ನಾಡಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಸಮೀಪದ ಬೆಳಂದೂರು ಗ್ರಾಮದ ತೊರೆಗದ್ದೆ ವಾಸಿ ವರ್ಗೀಸ್(65) ಕಾಡಿನಲ್ಲಿ ನಾಡಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka 16 Sep 2018, 5:00 am
ತ್ಯಾಗರ್ತಿ(ಸಾಗರ ತಾ.): ಸಮೀಪದ ಬೆಳಂದೂರು ಗ್ರಾಮದ ತೊರೆಗದ್ದೆ ವಾಸಿ ವರ್ಗೀಸ್(65) ಕಾಡಿನಲ್ಲಿ ನಾಡಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಡೆತ್ನೋಟ್ ಬರೆದಿಟ್ಟು ಕಾಣೆಯಾಗಿದ್ದ ಇವರನ್ನು ಮನೆಯವರು ಮತ್ತು ಗ್ರಾಮಸ್ಥರು ಹುಡುಕಾಡಿದಾಗ ಮನೆಯಿಂದ 1.5 ಕಿ.ಮೀ. ದೂರದ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಶನಿವಾರ ಪತ್ತೆಯಾಗಿದೆ.
ಇವರಿಗೆ ಐವರು ಪುತ್ರಿಯರು, ಐವರು ಪುತ್ರರು ಇದ್ದಾರೆ. 2 ವರ್ಷದ ಹಿಂದೆ ವರ್ಗೀಸ್ ಪತ್ನಿ ಮೃತಪಟ್ಟಿದ್ದರು. ತೀವ್ರ ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಡೆತ್ನೋಟ್ ಬರೆದಿಟ್ಟು ಕಾಣೆಯಾಗಿದ್ದ ಇವರನ್ನು ಮನೆಯವರು ಮತ್ತು ಗ್ರಾಮಸ್ಥರು ಹುಡುಕಾಡಿದಾಗ ಮನೆಯಿಂದ 1.5 ಕಿ.ಮೀ. ದೂರದ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಶನಿವಾರ ಪತ್ತೆಯಾಗಿದೆ.
ಇವರಿಗೆ ಐವರು ಪುತ್ರಿಯರು, ಐವರು ಪುತ್ರರು ಇದ್ದಾರೆ. 2 ವರ್ಷದ ಹಿಂದೆ ವರ್ಗೀಸ್ ಪತ್ನಿ ಮೃತಪಟ್ಟಿದ್ದರು. ತೀವ್ರ ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.