ದೇವಸ್ಥಾನದ ಹುಂಡಿ ಒಡೆದು ಕಳವು
ಇಲ್ಲಿನ ಕೃಷಿ ನಗರದ ಗಣಪತಿ ದೇವಸ್ಥಾನದ ಹುಂಡಿ ಒಡೆದು ಕಾಣಿಕೆ ಹಣ ಕಳವು ಮಾಡಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಧನುರ್ಮಾಸದ ಪೂಜೆಗೆಂದು ಅರ್ಚಕರು ಬೆಳಗ್ಗಿನ ಜಾವ 4ಕ್ಕೆ ಆಗಮಿಸಿದಾಗ ದೇವಸ್ಥಾನದ ಬಾಗಿಲು ತೆರೆದಿರುವುದು ಕಂಡುಬಂದಿದೆ.
Vijaya Karnataka 18 Dec 2018, 5:00 am
ಶಿವಮೊಗ್ಗ: ಇಲ್ಲಿನ ಕೃಷಿ ನಗರದ ಗಣಪತಿ ದೇವಸ್ಥಾನದ ಹುಂಡಿ ಒಡೆದು ಕಾಣಿಕೆ ಹಣ ಕಳವು ಮಾಡಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಧನುರ್ಮಾಸದ ಪೂಜೆಗೆಂದು ಅರ್ಚಕರು ಬೆಳಗ್ಗಿನ ಜಾವ 4ಕ್ಕೆ ಆಗಮಿಸಿದಾಗ ದೇವಸ್ಥಾನದ ಬಾಗಿಲು ತೆರೆದಿರುವುದು ಕಂಡುಬಂದಿದೆ.
ಒಳ ಪ್ರವೇಶಿಸಿದಾಗ ಹುಂಡಿ ಲಾಕರ್ ಒಡೆಯಲಾಗಿತ್ತು. ಅದರಲ್ಲಿ ಕಾಣಿಕೆಯ ಹಣ ಇರಲಿಲ್ಲ. ತಕ್ಷ ಣ ವಿಷಯವನ್ನು ದೇವಸ್ಥಾನ ಸಮಿತಿ ಗಮನಕ್ಕೆ ತರಲಾಗಿದೆ. ಇದರೊಂದಿಗೆ, ಪಕ್ಕದಲ್ಲೇ ಇದ್ದ ಸಮಿತಿ ಕಾರ್ಯಾಲಯದ ಎರಡು ಅಲ್ಮೇರಾ ಒಡೆಯಲಾಗಿದೆ. ಅದರಲ್ಲಿ ರಶೀದಿ ಹಾಗೂ ದಾಖಲಾತಿ ಮಾತ್ರ ಇದ್ದಿದ್ದರಿಂದ ನಗದೇನೂ ಕಳ್ಳರ ಕೈಗೆ ಸಿಕ್ಕಿಲ್ಲ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ಪರಿಶೀಲಿಸಿದರು.
ಒಳ ಪ್ರವೇಶಿಸಿದಾಗ ಹುಂಡಿ ಲಾಕರ್ ಒಡೆಯಲಾಗಿತ್ತು. ಅದರಲ್ಲಿ ಕಾಣಿಕೆಯ ಹಣ ಇರಲಿಲ್ಲ. ತಕ್ಷ ಣ ವಿಷಯವನ್ನು ದೇವಸ್ಥಾನ ಸಮಿತಿ ಗಮನಕ್ಕೆ ತರಲಾಗಿದೆ. ಇದರೊಂದಿಗೆ, ಪಕ್ಕದಲ್ಲೇ ಇದ್ದ ಸಮಿತಿ ಕಾರ್ಯಾಲಯದ ಎರಡು ಅಲ್ಮೇರಾ ಒಡೆಯಲಾಗಿದೆ. ಅದರಲ್ಲಿ ರಶೀದಿ ಹಾಗೂ ದಾಖಲಾತಿ ಮಾತ್ರ ಇದ್ದಿದ್ದರಿಂದ ನಗದೇನೂ ಕಳ್ಳರ ಕೈಗೆ ಸಿಕ್ಕಿಲ್ಲ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ಪರಿಶೀಲಿಸಿದರು.