ಆ್ಯಪ್ನಗರ

ರಾಷ್ಟ್ರ ರಕ್ಷ ಣೆಗೆ ಬಿಜೆಪಿ ಬೆಂಬಲಿಸಿ: ಹಾಲಪ್ಪ

ಬಿಜೆಪಿ ಪಕ್ಷ ದ ಮೂಲ ಮಂತ್ರ ದೇಶ ಮೊದಲು. ಈ ಪರಿಕಲ್ಪನೆಯೊಂದಿಗೆ ರಾಷ್ಟ್ರದ ಸಂರಕ್ಷ ಣೆಗೆ ಪಣ ತೊಟ್ಟಿರುವ ಬಿಜೆಪಿ, ಮೋದಿ ನೇತೃತ್ವದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಶಾಸಕ ಹಾಲಪ್ಪ ಹೇಳಿದರು.

Vijaya Karnataka 11 Apr 2019, 5:00 am
ರಿಪ್ಪನ್‌ಪಟೆ: ಬಿಜೆಪಿ ಪಕ್ಷ ದ ಮೂಲ ಮಂತ್ರ ದೇಶ ಮೊದಲು. ಈ ಪರಿಕಲ್ಪನೆಯೊಂದಿಗೆ ರಾಷ್ಟ್ರದ ಸಂರಕ್ಷ ಣೆಗೆ ಪಣ ತೊಟ್ಟಿರುವ ಬಿಜೆಪಿ, ಮೋದಿ ನೇತೃತ್ವದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಶಾಸಕ ಹಾಲಪ್ಪ ಹೇಳಿದರು.
Vijaya Karnataka Web support bjp for nation safety halappa
ರಾಷ್ಟ್ರ ರಕ್ಷ ಣೆಗೆ ಬಿಜೆಪಿ ಬೆಂಬಲಿಸಿ: ಹಾಲಪ್ಪ


ಪಟ್ಟಣದ ವಿನಾಯಕ ವೃತ್ತದಲ್ಲಿ ಬುಧವಾರ ಬಿಜೆಪಿ ನೂತನ ಕಚೇರಿ ಉದ್ಘಾಟಿಸಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ರಕ್ಷ ಣೆಗಾಗಿ ಪ್ರತಿ ದಾಳಿ ಮಾಡಿ ತಕ್ಕ ಪಾಠ ಕಲಿಸಿದ ದಿಟ್ಟ ಪ್ರಧಾನಿ ಮೋದಿ ಅವರನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಲು ಇಡೀ ಭಾರತ ಕಾತುರದಿಂದ ಕಾಯುತ್ತಿದೆ. ದೇಶ, ಸೈನಿಕ ಮತ್ತು ರೈತರ ಅಭ್ಯುದ್ಯಯಕ್ಕಾಗಿ ಮೋದಿ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

ಮೈತ್ರಿ ಪಕ್ಷ ದವರಿಗೆ ಈಗಾಗಲೇ ಸೋಲಿನ ಮುನ್ಸೂಚನೆ ಸಿಕ್ಕಿರುವುದರಿಂದ ಆ ಪಕ್ಷ ದ ಮುಖಂಡರಿಗೆ ಚುನಾವಣಾ ಪ್ರಚಾರ ಭಾಷಣದಲ್ಲಿ ಏನೂ ಮಾತನಾಡಬೇಕು ಎಂಬುದರ ಬಗ್ಗೆ ಅರಿವಿಲ್ಲದೆ ಮತದಾರರ ಎದುರು ನಗೆಪಾಟಲಿಗೆ ಈಡಾಗುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಎ.ವಿ. ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷೆ ಎ.ಟಿ.ನಾಗರತ್ನ. ಮುಖಂಡರಾದ ದೇವಾನಂದ, ಆರ್‌.ಟಿ.ಗೋಪಾಲ್‌, ಸುರೇಶ್‌ ಸಿಂಗ್‌, ಎಂ.ಬಿ.ಮಂಜುನಾಥ್‌, ಕೃಷ್ಣೋಜಿರಾವ್‌, ಸುಧೀಂದ್ರ ಪೂಜಾರಿ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ