ಆ್ಯಪ್ನಗರ

‘ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಉತ್ತೇಜಿಸಿ’

ಖಾಸಗಿ ಹಾಗೂ ಸರಕಾರಿ ಶಾಲೆಗಳ ಪೈಪೋಟಿ ಮಧ್ಯೆ ಸರಕಾರಿ ಶಾಲೆಗಳು ಗುಣಮಟ್ಟ ಕಾಯ್ದುಕೊಂಡಿವೆ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಕೆ.ಮಂಜುನಾಥ್‌ ಅಭಿಪ್ರಾಯಪಟ್ಟರು.

Vijaya Karnataka 29 Jan 2019, 5:00 am
ಸೊರಬ: ಖಾಸಗಿ ಹಾಗೂ ಸರಕಾರಿ ಶಾಲೆಗಳ ಪೈಪೋಟಿ ಮಧ್ಯೆ ಸರಕಾರಿ ಶಾಲೆಗಳು ಗುಣಮಟ್ಟ ಕಾಯ್ದುಕೊಂಡಿವೆ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಕೆ.ಮಂಜುನಾಥ್‌ ಅಭಿಪ್ರಾಯಪಟ್ಟರು.
Vijaya Karnataka Web SMR-25srbp2


ಪಟ್ಟಣದ ಕಾನಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಚಿಣ್ಣರ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆಯಲ್ಲಿ ಗುಣಮಟ್ಟದ ಶಿಕ್ಷ ಣದ ಜತೆಗೆ ಸುಸಜ್ಜಿತ ವಾತಾವರಣ ನಿರ್ಮಾಣವಾಗಬೇಕಾದರೆ ಶಿಕ್ಷ ಕರ ಶ್ರಮ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಮಕ್ಕಳ ಪೋಷಕರ ಸಹಕಾರ ಅಗತ್ಯ ಎಂದರು. ಉತ್ತಮ ಫಲಿತಾಂಶ ನಿಟ್ಟಿನಲ್ಲಿ ಕಲಿಕೆಯಲ್ಲಿ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿ ಅವರು ಪ್ರತಿಭಾವಂತ ವಿದ್ಯಾರ್ಥಿಗಳ ಜತೆ ಸಮಾನ ಸ್ಪರ್ಧೆ ಒಡ್ಡಲು ತಯಾರಿ ನಡೆಸಬೇಕು. ಪೋಷಕರು ಖಾಸಗಿ ಶಾಲೆ ವ್ಯಾಮೋಹಕ್ಕೆ ಒಳಗಾಗದೇ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕೆಂದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಹಸೀನಾ ಬೇಗಂ ಅಧ್ಯಕ್ಷ ತೆ ವಹಿಸಿದ್ದರು. ದಿವಾಕರ ಭಟ್‌ ಭಾವೆ, ಪ.ಪಂ.ಸದಸ್ಯ ಎಂ.ಡಿ.ಉಮೇಶ್‌, ದಯಾನಂದ, ಶಶಿಕಲಾ, ನಂಜುಂಡ, ಶಿಲ್ಪಾ, ಶಿಕ್ಷ ಕರಾದ ಷಣ್ಮುಖಾಚಾರ್‌, ಭಾಗ್ಯಜ್ಯೋತಿ, ಜಯಮ್ಮ, ಶಾರದಾ, ಸಂಜನಾ, ಸಹನಾ ಇತರರಿದ್ದರು.

-----------
ಉನ್ನತ ಶಿಕ್ಷ ಣ ಪಡೆದವರಷ್ಟೇ ಜ್ಞಾನಿಗಳಲ್ಲ. ಶಿಕ್ಷ ಣದ ಜತೆಗೆ ಸಂಸ್ಕಾರ ಮೈಗೂಡಿಸಿಕೊಂಡವರು ಸಮಾಜದಲ್ಲಿ ಉತ್ತಮ ಜೀವನ ನಡೆಸಬಲ್ಲರು. ಪೋಷಕರು ಮಕ್ಕಳ ಜತೆ ಮಾತನಾಡುವಾಗ ಒಳ್ಳೆಯ ನಡೆನುಡಿ ಹೊಂದಿ ಭವಿಷ್ಯ ರೂಪಿಸುವಲ್ಲಿ ನಿರತರಾಗಬೇಕು.
-ಎಚ್‌.ಆಂಜನೇಯ, ಕ್ಷೇತ್ರ ಸಮನ್ವಯಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ