ಹೊಳೆಹೊನ್ನೂರು: ತಾವು ಓದಿದ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಪ್ರೋತ್ಸಾಹಿಸಿದರೆ ಮಾತ್ರ ಸರಕಾರಿ ಶಾಲೆಗಳು ಉಳಿಯುತ್ತವೆ ಎಂದು ಶ್ರೀಕ್ಷೇತ್ರ ಕೂಡ್ಲಿಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರಿಯ ವಿದ್ಯಾರ್ಥಿ ಹಾಗೂ ಅರ್ಚಕ ಡಿ.ಚಂದ್ರಶೇಖರ ಹೇಳಿದರು.
ಪಟ್ಟಣ ಸಮೀಪದ ಶ್ರೀಕ್ಷೇತ್ರ ಕೂಡ್ಲಿಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಗುರುವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆಯಲ್ಲಿಶಾಲೆಗೆ ಅಗತ್ಯವಾದ ವಸ್ತುಗಳನ್ನು ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ಇತ್ತೀಚೆಗೆ ಅನೇಕ ಖಾಸಗಿ ಶಾಲೆಗಳು ಹುಟ್ಟಿಕೊಂಡಿವೆ. ಜನರು ತಮ್ಮ ಮಕ್ಕಳನ್ನು ಇಂತಹ ಖಾಸಗಿ ಶಾಲೆಗೆ ಸೇರಿಸಿದರೆ ತಮ್ಮ ಪ್ರತಿಷ್ಠೆ ಹೆಚ್ಚುತ್ತದೆ ಎಂದು ಭಾವಿಸಿದ್ದಾರೆ. ಆದರೆ ಶಿಕ್ಷಣ, ಕಲಿಕೆ ಹಾಗೂ ಶಾಲೆಗಳಲ್ಲಿಯಾವುದೇ ವ್ಯತ್ಯಾಸವಿಲ್ಲ ಎಂದರು. ಗ್ರಾಮದ ಸರಕಾರಿ ಶಾಲೆಯಲ್ಲಿಓದಿದ ಹಿರಿಯ ವಿದ್ಯಾರ್ಥಿಗಳಿಂದ ಸೇರಿ ಅಗತ್ಯ ಪರಿಕರಗಳ ದೇಣಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಎಸ್ಡಿಎಂಸಿ ಅಧ್ಯಕ್ಷ ಸುರೇಶ್, ಗ್ರಾ.ಪಂ.ಸದಸ್ಯ ಕೆ.ಟಿ.ಪ್ರಭಾಕರ, ಡಿ.ವೆಂಕಟೇಶ್, ಕೆ.ಕೃಷ್ಣಸ್ವಾಮಿ, ರತ್ನಾ ಕೃಷ್ಣಸ್ವಾಮಿ, ರಾಜಲಕ್ಷ್ಮೇ, ತಮ್ಮಯ್ಯ ಶಾಸ್ತ್ರೀ, ಕೆ.ಆರ್.ಸೋಮಶೇಖರ್, ಕೂಡಲಿ ಶ್ರೀನಿವಾಸ ಅಯ್ಯರ್, ಎಸ್ಡಿಎಂಸಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
-------
ಸರಕಾರಿ ಶಾಲೆಗಳಲ್ಲಿಉತ್ತಮ ಶಿಕ್ಷಣಕ್ಕಾಗಿ ಸರಕಾರ ಪ್ರತಿಭಾವಂತ ಶಿಕ್ಷಕರನ್ನು ನೇಮಿಸಿ ಎಲ್ಲರೀತಿಯ ಸೌಲಭ್ಯ ನೀಡುತ್ತಿದೆ. ಇದನ್ನು ಪೋಷಕರು ಸದುಪಯೋಗ ಮಾಡಿಕೊಳ್ಳಬೇಕು.
-ಡಿ.ಚಂದ್ರಶೇಖರ
ಪಟ್ಟಣ ಸಮೀಪದ ಶ್ರೀಕ್ಷೇತ್ರ ಕೂಡ್ಲಿಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಗುರುವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆಯಲ್ಲಿಶಾಲೆಗೆ ಅಗತ್ಯವಾದ ವಸ್ತುಗಳನ್ನು ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ಇತ್ತೀಚೆಗೆ ಅನೇಕ ಖಾಸಗಿ ಶಾಲೆಗಳು ಹುಟ್ಟಿಕೊಂಡಿವೆ. ಜನರು ತಮ್ಮ ಮಕ್ಕಳನ್ನು ಇಂತಹ ಖಾಸಗಿ ಶಾಲೆಗೆ ಸೇರಿಸಿದರೆ ತಮ್ಮ ಪ್ರತಿಷ್ಠೆ ಹೆಚ್ಚುತ್ತದೆ ಎಂದು ಭಾವಿಸಿದ್ದಾರೆ. ಆದರೆ ಶಿಕ್ಷಣ, ಕಲಿಕೆ ಹಾಗೂ ಶಾಲೆಗಳಲ್ಲಿಯಾವುದೇ ವ್ಯತ್ಯಾಸವಿಲ್ಲ ಎಂದರು. ಗ್ರಾಮದ ಸರಕಾರಿ ಶಾಲೆಯಲ್ಲಿಓದಿದ ಹಿರಿಯ ವಿದ್ಯಾರ್ಥಿಗಳಿಂದ ಸೇರಿ ಅಗತ್ಯ ಪರಿಕರಗಳ ದೇಣಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಎಸ್ಡಿಎಂಸಿ ಅಧ್ಯಕ್ಷ ಸುರೇಶ್, ಗ್ರಾ.ಪಂ.ಸದಸ್ಯ ಕೆ.ಟಿ.ಪ್ರಭಾಕರ, ಡಿ.ವೆಂಕಟೇಶ್, ಕೆ.ಕೃಷ್ಣಸ್ವಾಮಿ, ರತ್ನಾ ಕೃಷ್ಣಸ್ವಾಮಿ, ರಾಜಲಕ್ಷ್ಮೇ, ತಮ್ಮಯ್ಯ ಶಾಸ್ತ್ರೀ, ಕೆ.ಆರ್.ಸೋಮಶೇಖರ್, ಕೂಡಲಿ ಶ್ರೀನಿವಾಸ ಅಯ್ಯರ್, ಎಸ್ಡಿಎಂಸಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
-------
ಸರಕಾರಿ ಶಾಲೆಗಳಲ್ಲಿಉತ್ತಮ ಶಿಕ್ಷಣಕ್ಕಾಗಿ ಸರಕಾರ ಪ್ರತಿಭಾವಂತ ಶಿಕ್ಷಕರನ್ನು ನೇಮಿಸಿ ಎಲ್ಲರೀತಿಯ ಸೌಲಭ್ಯ ನೀಡುತ್ತಿದೆ. ಇದನ್ನು ಪೋಷಕರು ಸದುಪಯೋಗ ಮಾಡಿಕೊಳ್ಳಬೇಕು.
-ಡಿ.ಚಂದ್ರಶೇಖರ