ಆ್ಯಪ್ನಗರ

ಸಮಸ್ಯೆ ಪರಿಹಾರಕ್ಕೆ ಅಧ್ಯಯನ ಪೂರಕ

ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಅಧ್ಯಯನ ಕೇಂದ್ರಗಳು ಸಮಾಜವನ್ನು ಮುನ್ನಡೆಸುವ ಜಾತ್ಯಾತೀತ ಮತ್ತು ಚಲನಶೀಲ, ಜಾಗತಿಕ ಮಟ್ಟದ ಚಿಂತನೆಗಳನ್ನು ಹುಟ್ಟುಹಾಕುವ ಕೇಂದ್ರಗಳಾಗಬೇಕು ಎಂದು ಕವಿ, ಸಾಮಾಜಿಕ ಚಿಂತಕ ಪ್ರೊ.ಕೆ.ಬಿ.ಸಿದ್ದಯ್ಯ ಅಭಿಪ್ರಾಯಪಟ್ಟರು.

Vijaya Karnataka 6 Oct 2018, 5:00 am
ಶಿವಮೊಗ್ಗ : ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಅಧ್ಯಯನ ಕೇಂದ್ರಗಳು ಸಮಾಜವನ್ನು ಮುನ್ನಡೆಸುವ ಜಾತ್ಯಾತೀತ ಮತ್ತು ಚಲನಶೀಲ, ಜಾಗತಿಕ ಮಟ್ಟದ ಚಿಂತನೆಗಳನ್ನು ಹುಟ್ಟುಹಾಕುವ ಕೇಂದ್ರಗಳಾಗಬೇಕು ಎಂದು ಕವಿ, ಸಾಮಾಜಿಕ ಚಿಂತಕ ಪ್ರೊ.ಕೆ.ಬಿ.ಸಿದ್ದಯ್ಯ ಅಭಿಪ್ರಾಯಪಟ್ಟರು.
Vijaya Karnataka Web SMR-5SMG1


ಶಂಕರಘಟ್ಟದ ಕುವೆಂಪು ವಿವಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಅಂಬೇಡ್ಕರ್‌ ಮ್ಯೂಸಿಯಂ, ಡಾ. ಬಾಬು ಜಗಜೀವನರಾಂ ಅಧ್ಯಯನ ಕೇಂದ್ರ ಮತ್ತು ಪ್ರೊ.ಬಿ.ಕೃಷ್ಣಪ್ಪ ಅಧ್ಯಯನ ಕೇಂದ್ರಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾತ್ಯಾತೀತತೆ ಸ್ನೇಹಿತರ ಗುಂಪಿನೊಂದಿಗೆ ಆರಂಭವಾಗಿ ಅಂತರ್ಜಾತಿ ವಿವಾಹ, ಜೀವನಪದ್ಧತಿ, ಅತಿಥಿ ಸತ್ಕಾರಗಳನ್ನು ಒಳಗೊಂಡು ಜೀವನದ ವಿವಿಧ ಘಟ್ಟಗಳಲ್ಲಿ ಮುಂದುವರೆಯಬೇಕು. ಅಸಮಾನತೆ, ಮೂಢನಂಬಿಕೆ, ದಾರಿದ್ರ್ಯ, ಜಾತಿ ಶೋಷಣೆಗಳ ವಿರುದ್ಧ ಅಂಬೇಡ್ಕರ್‌ ಧ್ವನಿ ಎತ್ತಿದರು. ಜಗಜೀವನ್‌ರಾಂ ಅದನ್ನು ಕಾರ್ಯರೂಪಕ್ಕೆ ತರಲು ಹೋರಾಡಿದರು ಹಾಗೂ ಪ್ರೊ.ಬಿ.ಕೃಷ್ಣಪ್ಪ ಆ ಮೌಲ್ಯಗಳಂತೆ ಬದುಕಿ ತೋರಿಸಿದರು. ಇಂತಹ ಮಹಾನ್‌ ವ್ಯಕ್ತಿಗಳ ಜೀವನ ಮೌಲ್ಯ ಅರಿಯುವ ಜತೆಗೆ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಈ ಕೇಂದ್ರಗಳು ಪೂರಕವಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ವಿವಿ ಕುಲಪತಿ ಪ್ರೊ. ಜೋಗನ್‌ ಶಂಕರ್‌ ಮಾತನಾಡಿ, ಅಧ್ಯಯನ ಕೇಂದ್ರಗಳಲ್ಲಿ ಜಾಗತಿಕ ಮಟ್ಟದ ವಿಷಯ, ಚಳುವಳಿ, ಹೋರಾಟ ಮತ್ತು ಸಮಸ್ಯೆಗಳ ಬಗ್ಗೆ ಸಂಶೋಧನೆ ಕೈಗೊಳ್ಳಲು ಕ್ರಮ ಕೈಗೊಂಡಿದ್ದು, ಇಥಿಯೋಪಿಯಾ ಮತ್ತು ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದದ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಡಿಎಸ್‌ಎಸ್‌ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ,ಡಿಎಸ್‌ಎಸ್‌ನ ರಾಜ್ಯ ಸಂಚಾಲಕ ಸತ್ಯ ಮಾತನಾಡಿದರು. ವಿವಿಯ ಕುಲಸಚಿವ ಪ್ರೊ. ಭೋಜ್ಯಾನಾಯ್ಕ, ಪ್ರೊ. ರಾಜಾನಾಯಕ, ಪ್ರೊ. ಹಿರೇಮಣಿನಾಯ್ಕ, ಡಾ.ಅಂಬೇಡ್ಕರ್‌ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜಗನ್ನಾಥ ಡಾಂಗೆ, ಪ್ರೊ. ರವೀಂದ್ರ ಕದಂ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ