ಆ್ಯಪ್ನಗರ

ಜಾತಿ ವ್ಯವಸ್ಥೆ ಮೀರಿ ಬದುಕಬೇಕಿದೆ: ಕುಮಾರ್‌

12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ವ್ಯವಸ್ಥೆಯನ್ನು ಬಲವಾಗಿ ವಿರೋಧಿಸಿದ್ದು, ಅವರ ಚಿಂತನೆಯ ಸಮಾಜವನ್ನು ನಿರ್ಮಿಸುವಲ್ಲಿ ನಾವುಗಳು ಮುಂದಾಗಬೇಕಿದೆ ಎಂದು ಶಾಸಕ ಕುಮಾರ್‌ ಬಂಗಾರಪ್ಪ ಹೇಳಿದರು.

Vijaya Karnataka 18 Jun 2019, 5:00 am
ಸೊರಬ: 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ವ್ಯವಸ್ಥೆಯನ್ನು ಬಲವಾಗಿ ವಿರೋಧಿಸಿದ್ದು, ಅವರ ಚಿಂತನೆಯ ಸಮಾಜವನ್ನು ನಿರ್ಮಿಸುವಲ್ಲಿ ನಾವುಗಳು ಮುಂದಾಗಬೇಕಿದೆ ಎಂದು ಶಾಸಕ ಕುಮಾರ್‌ ಬಂಗಾರಪ್ಪ ಹೇಳಿದರು.
Vijaya Karnataka Web SMR-17SRBP1


ಪಟ್ಟಣದ ಮುರುಘಾ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸೋಮವಾರ ಏರ್ಪಡಿಸಿದ್ದ ಬಸವ ಜಯಂತಿ, ಹುಣ್ಣಿಮೆ ಹಾಗೂ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಮತ್ತು ನಿರ್ಗಮಿತ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮತನಾಡಿದರು.

ಜಾತಿವ್ಯವಸ್ಥೆ ಮೀರಿ ನಾವೆಲ್ಲರೂ ಒಗ್ಗಟ್ಟಿನಿಂದ ಬದುಕಬೇಕಿದೆ. ನಾಡಿನ ರಾಜಕಾರಣದಲ್ಲಿ ವೀರಶೈವ ಸಮಾಜದ ಪಾತ್ರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಎಸ್‌.ಬಂಗಾರಪ್ಪ ಅವರಿಗೂ ವೀರಶೈವ ಸಮಾಜ ರಾಜಕೀಯ ಶಕ್ತಿ ನೀಡಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ವೀರಶೈವ ಸಮಾಜದ ಜತೆಗೆ ಉಳಿದ ಸಮಾಜಗಳ ಆಶಯವಾಗಿದೆ. ಲಿಂಗಾಯತ ಸಮಾಜದ ಅಭಿವೃದ್ಧಿಗೆ ಒತ್ತು ನೀಡಲು ಬದ್ಧನಾಗಿದ್ದೇನೆ ಎಂದರು.

ಜಡೆ ಹಿರೇಮಠದ ಘನಬಸವ ಅಮರೇಶ್ವರ ಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಸಂಘಜೀವಿಯಾಗಿದ್ದು ಸಮಾಜವನ್ನು ಕಟ್ಟಿ ಬೆಳೆಸುವ ಶಕ್ತಿ ಇದೆ. ವೀರಶೈವ ಸಮಾಜ ಒಗ್ಗಟ್ಟಿನಿಂದ ಸಮಾಜದ ಪ್ರಗತಿಗೆ ಶ್ರಮಿಸಬೇಕು. ಕಲಿಯುಗದಲ್ಲಿ ಸಂಘಟನೆಗೆ ಶಕ್ತಿ ಇದೆ ಎಂದು ಅಂದೇ ಶ್ರೀಕೃಷ್ಣ ಹೇಳಿದ ಮಾತು ಇಂದು ಸತ್ಯವಾಗುತ್ತಿದೆ ಎಂದರು.

ಜಡೆ ಸಂಸ್ಥಾನ ಮಠ, ಪಟ್ಟಣದ ಮುರುಘಾ ಮಠದ ಡಾ.ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿ, ಮೂಡಿಯ ಸದಾಶಿವಾಚಾರ್ಯ ಸ್ವಾಮಿ ಮಾತನಾಡಿದರು. ವೀರಶೈವ ಸಮಾಜದ ಅಧ್ಯಕ್ಷ ಬಸವರಾಜಪ್ಪ ಬಾರಂಗಿ, ಇಂದುಧರ ಒಡೆಯರ್‌, ಕೆ.ಜಿ.ಲೋಲಾಕ್ಷ ಮ್ಮ, ಸಿ.ಶಿವಕುಮಾರ್‌, ನಾಗಪ್ಪ ವಕೀಲ, ಎಂ.ಆರ್‌.ಪಾಟೀಲ್‌, ಜಯಶೀಲಗೌಡ, ದಯಾನಂದಗೌಡ, ರವಿಶಂಕರ್‌, ಗುರುಕುಮಾರ್‌ ಪಾಟೀಲ್‌, ಪುಟ್ಟರಾಜಗೌಡ, ಶಿವಯೋಗಿ, ಮೇಘರಾಜ್‌ಗೌಡ ಮಾವಲಿ, ಎಂ.ಡಿ.ಉಮೇಶ್‌, ವೀರೇಶ್‌ ಮೇಸ್ತ್ರಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ