ಆ್ಯಪ್ನಗರ

ಠಾಣೆಗೆ ನಾಗಪ್ಪ ಹಾಜರಿ, ಸಿಬ್ಬಂದಿ ಪರಾರಿ!

ಪೊಲೀಸ್‌ ಠಾಣೆಗೆ ನಾಗರ ಹಾವೊಂದು ಗುರುವಾರ ನುಗ್ಗಿದ ಪರಿಣಾಮ ಕರ್ತವ್ಯದಲ್ಲಿ ಸಿಬ್ಬಂದಿ ಹೊರಗೋಡಿದ ಘಟನೆ ನಡೆದಿದೆ.

Vijaya Karnataka 9 Nov 2018, 5:00 am
ಶಿವಮೊಗ್ಗ: ಪೊಲೀಸ್‌ ಠಾಣೆಗೆ ನಾಗರ ಹಾವೊಂದು ಗುರುವಾರ ನುಗ್ಗಿದ ಪರಿಣಾಮ ಕರ್ತವ್ಯದಲ್ಲಿ ಸಿಬ್ಬಂದಿ ಹೊರಗೋಡಿದ ಘಟನೆ ನಡೆದಿದೆ.
Vijaya Karnataka Web staff escape snake attend at police station
ಠಾಣೆಗೆ ನಾಗಪ್ಪ ಹಾಜರಿ, ಸಿಬ್ಬಂದಿ ಪರಾರಿ!


ವಿದ್ಯಾನಗರದಲ್ಲಿರುವ ಪೂರ್ವ ಟ್ರಾಫಿಕ್‌ ಠಾಣೆಗೆ ಮಧ್ಯಾಹ್ನ ನಾಗರ ಹಾವು ನುಗ್ಗಿದೆ. ಇದರಿಂದ ಕಕ್ಕಾಬಿಕ್ಕಿಯಾದ ಸಿಬ್ಬಂದಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಠಾಣೆಯಲ್ಲೆಲ್ಲ ಹರಿದಾಡಿದ ಹಾವು ಪೊಲೀಸರು ಬೆಚ್ಚಿಬೀಳುವಂತೆ ಮಾಡಿದೆ. ಬಳಿಕ ಸ್ನೇಕ್‌ ಕಿರಣ್‌ ಅವರಿಗೆ ಕರೆ ಮಾಡಿದ್ದು, ಅವರು ಬಂದು ಹಾವು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವು ಸಾಗಹಾಕಿದ ಮೇಲೆ ಠಾಣೆಯೊಳಗೆ ಬಂದ ಪೊಲೀಸರು ನಿರಾಳವಾಗಿ ಕಾರ್ಯನಿರ್ವಹಿಸಿದರು.

===============

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ