ಆ್ಯಪ್ನಗರ

ಕೆರೆ ಸಂರಕ್ಷಣೆಗೆ ಅಭಿಯಾನ ಕೈಗೊಳ್ಳಿ

ಮತದಾನ ಜಾಗೃತಿಗೆ ಕೈಗೊಂಡ ಅಭಿಯಾನದಂತೆ ಕರೆಗಳ ಸಂರಕ್ಷಣೆಗೂ ನಿರಂತರ ಅಭಿಯಾನ ಮಾಡಬೇಕೆಂದು ಒತ್ತಾಯಿಸಿ ಶುಕ್ರವಾರ ಅಣ್ಣ ಹಜಾರೆ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.

Vijaya Karnataka 4 May 2019, 5:00 am
ಶಿವಮೊಗ್ಗ: ಮತದಾನ ಜಾಗೃತಿಗೆ ಕೈಗೊಂಡ ಅಭಿಯಾನದಂತೆ ಕæರೆಗಳ ಸಂರಕ್ಷಣೆಗೂ ನಿರಂತರ ಅಭಿಯಾನ ಮಾಡಬೇಕೆಂದು ಒತ್ತಾಯಿಸಿ ಶುಕ್ರವಾರ ಅಣ್ಣ ಹಜಾರೆ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
Vijaya Karnataka Web SMR-3GANESH2


ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭ ಜಿಲ್ಲಾಡಳಿತದಿಂದ ಮತದಾನ ಜಾಗೃತಿಗೆ ಕಾರ್ಯಕ್ರಮ ರೂಪಿಸಿದಂತೆ, ಪರಿಸರ ಸಂರಕ್ಷಣೆಗೂ ಹೆಚ್ಚು ಒತ್ತು ನೀಡಬೇಕು. ಪರಿಸರ ಮೊದಲು ನಂತರ ನಾವೆಲ್ಲ ಎಂಬ ಘೋಷಣೆಯೊಂದಿಗೆ ಕೆರೆ ಕಟ್ಟೆಗಳು, ಗಿಡ ಮರಗಳ ಸಂರಕ್ಷಣೆಗೆ ನಿರಂತರ ಜನಜಾಗೃತಿ, ಜನಾಂದೋಲನ ಮೂಡಬೇಕೆಂದು ಆಗ್ರಹಿಸಿದರು.

ದೊಡ್ಡದಾಗಿದ್ದ ನವುಲೆ ಕೆರೆ ಈಗ ಹೊಂಡವಾಗಿದೆ. ಜಿಲ್ಲೆಯಲ್ಲಿ ಇಂತಹ ಎಷ್ಟೋ ಕೆರೆಗಳು ನಾಶವಾಗಿವೆ. ಹಿಂದೆ ಜಿಲ್ಲೆಯಲ್ಲಿ 6500ಕ್ಕೂ ಅಧಿಕ ಕೆರೆಗಳಿದ್ದವು. ಇದರಲ್ಲಿ 119 ಕೆರೆಗಳು ಮಾತ್ರ ಉಳಿದುಕೊಂಡಿವೆ. ಮೋಜು ಮಸ್ತಿ, ಒತ್ತುವರಿಗೆ ಕೆರೆಗಳು ಬಲಿಯಾಗಿವೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಿತಿ ಪ್ರಮುಖರಾದ ಡಾ.ಎನ್‌.ಎಲ್‌.ನಾಯಕ್‌, ಟಿ.ಎಂ.ಅಶೋಕ್‌ ಯಾದವ್‌, ಅಜಯ್‌ ಕುಮಾರ್‌ ಶರ್ಮ, ಭೂಪಾಳಂ ಶಿವಸ್ವಾಮಿ, ಸಹನಾ ರಾವ್‌, ಶೇಖರ್‌ ಗೌಳೇರ್‌, ಜನಮೇಜಿ ರಾವ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ