ಆ್ಯಪ್ನಗರ

‘ಸಂಕಷ್ಟ ಎದುರಿಸುವ ತಾಳ್ಮೆಯಿಂದಲೇ ಯಶಸ್ಸು ’

ತನ್ನ ತಾಯಿ ಹಾಗೂ ತಾಯ್ನಾಡನ್ನು ಗೌರವಿಸದಾತ ನಿಷ್ೊ್ರಯೋಜಕ ವ್ಯಕ್ತಿ ಎಂದು ಯುವ ವಿಜ್ಞಾನಿ ಅಂತಾರಾಷ್ಟ್ರೀಯ ಸಾಧಕ ಪ್ರತಾಪ್‌ ಹೇಳಿದರು.

Vijaya Karnataka 28 Dec 2018, 5:00 am
ಹೊಸನಗರ: ತನ್ನ ತಾಯಿ ಹಾಗೂ ತಾಯ್ನಾಡನ್ನು ಗೌರವಿಸದಾತ ನಿಷ್ೊ್ರಯೋಜಕ ವ್ಯಕ್ತಿ ಎಂದು ಯುವ ವಿಜ್ಞಾನಿ ಅಂತಾರಾಷ್ಟ್ರೀಯ ಸಾಧಕ ಪ್ರತಾಪ್‌ ಹೇಳಿದರು.
Vijaya Karnataka Web SMR-27HOSP1


ಪಟ್ಟಣಕ್ಕೆ ಸಮೀಪದ ಕಳೂರು ಗ್ರಾಮದ ಶ್ರೀ ಗುರೂಜಿ ಇಂಟರ್‌ನ್ಯಾಷನಲ್‌ ರೆಸಿಡೆನ್ಸಿಯಲ್‌ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಹಾತ್ಮ 150, ವಿವೇಕ ವಿಜಯಪತಾಕೆ 125ನೇ ವರ್ಷದ ನೆನಪು ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಎಳವೆಯಿಂದಲೇ ಮಕ್ಕಳು ದೇಶಪ್ರೇಮ ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ಕೊಡುಗೆ ನೀಡಿದಲ್ಲಿ ಪ್ರಜೆಗಳ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದರು.

ಆಂಗ್ಲ ಭಾಷೆ ವ್ಯಾಮೋಹ ದೇಶದ ಸಂಸ್ಕೃತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕನ್ನಡಿಗರಾಗಿದ್ದರೂ, ಕನ್ನಡಭಾಷೆಯನ್ನು ತಾತ್ಸಾರದಿಂದ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದೆ ಕನ್ನಡ ಕೇವಲ ಪುಸ್ತಕದ ಲಿಪಿಯಾಗಿ ಉಳಿಯಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಅಂಕಗಳಿಸುವುದೇ ಸಾಧನೆಯಲ್ಲ, ಬದಲಾಗಿ ವಿಷಯದ ಕುರಿತು ಆಳವಾದ ಜ್ಞಾನ ಹೊಂದಿ ಇನ್ನೊಬ್ಬರಿಗೆ ಕಲಿಸುವುದು ನಿಜವಾದ ಸಾಧನೆ. ಸಂಕಷ್ಟಗಳು ಜೀವನದ ಪ್ರತಿ ಹಂತದಲ್ಲೂ ಬರುತ್ತವೆ. ಅವುಗಳನ್ನು ಎದುರಿಸುವ ತಾಳ್ಮೆ, ಜಾಣ್ಮೆ ಹೊಂದಿದರೆ ಜೀವನದಲ್ಲಿ ಸಫಲತೆ ಕಾಣಲು ಸಾಧ್ಯ ಎಂದರು. ವೃತ್ತ ನಿರೀಕ್ಷ ಕ ಮಂಜುನಾಥಗೌಡ, ಶಾಲಾ ಸಮಿತಿ ಅಧ್ಯಕ್ಷ ಸುದೇಶ್‌ ಕಾಮತ್‌, ಪ್ರಾಚಾರ‍್ಯ ಶಾಂತಮೂರ್ತಿ, ನಾಗೇಶ್‌, ಶ್ರೀನಿವಾಸಕಾಮತ್‌, ಕನಕರಾಜ್‌, ಶ್ರೀಧರ ಉಡುಪ ಮತ್ತಿತರರು ಇದ್ದರು.

ಶಿಕ್ಷ ಕಿಯರು ಪ್ರಾರ್ಥಿಸಿ, ಶುಷ್ಮ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ಪಾಂಚಜನ್ಯ ಯಕ್ಷ ಗಾನ ಪ್ರದರ್ಶನ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ