ಆ್ಯಪ್ನಗರ

ಅರಣ್ಯ ಸಂರಕ್ಷಣೆಗೆ ವಿಶೇಷ ಆಸಕ್ತಿವಹಿಸಿ

ರೈತರ ಬದುಕಿಗೆ ಆಸರೆ ಆಗಿರುವ ಅರಣ್ಯ ಸಂರಕ್ಷಣೆ ಮಾಡಲು ವಿಶೇಷ ಆಸಕ್ತಿವಹಿಸಬೇಕಿದೆ. ಪಶ್ಚಿಮಘಟ್ಟ ಅರಣ್ಯದ ಜೀವ, ಸಸ್ಯ ಸಂಕುಲ ಮನುಕುಲಕ್ಕೆ ಅಗತ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

Vijaya Karnataka 28 Nov 2019, 5:00 am
ತೀರ್ಥಹಳ್ಳಿ : ರೈತರ ಬದುಕಿಗೆ ಆಸರೆ ಆಗಿರುವ ಅರಣ್ಯ ಸಂರಕ್ಷಣೆ ಮಾಡಲು ವಿಶೇಷ ಆಸಕ್ತಿವಹಿಸಬೇಕಿದೆ. ಪಶ್ಚಿಮಘಟ್ಟ ಅರಣ್ಯದ ಜೀವ, ಸಸ್ಯ ಸಂಕುಲ ಮನುಕುಲಕ್ಕೆ ಅಗತ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
Vijaya Karnataka Web take special interest in forest conservation
ಅರಣ್ಯ ಸಂರಕ್ಷಣೆಗೆ ವಿಶೇಷ ಆಸಕ್ತಿವಹಿಸಿ


ತಾಲೂಕಿನ ಗುಡ್ಡೇಕೇರಿ ಕಲ್ಕೋಡು ಆಯುರ್ವೇದ ಔಷಧ ವನದಲ್ಲಿಸೋಮವಾರ ವಿವಿಧ ಸಂಸ್ಥೆಗಳು ಹಮ್ಮಿಕೊಂಡಿದ್ದ ನಾಡುನುಡಿ ಹಬ್ಬ ಸಮಾರಂಭದಲ್ಲಿನಾಟಿ ವೈದ್ಯರು, ಗುಡ್ಡೇಕೇರಿ ಸರಕಾರಿ ಪ್ರೌಢಶಾಲೆಯ ಕ್ರೀಡಾಪಟುಗಳನ್ನು ಸನ್ಮಾನಿಸುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಹಿಂದಿನ ಕಾಲದಲ್ಲಿನಾಟಿ ಔಷಧ ಹೆಚ್ಚು ಬಳಕೆಯಲ್ಲಿತ್ತು ಎಂದರು.

ಆಗುಂಬೆ ಗ್ರಾ.ಪಂ.ಅಧ್ಯಕ್ಷ ಹಸಿರುಮನೆ ನಂದನ್‌ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಹಸಿರುಮನೆ ಮಹಾಬಲೇಶ್‌, ಜಿ.ಪಂ.ಸದಸ್ಯೆ ಭಾರತೀ ಪ್ರಭಾಕರ್‌, ತಾ.ಪಂ. ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ವೀಣಾ ಗಿರೀಶ್‌, ಗೀತಾ ಶೆಟ್ಟಿ, ಕರವೇ ಅಧ್ಯಕ್ಷ ಯಡೂರು ಸುರೇಂದ್ರ, ಗ್ರಾ.ಪಂ.ಸದಸ್ಯರಾದ ಜಯಪ್ರಕಾಶ್‌, ನಾಗರತ್ನ, ಗ್ರಾಮದ ಮುಖಂಡರಾದ ಮಂಜುನಾಥಗೌಡ, ಜಯೇಶ್‌ ಹೆಗ್ಡೆ, ರೋಹಿತ್‌ ಹೆಗ್ಡೆ, ಸುಪ್ರೀತ್‌, ಅಬ್ದುಲ್‌, ಸೀತರಾಮ ಹೆಗ್ಡೆ ಮತ್ತಿತರರು ಇದ್ದರು. ಹಿರಿಯ ವೈದ್ಯ ಡಾ.ಸುಭಾಶ್ಚಂದ್ರ, ಡಾ.ವಿಶ್ವಾಸ್‌ ಸೇರಿದಂತೆ 32 ಜನ ನಾಟಿ ವೈದ್ಯರನ್ನು ಸನ್ಮಾನಿಸಲಾಯಿತು.

----------
ಔಷಧವನಗಳ ನಿರ್ಮಾಣದಿಂದ ನಾಟಿ ವೈದ್ಯರ ಚಿಕಿತ್ಸಾ ಪದ್ಧತಿಗೆ ತುಂಬಾ ಅನುಕೂಲವಾಗಲಿದೆ. ನಾಟಿ ವೈದ್ಯ ಔಷಧ ಪರಿಣಾಮಕಾರಿ ಆಗಿದ್ದು ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಬೇಕಿದೆ. ಆಗುಂಬೆ ಸೇರಿದಂತೆ ಪಶ್ಚಿಮಘಟ್ಟ ಸಾಲಿನ ಪ್ರದೇಶದ ಅರಣ್ಯದಲ್ಲಿಅಪರೂಪದ ನಾಟಿ ಔಷಧ ಸಸ್ಯಗಳಿವೆ.
- ಆರಗ ಜ್ಞಾನೇಂದ್ರ, ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ