ಆ್ಯಪ್ನಗರ

ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ: ಬಿವೈಆರ್‌

ಪಟ್ಟಣದ ಅಭಿವೃದ್ಧಿಗೆ ಬಿಎಸ್‌ವೈ ಕೊಡುಗೆ ಅಪಾರ. ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Vijaya Karnataka 28 May 2019, 5:00 am
ಶಿಕಾರಿಪುರ: ಪಟ್ಟಣದ ಅಭಿವೃದ್ಧಿಗೆ ಬಿಎಸ್‌ವೈ ಕೊಡುಗೆ ಅಪಾರ. ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
Vijaya Karnataka Web SMR-27SKP1


ಪಟ್ಟಣದಲ್ಲಿ ಭಾನುವಾರ ರಾತ್ರಿ ಶಿರಾಳಕೊಪ್ಪ ವೃತ್ತದಲ್ಲಿ ನಡೆದ ಪುರಸಭೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಂಜನಾಪುರ ಜಲಾಶಯದಿಂದ ಎರಡೂ ಪಟ್ಟಣಕ್ಕೆ ಪೈಪ್‌ಲೈನ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು ಇಂತಹ ಬೇಸಿಗೆಯಲ್ಲೂ ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣದ ಜನರು ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿಲ್ಲ ಎಂದರು.

ಪಟ್ಟಣದ ಎಲ್ಲ ವಾರ್ಡ್‌ನಲ್ಲೂ ಕಾಂಕ್ರಿಟ್‌ ಚರಂಡಿ, ರಸ್ತೆ ಮಾಡಿದ್ದು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಖಾಸಗಿ ಬಸ್‌ನಿಲ್ದಾಣ, ದೊಡ್ಡ ಸಂಖ್ಯೆಯಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ, ವಿಶಾಲ ಸಂತೆ ಮೈದಾನ ನಿರ್ಮಿಸಿ ಪುರಸಭೆಗೆ ಉತ್ತಮ ಆದಾಯ ಬರುವಂತೆ ಮಾಡಲಾಗಿದೆ. ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ನಿವಾಸಿಗಳ ಅನುಕೂಲಕ್ಕಾಗಿ ಆಸ್ಪತ್ರೆ, ಕಚೇರಿ ಕಟ್ಟಡ ಸಂಕೀರ್ಣ ಹೀಗೆ ಹಲವು ಅನುಕೂಲ ಕಲ್ಪಿಸಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಹುಚ್ಚುರಾಯಸ್ವಾಮಿ ಕೆರೆ ಅಭಿವೃದ್ಧಿ ಮೂಲಕ ನಾಲ್ಕು ಕಿ.ಮೀ. ವಾಕಿಂಗ್‌ ಟ್ರಾಕ್‌ ಮಾಡಲಾಗಿದೆ. ಸಂಗೀತ ಕಾರಂಜಿ, ಪುಷ್ಕರಣಿ, ದೇವಸ್ಥಾನ ಅಭಿವೃದ್ಧಿ, ಎಪಿಎಂಸಿ ಸಮಗ್ರ ಅಭಿವೃದ್ಧಿ, ವಿದ್ಯುತ್‌ ಮೂಲ ಸೌಕರ‍್ಯ, ಸುಸಜ್ಜಿತ ಗ್ರಂಥಾಲಯ, ಕೋರ್ಟ್‌ ಕಟ್ಟಡ ಹೀಗೆ ಹಲವು ಜನಪರ ಕೆಲಸದ ಮೂಲಕ ಪಟ್ಟಣದ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಮುಂದೆಯೂ ಇನ್ನಷ್ಟು ಅಭಿವೃದ್ಧಿ ಕೆಲಸಕ್ಕಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಅವರು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ