ವಾಮಿಗೆ ಅಭಿಷೇಕ, ಪ್ರಾಕಾರೋತ್ಸವ, ಭೂತಪ್ಪನ ಸೇವೆ ನಂತರ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿಪಾದಯಾತ್ರೆಯಲ್ಲಿಪಾಲ್ಗೊಳ್ಳಬಹುದು. ಪಾದಯಾತ್ರೆಯಲ್ಲಿಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ ವಾಹನ, ಬಸ್ ಮೂಲಕವೂ ಆಗಮಿಸುವಂತೆ ದೇವಾಲಯದ ಭಕ್ತ ಭಜನಾ ಮಂಡಳಿ ತಿಳಿಸಿದೆ.
24ರಂದು ಪಿಳ್ಳಂಗಿರಿಗೆ ಶ್ರೀರಂಗ ಪಾದಯಾತ್ರೆ
ನಗರದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಾಲಯದಿಂದ ಸಮೀಪದ ಮಹೇಂದ್ರಗಿರಿ ಕ್ಷೇತ್ರ ಪಿಳ್ಳಂಗಿರಿಗೆ ನ.24ರಂದು 20ನೇ ವರ್ಷದ 'ಶ್ರೀರಂಗ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
Vijaya Karnataka 16 Nov 2019, 5:00 am