ಆ್ಯಪ್ನಗರ

ಅರಳಗೋಡು ವ್ಯಾಪ್ತಿ ಇಲಿ ಜ್ವರ ಹತೋಟಿಗೆ ಕ್ರಮ

ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 40 ಜನರ ರಕ್ತಪರೀಕ್ಷೆಯಲ್ಲಿ 30 ಜನರಿಗೆ ಇಲಿ ಜ್ವರ ದೃಢಪಟ್ಟಿತ್ತು. ಸೂಕ್ತ ಶುಶ್ರೂಷೆಯಿಂದ ಅವರೆಲ್ಲರೂ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಮುನಿವೆಂಕಟರಾಜು ಹೇಳಿದರು.

Vijaya Karnataka 1 Jun 2019, 6:39 pm
ಸಾಗರ: ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 40 ಜನರ ರಕ್ತಪರೀಕ್ಷೆಯಲ್ಲಿ 30 ಜನರಿಗೆ ಇಲಿ ಜ್ವರ ದೃಢಪಟ್ಟಿತ್ತು. ಸೂಕ್ತ ಶುಶ್ರೂಷೆಯಿಂದ ಅವರೆಲ್ಲರೂ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಮುನಿವೆಂಕಟರಾಜು ಹೇಳಿದರು.
Vijaya Karnataka Web take action for for rat fever
ಅರಳಗೋಡು ವ್ಯಾಪ್ತಿ ಇಲಿ ಜ್ವರ ಹತೋಟಿಗೆ ಕ್ರಮ


ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರಕ್ತದ ಮಾದರಿ ಪರೀಕ್ಷೆ ಸಂದರ್ಭದಲ್ಲಿ ರೋಗಿಗಳಿಗೆ ಇರುವ ಸ್ಪಷ್ಟ ರೋಗಲಕ್ಷ ಣಗಳು ಗುರುತಾಗುತ್ತಿದೆ. ಅದಕ್ಕೆ ತಕ್ಷ ಣ ಶುಶ್ರೂಷೆ ನೀಡುವ ಕೆಲಸ ನಡೆಯುತ್ತಿದೆಯಲ್ಲದೆ, ಅರಳಗೋಡು ಸುತ್ತಮುತ್ತಲೂ ಜನರಲ್ಲಿ ಆರೋಗ್ಯ ಸುರಕ್ಷ ತೆಯ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಗ್ರಾಮೀಣ ಭಾಗದ ಜನರಿಗೆ ಈ ಕುರಿತು ಅರಿವು ಮೂಡಿಸಲಾಗಿದ್ದು, ಇಲಿ ಜ್ವರ ಹತೋಟಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಇಲಿ ಜ್ವರದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಒಂದು ಲೀಟರ್‌ಗೆ ಒಂದು ಹೆಲೋಜಿನ್‌ ಮಾತ್ರೆಯನ್ನು ಹಾಕಿ ಅರ್ಧ ಗಂಟೆ ಬಿಟ್ಟು ನೀರನ್ನು ಕುಡಿಯಬಹುದಾಗಿದೆ. ಈ ಬಗ್ಗೆ ವೈದ್ಯಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುತ್ತಿದ್ದಾರೆ. ಕೆಎಫ್‌ಡಿ ಸಂಪೂರ್ಣ ಹತೋಟಿಯಲ್ಲಿದ್ದು 6 ಶಂಕಿತರು ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರೂ ಗುಣಮುಖರಾಗಿದ್ದಾರೆ. ಯಾರೂ ಆತಂಕಪಡುವ ಪ್ರಶ್ನೆ ಇಲ್ಲ ಎಂದಿದ್ದಾರೆ. ಆರೋಗ್ಯ ಇಲಾಖೆಯಿಂದ 50 ಸಾವಿರ ಹೆಲೋಜಿನ್‌ ಮಾತ್ರೆಗಳನ್ನು ನೀಡಲಾಗಿದ್ದು ಮನೆಗಳಿಗೆ ತಲುಪಿಸುವ ಕೆಲಸ ನಡೆದಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ