ಆ್ಯಪ್ನಗರ

ಸುಮಲತಾ ಅಭಿಮಾನಿಯಿಂದ ಬಾಡೂಟ

ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಭರ್ಜರಿ ಗೆಲುವು ಸಾಧಿಸಿದ ಖುಷಿಗೆ ಶಿವಮೊಗ್ಗದಲ್ಲಿ ಅಭಿಮಾನಿಯೊಬ್ಬರು ನೆಂಟರು, ಇಷ್ಟರಿಗೆ ಬಾಡೂಟ ಹಾಕಿಸಿದ್ದಾರೆ.

Vijaya Karnataka 25 May 2019, 5:00 am
ಶಿವಮೊಗ್ಗ : ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಭರ್ಜರಿ ಗೆಲುವು ಸಾಧಿಸಿದ ಖುಷಿಗೆ ಶಿವಮೊಗ್ಗದಲ್ಲಿ ಅಭಿಮಾನಿಯೊಬ್ಬರು ನೆಂಟರು, ಇಷ್ಟರಿಗೆ ಬಾಡೂಟ ಹಾಕಿಸಿದ್ದಾರೆ.
Vijaya Karnataka Web 24SMG4


ಇಲ್ಲಿನ ಜೆ.ಎಚ್‌.ಪಟೇಲ್‌ ಬಡಾವಣೆಯ ಹನುಮಂತಪ್ಪ ಎಂಬುವವರೇ ಬಾಡೂಟ ಬಡಿಸಿದವರು. ಇವರು ರೆಬಲ್‌ ಸ್ಟಾರ್‌ ಅಂಬರೀಷ್‌ ಅವರ ಅಭಿಮಾನಿಯಾಗಿದ್ದು, 15 ವರ್ಷದಿಂದ ಅಂಬರೀಷ್‌ ಅವರ ಜನ್ಮದಿನವನ್ನು ಆಚರಿಸುತ್ತ ಬಂದಿದ್ದಾರೆ. ಈಗ ಸುಮಲತಾ ಜಯಭೇರಿ ಬಾರಿಸಿದ್ದಕ್ಕೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

ಜೆ.ಎಚ್‌. ಪಟೇಲ್‌ ಬಡಾವಣೆಯ ತಮ್ಮ ಮನೆ ಮುಂದೆ ಪೆಂಡಾಲ್‌ ಹಾಕಿಸಿ, ಅದರ ಮುಂದೆ ಸುಮಲತಾ ಅಂಬರೀಷ್‌ ಅವರಿಗೆ ಹಾರ್ದಿಕ ಅಭಿನಂದನೆ ಎಂದು ಫ್ಲೆಕ್ಸ್‌ ಹಾಕಿಸಿದ್ದಾರೆ. ಅದರಲ್ಲಿ ಮಂಡ್ಯದಲ್ಲಿ ಸುಮಲತಾ ಪರವಾಗಿ ಪ್ರಚಾರ ನಡೆಸಿದ ಚಿತ್ರನಟ ದರ್ಶನ್‌ ಮತ್ತು ಯಶ್‌ ಫೋಟೊಗಳನ್ನೂ ಹಾಕಿಸಿದ್ದಾರೆ.

======
ಬಾಡೂಟ ಸೇವಿಸುವುದಕ್ಕೆ 300ರಿಂದ 350 ಜನ ಬಂದಿದ್ದರು. ಸಾಕಷ್ಟು ಸಂಘರ್ಷಗಳ ಮಧ್ಯೆಯೂ ಸುಮಲತಾ ಅವರು ಗೆದ್ದಿದ್ದಕ್ಕೆ ಖುಷಿಯಾಗಿದೆ.

- ಹನುಮಂತಪ್ಪ, ಸುಮಲತಾ ಅಭಿಮಾನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ